ವಿಷಯಕ್ಕೆ ಹೋಗಿ

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund

ಕರ್ನಾಟಕದ ನರಗುಂದದ(ಗದಗ ಜಿಲ್ಲೆಯಲ್ಲಿರುವ) ದೊರೆಗಳು 1700ರಲ್ಲಿ ಮೊಘಲರ ದುರಾಕ್ರಮಣ ದ ವಿರುದ್ಧ ಹೋರಾಡುತ್ತ ನರಗುಂದ ಮತ್ತು ರಾಮದುರ್ಗಗಳನ್ನು ಯುದ್ಧದಲ್ಲಿ ಗೆದ್ದು ಸ್ವರಾಜ್ಯ ಸ್ಥಾಪಿಸಿದ್ದರು. ಮುಂದೆ ಅದೇ ವಂಶದ ದೊರೆಗಳು ಟಿಪ್ಪು ಸುಲ್ತಾನ್ ವಿರುದ್ಧವೂ ಯುದ್ದ ನಡೆಸಿ ಗೆಲುವು ಸಾಧಿಸಿ ತಮ್ಮ ಸಂಸ್ಥಾನದ ಸ್ವರಾಜ್ಯವನ್ನು ಉಳಿಸಿಕೊಂಡಿದ್ದರು.
ದಾದಾಜಿ ರಾವ್ ಎಂಬ ನರಗುಂದದ ರಾಜನ ಮಗನಾದ ಭಾಸ್ಕರ್ ರಾವ್ ಭಾವೆ ತನ್ನ 28ನೇ ವಯಸ್ಸಿನಲ್ಲಿ ಅಂದರೆ 1842 ನೇ ಇಸವಿಯಲ್ಲಿ ನರಗುಂದದ ರಾಜನಾದ. ಬಾಬಾ ಸಾಹೇಬ್ ಎಂದು ಜನಪ್ರಿಯರಾಗಿದ್ದ ಈತ ಪರಾಕ್ರಮಿ, ಉದಾರಿ ಆಗಿದ್ದ.
ವಿದೇಶಿಯರಿಂದಲೂ ಮೆಚ್ಚುಗೆ ಪಡೆದಿದ್ದ ವ್ಯಕ್ತಿತ್ವ ಆತನದು. ಜರ್ಮನಿಯಿಂದ ಬಂದಿದ್ದರು ಎಂಬ ವಿದ್ವಾಂಸ ಬಾಬಾ ಸಾಹೇಬನ ಕುರಿತು ‘ಅವರು ಸದ್ಗುಣ ಮತ್ತು ಕೀರ್ತಿ ವಂತರು. ಚಿಕ್ಕಮಕ್ಕಳಿಗೆ ಪಾಲಕನಾಗಿಯೂ ವಿದ್ಯಾವಂತರಿಗೆ ಆಶ್ರಯದಾತನೂ, ಬಡವರಿಗೆ ಉದಾರಿಯೂ ಆಗಿದ್ದವರು’ ಎಂದು ಅಭಿಪ್ರಾಯಪಟ್ಟಿದ್ದರು.
ಬಾಬಾ ಸಾಹೇಬನ ಏಕೈಕ ಪುತ್ರ ಅಕಾಲಿಕ ಮರಣ ಹೊಂದಿದಾಗ ದತ್ತು ಪುತ್ರನನ್ನು ಪಡೆಯಲು ಬ್ರಿಟಿಷ್ ಕಂಪನಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ. ಸತತ ಐದು ವರ್ಷಗಳ ಕಾಲ ಬ್ರಿಟಿಷರ ಜೊತೆ ಅನುಸಂಧಾನ ಮಾಡಿದರೂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ.
ಬ್ರಿಟಿಷ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಬಾಬಾಸಾಹೇಬರ ಹಿತೈಷಿ ಮುಂಡರಗಿ ಭೀಮರಾಯ ರ ಕಡೆಯಿಂದಲೂ ಪ್ರಯತ್ನ ನಡೆಸಿದ್ದ. ಆದರೂ ಅನುಮತಿ ದೊರೆಯಲಿಲ್ಲ (ಮುಂಡರಗಿ ಭೀಮರಾಯರು 1857 ರ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಹುತಾತ್ಮರಾದರು).
