ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೆಳಗಾವಿಯ ರಾಜಹಂಸಗಡ ಕೋಟೆ

ರಾಜಹಂಸಗಡ ಕೋಟೆ ಬೆಳಗಾವಿ ಭಾಗ ಕೋಟೆ–ಕೊತ್ತಲಗಳಿಗೆ ಹೆಸರುವಾಸಿ. ಇವುಗಳ ಪೈಕಿ ಬೆಳಗಾವಿ ನಗರದಿಂದ 15 ಕಿ.ಮೀ. ದೂರದಲ್ಲಿರುವ ರಾಜಹಂಸಗಡ ಕೋಟೆ ಗಮನಸೆಳೆಯುತ್ತದೆ. ಎತ್ತರದ ಗುಡ್ಡದಂತಹ ಪ್ರದೇಶದಲ್ಲಿರುವುದು ಇದರ ವಿಶೇಷ. 1674ರಲ್ಲಿ ಮರಾಠರಿಂದ ನಿರ್ಮಾಣವಾದ ಕೋಟೆ ಇದು. ಅಲ್ಲಿರುವ ಬಾವಿಯಲ್ಲಿ ವರ್ಷವಿಡೀ ನೀರು ತುಂಬಿರುತ್ತದೆ. ಇದೊಂದು ವಿಶೇಷ. ವೀಕ್ಷಣಾ ಗೋಪುರ. ಗಟ್ಟಿಮುಟ್ಟಾದ ಗೋಡೆಗಳಿದ್ದು, ಹಿಂದಿನ ಕಾಲದ ವಿಶೇಷ ನಿರ್ಮಾಣ ಕೌಶಲಕ್ಕೆ ಕನ್ನಡಿ ಹಿಡಿದಿದೆ. ‘ಬೆಳಗಾವಿ ನಗರದಲ್ಲಿರುವ ಕೋಟೆ ರಕ್ಷಣೆಗಾಗಿ ಈ ಕೋಟೆಯನ್ನು ನಿರ್ಮಿಸಲಾಗಿತ್ತು. ಶತ್ರುಗಳ ಚಲನ–ವಲನದ ಮೇಲೆ ಇಲ್ಲಿಂದ ನಿಗಾ ಇಡಲಾಗುತ್ತಿತ್ತು’ ಎನ್ನುತ್ತದೆ ಇತಿಹಾಸ. ಬೆಟ್ಟದ ತುದಿಯಲ್ಲಿರುವ ಈ ಕೋಟೆಯನ್ನು ವಿಶೇಷ ವಿನ್ಯಾಸದಲ್ಲಿ ಕಟ್ಟಲಾಗಿದೆ. ಬೇರೆ ಕೋಟೆಗಳಿಗಿಂತ ಭಿನ್ನ. ಕೋಟೆಯ ಆಕಾರ ಗೋವಿನ ಮುಖದಂತಿದೆ. ಮುಖ್ಯದ್ವಾರ ಎರಡು ಗುಮ್ಮಟಗಳ ನಡುವಿದೆ. ಇದು ಹೊರಗೆ ಕಾಣುವುದಿಲ್ಲ. ಶತ್ರುಗಳಿಗೆ ತಕ್ಷಣ ಕೋಟೆ ಕಾಣಬಾರದೆಂದೇ ಈ ರೀತಿ ನಿರ್ಮಿಸಲಾಗಿತ್ತು ಎನ್ನಲಾಗುತ್ತದೆ. ಅಲ್ಲದೆ, ಆನೆಗಳ ಸಹಾಯದಿಂದ ದ್ವಾರದ ಬಾಗಿಲನ್ನು ತೆಗೆಸುವುದಕ್ಕೆ ಆಗುವುದಿಲ್ಲ. ಕಾರಣ, ಪ್ರವೇಶದ್ವಾರದಲ್ಲಿ ಗುಮ್ಮಟಗಳ ಮಧ್ಯೆ ಆನೆ ನಿಲ್ಲುವಷ್ಟು ಸ್ಥಳಾವಕಾಶ ಇಲ್ಲ. ‘ಛತ್ರ‍ಪತಿ ಶಿವಾಜಿ ಮಹಾರಾಜರು ನಿರ್ಮಿಸಿದ ಪ್ರತಿ ಕೋಟೆಗಳಿಗೆ ಮುಖ್ಯದ್ವಾರ ಮಾತ್ರವಲ್ಲದೇ, 1ರಿಂದ 3 ರಹಸ್ಯ ಮಾರ್ಗಗಳಿರುತ್ತವೆ. ಇವು

