ವಿಷಯಕ್ಕೆ ಹೋಗಿ

ಬಾರಾ ಕಮಾನಿನ ಹಿಂದಿದೆ ಸಾವಿನ ಕಥೆ-ವ್ಯಥೆ

ಬಾರಾ ಕಮಾನ್’… ಇದು 1656 ರಿಂದ 1686 ರವರೆಗೆ ಆಳಿದ ಬಿಜಾಪುರದ ಸುಲ್ತಾನ್ ಅಲಿ ಆದಿಲ್ ಷಾ ಅವರ ಅಪೂರ್ಣ ಸಮಾಧಿ. ಸಮಾಧಿಯ ಸುತ್ತಲೂ ಲಂಬವಾಗಿ ಮತ್ತು ಅಡ್ಡಲಾಗಿ ಒಟ್ಟು ಹನ್ನೆರಡು ಕಮಾನುಗಳಿವೆ. ಇದರ ಬಗ್ಗೆ ಹೆಚ್ಚು ಪರಿಚಯದ ಅಗತ್ಯವಿಲ್ಲ. ಯಾಕೆಂದರೆ ಇದು ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯದ, ದೇಶದ ಪ್ರವಾಸಿಗರ ಆಕರ್ಷಣೆಯಾಗಿದೆ. ಇಂತಹ ಬಾರಾ ಕಮಾನ್ ಬಗ್ಗೆ ಪೂರ್ತಿ ವಿವರ ಇಲ್ಲಿದೆ ನೋಡಿ.
ಸಮಾಧಿಯ ಕೆಲಸ ಅಪೂರ್ಣ

‘ಬಾರಾ ಕಮಾನ್’ ಬಿಜಾಪುರ ನಗರದ ಪ್ರಾಚೀನ ಮತ್ತು ಪ್ರಸಿದ್ಧ ಐತಿಹಾಸಿಕ ಸ್ಮಾರಕವಾಗಿದೆ. ಆದಿಲ್ ಶಾಹಿ ರಾಜವಂಶದ ಅಲಿ ಆದಿಲ್ ಷಾ ಅದ್ಭುತ ವಾಸ್ತುಶಿಲ್ಪವಿರುವ ಸಮಾಧಿಯನ್ನು ನಿರ್ಮಿಸಲು ಬಯಸಿದ್ದನು. ಅಲಿ ಆದಿಲ್ ಷಾ ಸಮಾಧಿಯ ಸುತ್ತಲೂ ಹನ್ನೆರಡು ಕಮಾನುಗಳನ್ನು ಲಂಬವಾಗಿ ಮತ್ತು ಅಡ್ಡಲಾಗಿ ಇಡಬೇಕೆಂದು ಯೋಜಿಸಲಾಗಿತ್ತು. ಆದರೂ, ಕೆಲವು ಕಾರಣಗಳಿಗಾಗಿ ಸಮಾಧಿಯ ಕೆಲಸವು ಅಪೂರ್ಣವಾಗಿ ಉಳಿದಿದೆ. ಕೇವಲ ಎರಡು ಕಮಾನುಗಳನ್ನು ಮಾತ್ರ ಲಂಬವಾಗಿ ಎತ್ತಲಾಯಿತು. ಇತ್ತೀಚಿನ ದಿನಗಳಲ್ಲಿ ಅಡ್ಡಲಾಗಿ ಇರಿಸಲಾಗಿರುವ ಹನ್ನೆರಡು ಕಮಾನುಗಳ ಅವಶೇಷಗಳನ್ನು ಇನ್ನೂ ಕಾಣಬಹುದು. ಈ ಸ್ಥಳವನ್ನು ಭಾರತೀಯ ಪುರಾತತ್ವ ಸಮೀಕ್ಷೆ ನಿರ್ವಹಿಸುತ್ತದೆ.

ಕಮಾನುಗಳು ಅಪೂರ್ಣವಾಗಿದ್ದೇಕೆ?