ಇದರ ಜೊತೆಗೆ ಬ್ರಿಟಿಷ್ ಅಧಿಕಾರಿ ಮ್ಯಾನ್ಸನ್ ದಕ್ಷಿಣದ ರಾಜರ ರಕ್ಷಣೆಗೆ ಈಸ್ಟ್ ಇಂಡಿಯಾ ಕಂಪನಿ ಇರುವುದರಿಂದ ರಾಜರು ತಮ್ಮಲ್ಲಿ ಸಂಗ್ರಹವಿರುವ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕೆಂದು ಫರ್ವನು ಹೊರಡಿಸಿದ. ಬಾಬಾಸಾಹೇಬನೂ ಶಸ್ತ್ರಾಸ್ತ್ರಗಳನ್ನು ಬ್ರಿಟಿಷರಿಗೆ ಒಪ್ಪಿಸಿದ ನಾಟಕವಾಡಿದ.

ಲೆಸ್ಪಿಲ್ ಎಂಬ ಬ್ರಿಟಿಷ್ ಅಧಿಕಾರಿ ಬಾಬಾ ಸಾಹೇಬನ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಧಾರವಾಡಕ್ಕೆ ಹೋಗುತ್ತಿದ್ದಾಗ 1858 ರ ಮೇ 28ರಂದು ಕಾಡಿನಲ್ಲಿ ಬ್ರಿಟಿಷ್ ಅಧಿಕಾರಿಗಳ ಮೇಲೆ ಆಕ್ರಮಣ ಮಾಡಿ ಅವರನ್ನು ಸೋಲಿಸಿ ಮಧ್ಯರಾತ್ರಿಯೇ ಶಸ್ತ್ರಾಸ್ತ್ರಗಳನ್ನೆಲ್ಲ ಅರಮನೆಯ ಶಸ್ತ್ರಗಾರಕ್ಕೆ ವ್ಯವಸ್ಥಿತವಾಗಿ ಸೇರಿಸಿದ. ಈ ಮೂಲಕ ಬಾಬಾಸಾಹೇಬ ಬ್ರಿಟಿಷ್ ಹಿರಿಯ ಅಧಿಕಾರಿ ಮ್ಯಾನ್ ಸನ್ ಆಕ್ರೋಶಕ್ಕೂ ಒಳಗಾದ.
ನರಗುಂದದ ಮೇಲೆ ಯುದ್ಧ ನಡೆಸಿ ಅದನ್ನು ಬ್ರಿಟಿಷ್ ಸರ್ಕಾರದ ಅಧೀನಕ್ಕೆ ತರುವ ಕಾರ್ಯತಂತ್ರವನ್ನು ಮಾನ್ಸನ್ ರೂಪಿಸಿದ. ಆದರೆ ಹಲವು ಬ್ರಿಟಿಷ್ ಅಧಿಕಾರಿಗಳು ಬಾಬಾ ಸಾಹೇಬನ ಮೇಲೆ ಸದಭಿಪ್ರಾಯ ಹೊಂದಿದ್ದರು.
ಹಿಂದೊಮ್ಮೆ ಬ್ರಿಟಿಷ್ ಅಧಿಕಾರಿಯ ಪತ್ನಿ ಯೊಬ್ಬರಿಗೆ ಹಾವು ಕಡಿದು ಸಾವಿನ ಅಂಚಿನಲ್ಲಿದ್ದಾಗ ಬಾಬಾಸಾಹೇಬರ ಪತ್ನಿ ಸಾವಿತ್ರಿ ನಾಟಿ ಔಷಧಿ ನೀಡಿ ಆಕೆಯನ್ನು ಬದುಕಿಸಿದರು. ಹೀಗೆ ಹಲವು ಕಾರಣದಿಂದ ಬ್ರಿಟಿಷ್ ಅಧಿಕಾರಿಗಳಿಗೆ ಬಾಬಾಸಾಹೇಬ್ ಬಗ್ಗೆ ಸದಭಿಪ್ರಾಯ ವಿತ್ತು. ಆದರೆ, ದರ್ಪದ ಅಧಿಕಾರಿ ಮಾನ್ ಸನ್ ರ ಕೋಪವನ್ನು ಶಮನ ಮಾಡಲು ಅವರಿಂದಲೂ ಸಾಧ್ಯವಾಗಲಿಲ್ಲ.