ಕರ್ನಾಟಕದಲ್ಲಿ ಸಂಗೀತ

ಕರ್ನಾಟದಲ್ಲಿ ಪ್ರದರ್ಶನ ಕಲೆಗಳು ಕರ್ನಾಟಕದಲ್ಲಿ ಸಂಗೀತ ಭಾರತೀಯ ಶಾಸ್ತ್ರೀಯ ಸಂಗೀತವು, ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತ ಎಂಬ ಎರಡು ಪ್ರಕಾರಗಳನ್ನು ಹೊಂದಿದೆ. ಕುತೂಹಲಕಾರಿ ಅಂಶವೆಂದರೆ ಇವೆರಡೂ ಪ್ರಕಾರಗಳು ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವುದು. ತುಂಗಭದ್ರಾ ನದಿಯು ರಾಜ್ಯದಲ್ಲಿ ಹೆಚ್ಚು ಕಡಿಮೆ ಇವೆರಡು (ಪ್ರಕಾರಗಳ) ಗಡಿಯನ್ನು ವಿಭಜಿಸುತ್ತದೆ. ‘ಕರ್ನಾಟಕ ಎಂಬ ಪದ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಪ್ರಚಲಿತವಿರುವ ಸಂಗೀತ ಸಂಪ್ರದಾಯವನ್ನು ಸೂಚಿಸುತ್ತದೆ. ಈ ಸಂಗೀತ ವಿಕಾಸವಾಗುವಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ಸಂಗೀತವು, ಸಾಹಿತ್ಯ ಹಾಗೂ ಇತರೆ ಸೃಜನಶೀಲ ಕಲೆಗಳಂತೆ ಕರ್ನಾಟಕದಲ್ಲಿ ಪ್ರಾಚೀನಕಾಲದಿಂದಲೂ ಕೃಷಿಗೊಳ್ಳುತ್ತ ಬಂದಿದೆ. ಅದು ಇಲ್ಲಿನ ಜನರ ಸಾಮಾಜಿಕ, ಧಾರ್ಮಿಕ ಬದುಕಿನಲ್ಲಿ ಅವಿಭಾಜ್ಯ ಭಾಗವಾಗಿ ಬಂದಿದೆ. ಸಂಗೀತ ಪಠ್ಯಗಳು ಸಾಮಾನ್ಯವಾಗಿ ಪ್ರಾಚೀನ ಸಂಗೀತ ಸಿದ್ಧಾಂತಕಾರರನ್ನು ಹೆಸರಿಸುತ್ತವೆಯೇ ವಿನಃ ಸಂಗೀತದ ಪರಿಕಲ್ಪನೆಗೆ ಒಂದು ಸುಸ್ವರೂಪ ಕೊಟ್ಟ ಹಾಡುಗಾರರ ಹೆಸರನ್ನು ಹೇಳುವುದಿಲ್ಲ. ಭರತನ ನಾಟ್ಯ ಶಾಸ್ತ್ರವು ಬಹುಶಃ ಸಂಗೀತ ಶಾಸ್ತ್ರ ಕುರಿತ ಅತ್ಯಂತ ಪ್ರಾಚೀನ ಗ್ರಂಥವೆನ್ನಬಹುದಾಗಿದೆ. ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಅದು ಜನಬಳಕೆಯಲ್ಲಿದ್ದಂತೆ ತೋರುತ್ತದೆ. ಈ ಪೈಕಿ ಮತಂಗನ ‘ಬೃಹದ್ದೇಶಿ ಗ್ರಂಥವು ಬಹಳ ಗಮನಾರ್ಹ ಕೃತಿಯಾಗಿ ಕಾಣಬರುತ್ತ

