ವಿಷಯಕ್ಕೆ ಹೋಗಿ

ಕರ್ನಾಟಕದ ರಂಗಭೂಮಿ

ಕರ್ನಾಟಕ ರಂಗಭೂಮಿ

ಕನ್ನಡದಲ್ಲಿ ಮೊಟ್ಟಮೊದಲ ನಾಟಕ ರಚನೆಯಾದದ್ದು ೧೭ನೇ ಶತಮಾನದಲ್ಲಿ. ಮೈಸೂರು ಆಸ್ಥಾನ ಕವಿ ಸಿಂಗರಾರ್ಯನು ಬರೆದ ‘ಮಿತ್ರಾವಿಂದ ಗೋವಿಂದ ಎಂಬ ನಾಟಕ. ಶ್ರೀಹರ್ಷ ಸಂಸ್ಕೃತ ಭಾಷೆಯ ‘ರತ್ನಾವಳಿ ನಾಟಕದ ಕನ್ನಡದ ಅವತರಣಿಕೆ ಇದಾಗಿದೆ. ಕರ್ನಾಟಕದಲ್ಲಿ ಸಾಹಿತ್ಯ ಕ್ಷೇತ್ರವು ಬಹಳವಾಗಿ ಸಂಸ್ಕೃತದಿಂದ ಪ್ರಭಾವಿತವಾಗಿದ್ದ ಕಾರಣ, ಸಂಸ್ಕೃತ ನಾಟಕಗಳನ್ನು ಸಾಮಾನ್ಯವಾಗಿ ಎಲ್ಲರೂ ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು. ಅಂದಿನ ಎಲ್ಲ ಕನ್ನಡ ಕವಿಗಳೂ, ಸಂಸ್ಕೃತ ಮಹಾಕಾವ್ಯದ ಮಾದರಿಯಲ್ಲಿಯೇ ತಮ್ಮ ಕಾವ್ಯಗಳನ್ನು ರಚಿಸುತ್ತಿದ್ದರು. ಅವರು ನಾಟಕ ರಚನೆಗಿಂತ ಕಾವ್ಯ ರಚನೆಯಿಂದ ಹೆಮ್ಮೆ ಪಡುತ್ತಿದ್ದರು. ಹೀಗಾಗಿ ೧೭ ನೆಯ ಶತಮಾನದವರೆಗೆ ಮಾತ್ರ ಸಂಸ್ಕೃತ ನಾಟಕಗಳು ಲಭಿಸುತ್ತವೆ. ಕಾಲಕ್ರಮೇಣ ಪ್ರಸಿದ್ಧ ಕನ್ನಡ ಲೇಖಕರು ಕನ್ನಡದಲ್ಲಿ ನಾಟಕಗಳನ್ನು ಬರೆಯಲು ಉಪಕ್ರಮಿಸಿದರು. ಐತಿಹಾಸಿಕ ನೆಲೆಯಲ್ಲಿ ಈ ಪರಿಸ್ಥಿತಿಯನ್ನು ಗಮನಿಸಿದರೆ, ಆ ಕಾಲಕ್ಕೆ ನಾಟಕಗಳನ್ನು ಬರೆಯುವುದು ಅಸಭ್ಯ ಹಾಗೂ ಕೀಳು ಅಭಿರುಚಿಯೆಂದು ಪರಿಗಣಿಸಲಾಗುತ್ತಿತ್ತೆಂದು ಕಂಡುಬರುತ್ತದೆ.

ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳು ಮೌಖಿಕ ಸಂಪ್ರದಾಯದ ಮೂಲಕ ಕನ್ನಡ ಜನತಾ ರಂಗಭೂಮಿಗೆ ಲಭ್ಯವಾದಾಗ ಕ್ರಾಂತಿಕಾರಿ ಬದಲಾವಣೆ ಕಂಡುಬಂದಿತು. ಈ ಮಹಾಕಾವ್ಯಗಳ ಕಥೆಗಳೇ ಇಂದಿಗೂ ಕನ್ನಡದ ಬಹುತೇಕ ನಾಟಕಗಳ ಕಥಾವಸ್ತುಗಳಿಗೆ ಮೂಲವಾಗಿವೆ ಎಂಬ ಅಂಶ, ಅಶಿಕ್ಷಿತ ಸಾಮಾನ್ಯ ಜನರ ಮನಸ್ಸಿನ ಮೇಲೆ ಈ ಮಹಾಕಾವ್ಯಗಳು ಬೀರಿರುವ ಪ್ರಭಾವ ಎಷ್ಟೆಂಬುದನ್ನು ಸೂಚಿಸುತ್ತದೆ. ನೃತ್ಯ ಮತ್ತು ಸಂಗೀತಗಳು ನಾಟಕಗಳಲ್ಲಿ ಪ್ರಧಾನವಾಗಿದ್ದವು. ಕ್ರಮೇಣ ನಾಟಕಗಳಲ್ಲಿ ದೇವತೆಗಳು ಜನರನ್ನು ಹರಸಲಿ (ದೇವತೆಗಳನ್ನು ಕೊಂಡಾಡುವಂತೆ) ಎಂಬ ಭಾವ ಇರುವ ರೀತಿಯಲ್ಲಿ ನಾಟಕಗಳ ರಚನೆಯಾಯಿತು. ಇದು ಯಕ್ಷಗಾನ, ಬಯಲಾಟ, ಕೃಷ್ಣ ಪಾರಿಜಾತ ಹಾಗೂ ಜನಪದ ರಂಗಭೂಮಿಯ ವಿವಿಧ ಪ್ರಕಾರಗಳು ಉಗಮವಾಗಲು ಕಾರಣವಾಯಿತು. ಬ್ರಿಟಿಷ್‌ ವಸಾಹತು ಶಾಹಿಯೂ ರಂಗಭೂಮಿಯ ಬೆಳವಣಿಗೆಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿತು. ಅವರು ತಮ್ಮೊಡನೆ ರಂಗನಾಟಕ ತಂಡಗಳನ್ನು ಕರೆತಂದರು. ಅವು ಷೇಕ್ಸ್‌ಪಿಯರನ ನಾಟಕ ಮತ್ತು ಇತರೆ ಜನಪ್ರಿಯ ಆಂಗ್ಲ ಭಾಷೆ ನಾಟಕಗಳನ್ನು ಪ್ರದರ್ಶಿಸುತ್ತಿದ್ದವು. ಇವುಗಳಿಂದ ಉತ್ತೇಜನಗೊಂಡು, ಆಂಗ್ಲನಾಟಕಗಳು ಕನ್ನಡಕ್ಕೆ ಅನುವಾದಗೊಂಡು ಯಶಸ್ವಿ ರಂಗಪ್ರದರ್ಶನಗಳಾದವು. ಕಾಲಕ್ರಮೇಣ ಜನರ ಅಭಿರುಚಿಗನುಗುಣವಾಗಿ ನೃತ್ಯ ಮತ್ತು ಸಂಗೀತಗಳನ್ನೊಳಗೊಂಡ ನಾಟಕಗಳನ್ನು ರಚಿಸಲಾಯಿತು. ಪ್ರಾರಂಭದ ದಿನಗಳಲ್ಲಿ ಕೆಳಜಾತಿಯ, ಕೂಲಿ ಕೆಲಸ ಮಾಡುತ್ತಿದ್ದ ಅನಕ್ಷರಸ್ಥರು ರಂಗಭೂಮಿಯ ಮೇಲೆ ನಟಿಸುತ್ತಿದ್ದು. ಇದು ಕ್ರಮೇಣ ಬದಲಾಗಿ, ಎಲ್ಲ ಬಗೆಯ ಜನರು ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. ಅನೇಕ ವಿದ್ಯಾವಂತರು ಕೂಡ ಈ ನಾಟಕಗಳಲ್ಲಿ ಅಭಿನಯಿಸ ತೊಡಗಿದರು. ಕೇವಲ ಪುರುಷರು ಮಾತ್ರ ರಂಗದ ಮೇಲೆ ಬಂದು ನಟಿಸುತ್ತಿದ್ದರು. ಸಮಾಜದಲ್ಲಾದ ಬದಲಾವಣೆಗಳ ಫಲವಾಗಿ ಸ್ತ್ರೀಯರೂ ರಂಗಭೂಮಿಯ ಮೇಲೆ ಬಂದು ಅಭಿನಯಿಸಲು ಪ್ರೋತ್ಸಾಹಿಸಲಾಯಿತು. ವೃತ್ತಿಪರ ನಾಟಕ ಕಂಪನಿಗಳು, ರಾಜ್ಯಾದ್ಯಂತ ಸಂಚರಿಸಿ ಅನೇಕ ಕಡೆ ಯಶಸ್ವಿಯಾಗಿ ನಾಟಕ ಪ್ರದರ್ಶಿಸತೊಡಗಿದವು. ಗುಬ್ಬಿ ನಾಟಕ ಕಂಪನಿಯಂತಹ ಕೆಲವು ಪ್ರಸಿದ್ಧ ಹಳೆಯ ನಾಟಕ ಕಂಪನಿಗಳು ರಾಜ್ಯದಲ್ಲಿ ಪ್ರವಾಸ ಮಾಡುತ್ತ ಯಶಸ್ವಿಯಾಗಿ ಪ್ರದರ್ಶನಗಳನ್ನು ನೀಡುತ್ತಿದ್ದುವು. ಅವು ಸ್ವರಾಜ್ಯದಲ್ಲಷ್ಟೆ ಅಲ್ಲದೆ, ನೆರೆರಾಜ್ಯಗಳಲ್ಲೂ ಪ್ರದರ್ಶನ ನೀಡಿ ಉಚ್ಛ್ರಾಯ ಸ್ಥಿತಿಗೇರಿ ಖ್ಯಾತಿ ಪಡೆದಿದ್ದವು. ಉತ್ತರ ಕರ್ನಾಟಕದಲ್ಲಿನ, ಕೊಣ್ಣೂರು ನಾಟಕ ಕಂಪನಿ, ಶಿರಹಟ್ಟಿ ನಾಟಕ ಕಂಪನಿ, ವಿಶ್ವಗುಣಾದರ್ಶ ನಾಟಕ ಕಂಪೆನಿ ಮೊದಲಾದ ಕಂಪನಿಗಳಲ್ಲಿ, ಯಲ್ಲಮ್ಮ, ಗುರುಸಿದ್ದಪ್ಪ, ವೆಂಕೋಬರಾವ್, ಗರೂಡ ಸದಾಶಿವರಾವ್, ಮಾಸ್ಟರ್ ವಾಮನರಾವ್ ಮುಂತಾದ ಪ್ರತಿಭಾವಂತ ನಟ-ನಟಿಯರೂ, ಸಂಗೀತಗಾರರೂ ಇದ್ದು ಪ್ರಾಮುಖ್ಯತೆ ಪಡೆದಿದ್ದರು.