ಮಾನ್ ಸನ್ ನರಗುಂದದ ಮೇಲೆ ಆಕ್ರಮಣ ಮಾಡಲು ಸಕಲ ಸಿದ್ಧತೆ ಮಾಡತೊಡಗಿದ. ಬಾಬಾ ಸಾಹೇಬನ ಮಲತಂದೆ ರಾಮರಾಯನನ್ನು ತನ್ನ ಪಾಳೆಯಕ್ಕೆ ಸೇರಿಸಿಕೊಂಡ. ಇವೆಲ್ಲದರ ಮಾಹಿತಿ ದೊರೆತ ಕೂಡಲೇ ಬಾಬಾಸಾಹೇಬ ಬ್ರಿಟಿಷರ ವಿರುದ್ಧ ಅನಿರೀಕ್ಷಿತ ದಾಳಿ ನಡೆಸಿದ. ಇದರಲ್ಲಿ ಜಯಗಳಿಸಿದ್ದು ಮಾತ್ರವಲ್ಲದೆ ಅಧಿಕಾರಿ ಮಾನ್ ಸನ್ ನನ್ನು ನರಗುಂದದ ಕೋಟೆಯಲ್ಲಿ ಗಲ್ಲಿಗೇರಿಸಿ ಹತ್ಯೆಗೈದ. ಇದರಿಂದ ಬ್ರಿಟಿಷರು ಮತ್ತಷ್ಟು ಕುಪಿತರಾದರು. ಮುಂದೆ ನರಗುಂದ ಸಂಸ್ಥಾನದ ಸೈನ್ಯದಲ್ಲಿದ್ದ ಕೆಲ ದೇಶದ್ರೋಹಿಗಳು ಬ್ರಿಟಿಷರೊಂದಿಗೆ ಕೈ ಜೋಡಿಸಿದರು. ನಂತರ ಶಸ್ತ್ರಾಗಾರದಲ್ಲಿದ್ದ ಮದ್ದುಗುಂಡುಗಳನ್ನು ವ್ಯವಸ್ಥಿತವಾಗಿ ನಿಷ್ಕ್ರಿಯಗೊಳಿಸಿದರು. ಈ ವಿಚಾರ ಬಾಬಾ ಸಾಹೇಬನ ಗಮನಕ್ಕೂ ಬಂತು. ಆದರೆ ಕಿಂಚಿತ್ತೂ ವಿಚಲಿತನಾಗದೆ ಮುಂದೆ ನಡೆಯಲಿರುವ ಘನಘೋರ ಯುದ್ಧಕ್ಕೆ ಸಿದ್ಧತೆ ನಡೆಸಿಕೊಂಡ. ದಕ್ಷಿಣ ಭಾರತದ ಹಲವು ಸಂಸ್ಥಾನಗಳ ಬೆಂಬಲ ಪಡೆದುಕೊಂಡ ಬಾಬಾಸಾಹೇಬ ಮುಂದೆ ಅವರಿಗೆ ತೊಂದರೆಯಾಗಬಾರದೆಂದು ಅವರ ನಡುವೆ ನಡೆದಿದ್ದ ಪತ್ರ ಸಂಭಾಷಣೆ ಗಳನ್ನೆಲ್ಲ ನಾಶಪಡಿಸಿದ.
1858ರ ಜೂನ್ 1 ರಂದು ನರಗುಂದಕ್ಕೆ ಸುಸಜ್ಜಿತವಾದ ಬ್ರಿಟಿಷರ ಸೈನ್ಯ ಮುತ್ತಿಗೆ ಹಾಕಿತು. ಮಾಲಕಮ್ ಎಂಬ ಸೈನ್ಯಾಧಿಕಾರಿ ಮತ್ತು ಕೊಲ್ಲಾಪುರದ ಜೇಕಬ್ ನ ನೇತೃತ್ವದಲ್ಲಿ ಯುದ್ಧ ನಡೆಯಿತು. ಬಳ್ಳಾರಿ ಯಿಂದಲೂ ಸೈನ್ಯದ ತುಕಡಿಯೊಂದು ಬಂದಿತ್ತು. ಸುಸಜ್ಜಿತ ಮತ್ತು ಶಸ್ತ್ರಸಜ್ಜಿತವಾದ ದೊಡ್ಡ ಸೈನ್ಯದ ವಿರುದ್ಧ, ಅಲ್ಪಪ್ರಮಾಣದ ಶಸ್ತ್ರ ಗಳನ್ನಷ್ಟೇ ಹೊಂದಿದ್ದ ಬಾಬಾ ಸಾಹೇಬನ ಚಿಕ್ಕ ಸೈನ್ಯ ವೀರಾವೇಶದಿಂದ ಹೋರಾಡಿತು.