ಕರ್ನಾಟಕದ ವಾಸ್ತುಶಿಲ್ಪ

  ವಾಸ್ತುಶಿಲ್ಪ, ಕಲೆ ಮತ್ತು ಸಂಸ್ಕೃತಿ ಕರ್ನಾಟಕ ಬಹು ವೈವಿಧ್ಯಮಯ ವಾಸ್ತುಶಿಲ್ಪ, ಕಲೆಗಳು ಮತ್ತು ಸಂಸ್ಕೃತಿಗೆ ಪ್ರಖ್ಯಾತಿಯನ್ನು ಪಡೆದುಕೊಂಡ ರಾಜ್ಯ. ಕ್ರಿ. ಪೂ. ಕಾಲದಿಂದ ಆಧುನಿಕ ಕರ್ನಾಟಕದವರೆಗೂ ಅನೇಕ ನಾಗರೀಕಥೆಗಳು, ರಾಜ ಮನೆತನಗಳ ಆಡಳಿತ, ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತ್ತು. ಪ್ರತಿಯೊಂದು ಆಡಳಿತದಲ್ಲೂ ಹೊಸದೊಂದು ಬಗೆಯ ಶಿಲ್ಪಕಲೆ, ವಾಸ್ತುಶಿಲ್ಪ ಹಾಗೂ ಕಲೆ ಮತ್ತು ಸಂಸ್ಕೃತಿ ಉಗಮವಾಯಿತು. ಕರ್ನಾಟಕವು ಈಗ ಕವಿವಾಣಿಯಂತೆ “ ರಸಿಕರ ಕಂಗಳ ಸೆಳೆಯುವ ನೋಟ ”ವನ್ನೂ ಎಲ್ಲೆಲ್ಲೂ ಸಿಂಗರಿಸಿಕೊಂಡಿದೆ. ಬಂಗಾರದ ಬಯಲು ಸೀಮೆ, ನಿತ್ಯ ಹರಿದ್ವರ್ಣ ಪಶ್ಚಿಮಘಟ್ಟಗಳ ಮಲೆನಾಡು, ಮಹಾಸಾಗರಕ್ಕೆ ಹೆಬ್ಬಾಗಿಲಂತಿರುವ ಕರಾವಳಿ, ಇವುಗಳು ನಾಡಿಗೆ ಅವುಗಳದ್ದೆ ವಿಶೇಷ ಕಾಣಿಕೆಯನ್ನು ನೀಡಿವೆ. ಕ್ರಿ.ಪೂ. ಆರಂಭದಲ್ಲಿ ಮೊಹೆಂಜೊ-ದಾರೊ ಮತ್ತು ಹರಪ್ಪ ನಗರಗಳಲ್ಲಿ ವಾಸ್ತುಶಿಲ್ಪವು ಶೀಘ್ರವಾದ ಬೆಳವಣಿಗೆ ಹೊಂದಿತು, ಆದರೆ ದಕ್ಷಿಣದಲ್ಲಿ ಹಳ್ಳಿಗಳ ನಗರೀಕರಣ ಇನ್ನೂ ನಡೆಯದಿದ್ದರೂ ಕಲೆ, ವಿಶೇಷವಾಗಿ ಚಿತ್ರಕಲೆ, ಗಣನೀಯ ಪ್ರಗತಿಯನ್ನು ಸಾಧಿಸಿತ್ತು. ರಾಯಚೂರು ಜಿಲ್ಲೆಯ ಹಿರೆಬೆನಕಲ್‌ನಲ್ಲಿರುವ ಪುರಾತನ ಶಿಲಾ-ವರ್ಣಚಿತ್ರಗಳನ್ನು ನವಶಿಲಾಯುಗದ ಉದಾಹರಣೆಯೆಂದೇ ಉಲ್ಲೇಖಿಸಬಹುದು. ಡಾ. ಎಸ್. ಆರ್. ರಾವ್‌ ಅವರು ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್‌ನ ಉತ್ಖನನದ ಸಮಯದಲ್ಲಿ ಕಂಬದ ಸಭಾಂಗಣ ಮತ್ತು ಗರ್ಭಗೃಹವನ್ನು ಹೊಂದಿರುವ ಆಯತಾಕಾರದ ಇಟ್ಟಿಗೆ ದೇವಾಲಯದ ಅವಶೇಷಗಳನ್