ದಕ್ಷಿಣ ಕರ್ನಾಟಕದಲ್ಲಿ ವರದಾಚಾರ್, ಗುಬ್ಬಿವೀರಣ್ಣ, ಮಹಮದ್ ಪೀರ್, ಮಳವಳ್ಳಿ ಸುಂದರಮ್ಮ, ಜಿ.ವಿ. ಮಾಲತಮ್ಮ, ಸುಬ್ಬಯ್ಯ ನಾಯ್ಡು, ಲಕ್ಷ್ಮೀಬಾಯಿ ಸುಬ್ಬಯ್ಯನಾಯ್ಡು (ಸಿನಿಮಾಗಳಲ್ಲಿಯೂ ನಟಿಸಿದ್ದರು) ಆರ್.ನಾಗೇಂದ್ರರಾವ್, ಬಿ.ಜಯಮ್ಮ, ಸ್ತ್ರೀ ನಾಟಕ ಕಂಪನಿ ಕಟ್ಟಿ ಬೆಳೆಸಿದ ಆರ್.ನಾಗರತ್ನಮ್ಮ, ಹಿರಣ್ಣಯ್ಯ ಸಿ.ಬಿ. ಮಲ್ಲಪ್ಪ, ಎಂ.ಎನ್.ಗಂಗಾಧರ ರಾಯರು ಮುಂತಾದವರು ಧೀಮಂತ ನಟರಾಗಿದ್ದರು. ದುರ್ಬಲ ಕಥಾವಸ್ತುವಿದ್ದರೂ,ಚುರುಕಾದ ಸಂಭಾಷೆಣೆ ಇಲ್ಲದಿದ್ದರೂ, ರೋಮಾಂಚಕ ನಾಟಕೀಯ ತಿರುವುಗಳಿಲ್ಲದಿದ್ದರೂ, ಈ ಅಭಿನಯ ವಿಶಾರದರು ತಮ್ಮ ಸುಮಧುರ ಕಂಠದಿಂದ ಅಪ್ರಾಸಂಗಿಕ ಹಾಸ್ಯಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದರು. ಹೀಗೆಲ್ಲ ಇದ್ದರೂ ಬೆಳೆಯುತ್ತಿದ್ದ ಸಾಮಾಜಿಕ ಪ್ರಜ್ಞೆಯನ್ನು ಎದುರಿಸಿ ನಿಲ್ಲಲಾಗದೆ ನಾಟಕ ಕಂಪೆನಿಗಳು ವಿಫಲವಾಗಿ, ಮನರಂಜನೆಯ ಮೂಲವಾಗಿ ಬಂದ ಸಿನಿಮಾಗಳ ಎದುರು ಯಶಸ್ವಿಯಾಗಿ ಸ್ಪರ್ಧಿಸಲಾಗದೆ, ವೃತ್ತಿ ರಂಗಭೂಮಿ ಕ್ರಮೇಣ ಕ್ಷೀಣಗೊಂಡಿತು. ಆದರೂ ೧೯ನೇ ಶತಮಾನದ ಕೊನೆಯ ಭಾಗ ಮತ್ತು ೨೦ನೆಯ ಶತಮಾನದ ಆರಂಭಕಾಲವು ವೃತ್ತಿಪರ ರಂಗಭೂಮಿಗೆ ಅತ್ಯುತ್ತಮ ಕಾಲವೆನಿಸಿತ್ತು.

ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ರಾಷ್ಟ್ರೀಯ ಹಬ್ಬಗಳು

ಭಾರತದ ರಾಷ್ಟ್ರೀಯ ಹಬ್ಬಗಳು.Indian National Festivals ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಭಾರತ ದೇಶವು ಜಾತ್ಯತೀತ ದೇಶವಾಗಿದೆ, ಇಲ್ಲಿ ಎಲ್ಲಾ ಜಾತಿ ಧರ್ಮದ ಜನರು ಎಲ್ಲಾ ಟೀಜ್ ಹಬ್ಬವನ್ನು ಬಹಳ ಆಡಂಬರದಿಂದ ಆಚರಿಸುತ್ತಾರೆ. ರಾಖಿ, ದೀಪಾವಳಿ, ದಸರಾ, ಈದ್, ಕ್ರಿಸ್‌ಮಸ್ ಮತ್ತು ಅನೇಕ ಜನರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಭಾರತದ ದೇಶದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ, ಧರ್ಮದ ಪ್ರಕಾರ ವಿಭಿನ್ನ ಹಬ್ಬಗಳಿವೆ. ಆದರೆ ಅಂತಹ ಕೆಲವು ಹಬ್ಬಗಳಿವೆ, ಅವು ಯಾವುದೇ ಜಾತಿಯವರಲ್ಲ, ಆದರೆ ನಮ್ಮ ರಾಷ್ಟ್ರವನ್ನು ನಾವು ರಾಷ್ಟ್ರೀಯ ಹಬ್ಬ ಎಂದು ಕರೆಯುತ್ತೇವೆ. ಭಾರತದ ರಾಷ್ಟ್ರೀಯ ಹಬ್ಬ. (Indian national festivals in Kannada ). 1947 ರಿಂದ ದೇಶದ ಸ್ವಾತಂತ್ರ್ಯದ ನಂತರ, ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಭಾಗವಾದವು, ಅಂದಿನಿಂದ ನಾವು ಅವರನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ. ಈ ಹಬ್ಬವು ನಮ್ಮ ರಾಷ್ಟ್ರೀಯ ಏಕತೆಯನ್ನು ತೋರಿಸುತ್ತದೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು – 1. ಸ್ವಾತಂತ್ರ್ಯ ದಿನ15 ಆಗಸ್ಟ್ 2. ಗಣರಾಜ್ಯೋತ್ಸವ 26 ಜನವರಿ 3. ಗಾಂಧಿ ಜಯಂತಿ 2 ಅಕ್ಟೋಬರ್ ಇದು ರಾಷ್ಟ್ರೀಯ ಹಬ್ಬ, ಇದು ರಾಷ್ಟ್ರೀಯ ರಜಾದಿನವೂ ಆಗಿದೆ. ಇದಲ್ಲದೆ, ಶಿಕ್ಷಕರ ದಿನ, ಮಕ್ಕಳ ದಿನವೂ ರಾಷ್ಟ್ರೀಯ ರಜಾದಿನವಾಗಿದೆ, ಇವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಆಚರಿಸಲಾಗುತ್ತದೆ. ಇದಲ

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