ಕೋಟೆಯ ಬಾಗಿಲನ್ನು ತೆರೆದು ತನ್ನ ಸೇನಾದಿಪತಿ ಯೋಗಿ ರಾವ್ ಭಾವೆ ಯೊಂದಿಗೆ ಯುದ್ಧ ಮಾಡಿದಾಗ ಬ್ರಿಟಿಷ್ ಸೈನ್ಯ ತತ್ತರಿಸಿದರೂ ಗುಂಡೇಟಿನಿಂದ ಯೋಗಿ ರಾವ್ ಭಾವೆ ವೀರಮರಣವನ್ನಪ್ಪಿದ ರು. ನಂತರ ಮತ್ತೆ ಕೋಟೆ ಪ್ರವೇಶಿಸಿ ಸೈನಿಕರಲ್ಲಿ ಹುರುಪು ತುಂಬಿದ ಬಾಬಾಸಾಹೇಬ, ಕೋಟೆಯೊಳಗೆ ಪ್ರವೇಶಿಸಿದ ಬ್ರಿಟಿಷ್ ಸೈನ್ಯದ ವಿರುದ್ಧ ಯುದ್ಧ ನಡೆಸುವುದು ಉಚಿತವಲ್ಲ ವೆಂದು ನಿರ್ಧರಿಸಿ ಹಿತೈಷಿಗಳ, ಅಧಿಕಾರಿಗಳ ಸಲಹೆಯಂತೆ ಕೋಟೆಯ ಗುಪ್ತ ಮಾರ್ಗದಿಂದ ತೋರಗಲ್ ಎಂಬ ಊರಿಗೆ ತಲುಪಿದ.
ಅರ ಮನೆಯನ್ನೆಲ್ಲ ದೋಚಿ ಅಲ್ಲಿನ ಅಪಾರ ಸಂಪತ್ತನ್ನು ಕೊಳ್ಳೆಹೊಡೆದ ಬ್ರಿಟಿಷರು ಬಾಬಾ ಸಾಹೇಬನ ಅಮೂಲ್ಯ ಸಂಸ್ಕೃತ ಪುಸ್ತಕ ಭಂಡಾರವನ್ನು ಸುಟ್ಟು ಹಾಕಿದರಲ್ಲದೇ ಬಾಬಾ ಸಾಹೇಬನ ಸುಳಿವು ನೀಡಿದವರಿಗೆ 10000 ರುಪಾಯಿ ಬಹುಮಾನದ ಘೋಷಣೆ ಮಾಡಿದರು.
ದೇಶದ್ರೋಹಿ ಯೊಬ್ಬ, ಬಾಬಾಸಾಹೇಬ ಕಾಶಾಯ ವಸ್ತ್ರ ಧರಿಸಿ ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಸಿದ್ಧತೆ ನಡೆಸಿರುವ ವಿಷಯ ಮುಟ್ಟಿಸಿದ. ಆದರೆ ಈ ಕೃತ್ಯ ಎಸಗಿದ್ದು ಕೇವಲ ಬಹುಮಾನದ ದುರಾಸೆಗಾಗಿ. ಆತನ ಹೆಸರು ಲಕ್ಷ್ಮಣರಾವ್ ಜಗತಾಪೆ. ಉತ್ತರ ಭಾರತಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಬಾಬಾಸಾಹೇಬನನ್ನು 1858 ಜೂನ್ 2 ರಂದು ಬಂಧಿಸಿದ ಬ್ರಿಟಿಷರು ವಿಚಾರಣೆ ನಡೆಸಿದರು. ಈ ವೇಳೆ ಬ್ರಿಟಿಷರ ವಿರುದ್ಧ ಯುದ್ಧ ನಡೆಸಲು ಬಾಬಾಸಾಹೇಬನಿಗೆ ಸಹಾಯ ಮಾಡಿದ ಸಂಸ್ಥಾನ ದಿ ಶ್ವರರ ಹೆಸರನ್ನು ಬಹಿರಂಗ ಪಡಿಸಿದರೆ ಜೀವದಾನ ಮಾಡುವ ಆಸೆ ತೋರಿಸಿದರು.