ಕರ್ನಾಟಕದ ರಂಗಭೂಮಿ

ಕರ್ನಾಟಕ ರಂಗಭೂಮಿ ಕನ್ನಡದಲ್ಲಿ ಮೊಟ್ಟಮೊದಲ ನಾಟಕ ರಚನೆಯಾದದ್ದು ೧೭ನೇ ಶತಮಾನದಲ್ಲಿ. ಮೈಸೂರು ಆಸ್ಥಾನ ಕವಿ ಸಿಂಗರಾರ್ಯನು ಬರೆದ ‘ಮಿತ್ರಾವಿಂದ ಗೋವಿಂದ ಎಂಬ ನಾಟಕ. ಶ್ರೀಹರ್ಷ ಸಂಸ್ಕೃತ ಭಾಷೆಯ ‘ರತ್ನಾವಳಿ ನಾಟಕದ ಕನ್ನಡದ ಅವತರಣಿಕೆ ಇದಾಗಿದೆ. ಕರ್ನಾಟಕದಲ್ಲಿ ಸಾಹಿತ್ಯ ಕ್ಷೇತ್ರವು ಬಹಳವಾಗಿ ಸಂಸ್ಕೃತದಿಂದ ಪ್ರಭಾವಿತವಾಗಿದ್ದ ಕಾರಣ, ಸಂಸ್ಕೃತ ನಾಟಕಗಳನ್ನು ಸಾಮಾನ್ಯವಾಗಿ ಎಲ್ಲರೂ ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು. ಅಂದಿನ ಎಲ್ಲ ಕನ್ನಡ ಕವಿಗಳೂ, ಸಂಸ್ಕೃತ ಮಹಾಕಾವ್ಯದ ಮಾದರಿಯಲ್ಲಿಯೇ ತಮ್ಮ ಕಾವ್ಯಗಳನ್ನು ರಚಿಸುತ್ತಿದ್ದರು. ಅವರು ನಾಟಕ ರಚನೆಗಿಂತ ಕಾವ್ಯ ರಚನೆಯಿಂದ ಹೆಮ್ಮೆ ಪಡುತ್ತಿದ್ದರು. ಹೀಗಾಗಿ ೧೭ ನೆಯ ಶತಮಾನದವರೆಗೆ ಮಾತ್ರ ಸಂಸ್ಕೃತ ನಾಟಕಗಳು ಲಭಿಸುತ್ತವೆ. ಕಾಲಕ್ರಮೇಣ ಪ್ರಸಿದ್ಧ ಕನ್ನಡ ಲೇಖಕರು ಕನ್ನಡದಲ್ಲಿ ನಾಟಕಗಳನ್ನು ಬರೆಯಲು ಉಪಕ್ರಮಿಸಿದರು. ಐತಿಹಾಸಿಕ ನೆಲೆಯಲ್ಲಿ ಈ ಪರಿಸ್ಥಿತಿಯನ್ನು ಗಮನಿಸಿದರೆ, ಆ ಕಾಲಕ್ಕೆ ನಾಟಕಗಳನ್ನು ಬರೆಯುವುದು ಅಸಭ್ಯ ಹಾಗೂ ಕೀಳು ಅಭಿರುಚಿಯೆಂದು ಪರಿಗಣಿಸಲಾಗುತ್ತಿತ್ತೆಂದು ಕಂಡುಬರುತ್ತದೆ. ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳು ಮೌಖಿಕ ಸಂಪ್ರದಾಯದ ಮೂಲಕ ಕನ್ನಡ ಜನತಾ ರಂಗಭೂಮಿಗೆ ಲಭ್ಯವಾದಾಗ ಕ್ರಾಂತಿಕಾರಿ ಬದಲಾವಣೆ ಕಂಡುಬಂದಿತು. ಈ ಮಹಾಕಾವ್ಯಗಳ ಕಥೆಗಳೇ ಇಂದಿಗೂ ಕನ್ನಡದ ಬಹುತೇಕ ನಾಟಕಗಳ ಕಥಾವಸ್ತುಗಳಿಗೆ ಮೂಲವಾಗಿವೆ ಎಂಬ ಅಂಶ, ಅಶಿಕ್ಷಿತ ಸಾಮಾನ್ಯ ಜನರ ಮನ