ಬ್ರಿಟಿಷರ ಕುತಂತ್ರದ ಒಳಮರ್ಮ ಅರಿತಿದ್ದ ಬಾಬಾಸಾಹೇಬ್ ಇದಕ್ಕೆ ಪ್ರತಿಕ್ರಿಯಿಸಲಿಲ್ಲ. ಕೊನೆಗೆ, 1858ರ ಜೂನ್ 12 ರಂದು ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು. ಬಾಬಾ ಸಾಹೇಬನ ತಾಯಿ ಮತ್ತು ಪತ್ನಿ ಇದಕ್ಕೂ ಮೊದಲೇ ಬ್ರಿಟಿಷರ ದಾಸರಾಗಿರಲು ಇಷ್ಟಪಡದೇ ಮಲಪ್ರಭಾ ನದಿಗೆ ಹಾರಿ ಆತ್ಮಾರ್ಪಣೆ ಮಾಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ರಾಷ್ಟ್ರೀಯ ಹಬ್ಬಗಳು

ಭಾರತದ ರಾಷ್ಟ್ರೀಯ ಹಬ್ಬಗಳು.Indian National Festivals ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಭಾರತ ದೇಶವು ಜಾತ್ಯತೀತ ದೇಶವಾಗಿದೆ, ಇಲ್ಲಿ ಎಲ್ಲಾ ಜಾತಿ ಧರ್ಮದ ಜನರು ಎಲ್ಲಾ ಟೀಜ್ ಹಬ್ಬವನ್ನು ಬಹಳ ಆಡಂಬರದಿಂದ ಆಚರಿಸುತ್ತಾರೆ. ರಾಖಿ, ದೀಪಾವಳಿ, ದಸರಾ, ಈದ್, ಕ್ರಿಸ್‌ಮಸ್ ಮತ್ತು ಅನೇಕ ಜನರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಭಾರತದ ದೇಶದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ, ಧರ್ಮದ ಪ್ರಕಾರ ವಿಭಿನ್ನ ಹಬ್ಬಗಳಿವೆ. ಆದರೆ ಅಂತಹ ಕೆಲವು ಹಬ್ಬಗಳಿವೆ, ಅವು ಯಾವುದೇ ಜಾತಿಯವರಲ್ಲ, ಆದರೆ ನಮ್ಮ ರಾಷ್ಟ್ರವನ್ನು ನಾವು ರಾಷ್ಟ್ರೀಯ ಹಬ್ಬ ಎಂದು ಕರೆಯುತ್ತೇವೆ. ಭಾರತದ ರಾಷ್ಟ್ರೀಯ ಹಬ್ಬ. (Indian national festivals in Kannada ). 1947 ರಿಂದ ದೇಶದ ಸ್ವಾತಂತ್ರ್ಯದ ನಂತರ, ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಭಾಗವಾದವು, ಅಂದಿನಿಂದ ನಾವು ಅವರನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ. ಈ ಹಬ್ಬವು ನಮ್ಮ ರಾಷ್ಟ್ರೀಯ ಏಕತೆಯನ್ನು ತೋರಿಸುತ್ತದೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು – 1. ಸ್ವಾತಂತ್ರ್ಯ ದಿನ15 ಆಗಸ್ಟ್ 2. ಗಣರಾಜ್ಯೋತ್ಸವ 26 ಜನವರಿ 3. ಗಾಂಧಿ ಜಯಂತಿ 2 ಅಕ್ಟೋಬರ್ ಇದು ರಾಷ್ಟ್ರೀಯ ಹಬ್ಬ, ಇದು ರಾಷ್ಟ್ರೀಯ ರಜಾದಿನವೂ ಆಗಿದೆ. ಇದಲ್ಲದೆ, ಶಿಕ್ಷಕರ ದಿನ, ಮಕ್ಕಳ ದಿನವೂ ರಾಷ್ಟ್ರೀಯ ರಜಾದಿನವಾಗಿದೆ, ಇವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಆಚರಿಸಲಾಗುತ್ತದೆ. ಇದಲ

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