ಕರ್ನಾಟಕದ ವರ್ಣ ಚಿತ್ರಕಲೆ

ಚಿತ್ರಕಲೆ ಕರ್ನಾಟಕದ ಅತ್ಯಂತ ಪ್ರಾಚೀನ ವರ್ಣಚಿತ್ರಗಳು ಕ್ರಿ.ಪೂ. ೨೦೦೦-೧೦೦೦ದ ಪ್ರಾಗಿತಿಹಾಸ ಕಾಲದವಾಗಿವೆ. ಪ್ರಾಗೈತಿಹಾಸಿಕ ಮಾನವ ಸಮುದಾಯವು ವಾಸಿಸುತ್ತಿದ್ದ ಚಾಚು ಬಂಡೆಗಳ ಕೆಳಮುಖದಲ್ಲಿ ಚಿತ್ರಿತವಾದ ಪ್ರಾಣಿಗಳ, ಮಾನವಾಕೃತಿಗಳ ಕಲಾವಶೇಷಗಳನ್ನು ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಮುಂತಾದ ಜಿಲ್ಲಾ ಪ್ರದೇಶಗಳಲ್ಲಿ ಕಾಣಬಹುದು. ಹಿರೇಬೆನಕಲ್, ಪಿಕ್ಲಿಹಾಳ ಮುಂತಾದ ಪ್ರಾಗೈತಿಹಾಸಿಕ ನಿವೇಶನಗಳಲ್ಲಿ ಆಯುಧ ಸಹಿತವಾದ ಬೇಟೆಗಾರರ, ಕುದುರೆ ಸವಾರರ, ಗೂಳಿ ಮುಂತಾದ ಚಿತ್ರಗಳು ಬಂಡೆಗಳ ಮೇಲೆ ಕಾಣಬರುತ್ತವೆ. ಮಣ್ಣಿನ ಮಡಕೆಗಳ ಮೇಲೆ ಬಣ್ಣದಲ್ಲಿ ಚಿತ್ರಿತವಾದ ಅನೇಕ ಆಕೃತಿಗಳು ಬ್ರಹ್ಮಗಿರಿ, ಚಂದ್ರವಳ್ಳಿ, ಹೆಮ್ಮಿಗೆ, ಹಿರೇಬೆನಕಲ್, ಮಸ್ಕಿ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಹೇರಳವಾಗಿ ದೊರಕಿವೆ. ಇತಿಹಾಸ ಕಾಲದಲ್ಲಿನ, ಚಿತ್ರಕಲೆ ಹಾಗೂ ಅದರ ಅಸ್ತಿತ್ವದ ಕುರಿತು ಸಮಕಾಲೀನ ಸಾಹಿತ್ಯ ಮತ್ತು ಶಾಸನಗಳಲ್ಲಿ ಉಲ್ಲೇಖಗಳಿವೆ. ಚಿತ್ರಕಲೆಗೆ (ವರ್ಣಚಿತ್ರ) ಕರ್ನಾಟಕದಲ್ಲಿ ಇದ್ದ ಪ್ರೋತ್ಸಾಹದ ಬಗೆಗಿನ ಮೂಲವನ್ನು ಬಾದಾಮಿ ಚಾಲುಕ್ಯರ ಮಂಗಲೇಶನ ಕಾಲದಲ್ಲಿಯೇ ಕಾಣಬಹುದು. ಬಾದಾಮಿಯ ಮೂರನೇ ಗುಹೆಯಲ್ಲಿ ಅವನ ಕಾಲದ ವರ್ಣಚಿತ್ರಗಳ ಕುರುಹುಗಳನ್ನು ಕಾಣಬಹುದಾಗಿದೆ. ಐತಿಹಾಸಿಕ ಕಾರಣಗಳಿಂದಾಗಿ ಕರ್ನಾಟಕದಲ್ಲಿ ಈ ಪರಂಪರೆಯ ನಿರಂತರತೆಯಲ್ಲಿ ಅಂತರವಿರುವುದು ಕಂಡು ಬರುತ್ತದೆ. ಮೂಡಬಿದರೆಯಲ್ಲಿ ದೊರಕಿರುವ ಹೊಯ್ಸಳರ ಕಾಲದಲ್ಲಿ ನಕ