ಬಾರಾ ಕಮಾನ್ ಅನ್ನು 1672ರಲ್ಲಿ ಅಲಿ ಎರಡನೇ ಆದಿಲ್ ಷಾ ನಿರ್ಮಿಸಿದನು. ಆದರೆ ಬಾರಾ ಕಾಮನ್ ಪೂರ್ಣಗೊಳ್ಳುವ ಮೊದಲು, ಅವನ ಸ್ವಂತ ತಂದೆ ಮುಹಮ್ಮದ್ ಆದಿಲ್ ಶಾ ಕೊಲೆ ಮಾಡಿದನು. ಬಾರಾ ಕಮಾನ್ ನಿರ್ಮಾಣವಾದರೆ, ಗೋಲ್ ಗುಂಬಜ್‌ವಾಸ್ತುಶಿಲ್ಪದ ವೈಭವ ಕಡಿಮೆಯಾಗುತ್ತಿತ್ತು. ಆದ್ದರಿಂದ ಎರಡನೇ ಆದಿಲ್ ಷಾ ತನ್ನ ತಂದೆಯಿಂದ ಕೊಲ್ಲಲ್ಪಟ್ಟನು. ಇದರಿಂದ ಸಮಾಧಿ ಮತ್ತು ಕಮಾನುಗಳು ಅಪೂರ್ಣವಾದವು ಎಂದು ಹೇಳಲಾಗುತ್ತದೆ. ಬಾರಾ ಕಮಾನ್ ಎರಡನೇ ಅಲಿ ಆದಿಲ್ ಶಾ, ಅವನ ಪತ್ನಿ ಚಂದ್ ಬೀಬಿ ಮತ್ತು ಉಪಪತ್ನಿಯರು ಹಾಗೂ ಅವರ ಹೆಣ್ಣುಮಕ್ಕಳ ಸಮಾಧಿಗಳನ್ನು ಒಳಗೊಂಡಿದೆ. ವಿಶೇಷವೆಂದರೆ ಈ ಸ್ಥಳವು ಪ್ರವಾಸಿಗರ ಗಮನವನ್ನು ಸೆಳೆಯಲು ಎಂದಿಗೂ ವಿಫಲವಾಗಿಲ್ಲ.
ಮೊದಲಿನ ಹೆಸರು ಅಲಿ ರೂಜಾ

ಬಾರಾ ಕಮಾನ್ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಅದರ ಕಮಾನುಗಳು. ಅದರ ಔಟ್‘ಲೈನ್ ಸಂಪೂರ್ಣವಾಗಿ ಗೋಥಿಕ್ ಸ್ಟೈಲ್ ನಲ್ಲಿರುವುದನ್ನು ಕಾಣಬಹುದು. ಒಳ ಆವರಣದಲ್ಲಿ ಅಲಿ ಆದಿಲ್ ಷಾ ಸಮಾಧಿ ಇದೆ. ಇಂದಿನ ಬಿಜಾಪುರ ಪಟ್ಟಣದಿಂದ ಒಂದು ಕಿ.ಮೀ. ದೂರದಲ್ಲಿ ತುದಿಯಲ್ಲಿ ನಿಂತಿರುವ ಮುಖ್ಯ ಮಾರುಕಟ್ಟೆಯ ಸಮೀಪದಲ್ಲಿರುವ ಬಾರಾ ಕಾಮನ್ ಅನ್ನು ಅಲಿ ರೋಜಾ ಎಂದೂ ಕರೆಯುತ್ತಾರೆ.

ಗೋಲ್ ಗುಂಬಜ್‌ಗೆ ಪ್ರತಿಸ್ಪರ್ಧಿ!

ವಾಸ್ತುಶಿಲ್ಪಿ ಮಲಿಕ್ ಸಂದಾಲ್ ಆರಂಭದಲ್ಲಿ ಘನ ಗೋಡೆಗಳನ್ನು ಏಕ ಕೇಂದ್ರದಲ್ಲಿ ಕಮಾನುಗಳ ರೂಪದಲ್ಲಿ ಕಟ್ಟಿಸಿದನು. ಒಮ್ಮೆ ಸಂಪೂರ್ಣ ಗೋಡೆ ನಿರ್ಮಾಣವಾದ ನಂತರ, ಒಳಗಿನ ಕಮಾನುಗಳನ್ನು ಕಟ್ಟಲಾಯಿತು. ಆದರೆ ಹೊರಗಿನ ಕಮಾನು ಮಾತ್ರ ಹಾಗೇ ಉಳಿದಿತ್ತು. ಕಲ್ಲುಗಳನ್ನು ಹಿಡಿದಿಡಲು ಕಬ್ಬಿಣದ ಉಂಗುರಗಳನ್ನು ಸಹ ಬಳಸಲಾಗುತ್ತಿತ್ತು. ಅವುಗಳನ್ನು ಒಟ್ಟಿಗೆ ಸಿಮೆಂಟ್ ಮಾಡಲಾಗಿಲ್ಲ. ಒಂದು ವೇಳೆ ಸಮಾಧಿ ಪೂರ್ಣಗೊಂಡಿದ್ದರೆ, ಅದು ಖಂಡಿತವಾಗಿಯೂ ಬಿಜಾಪುರದ ಗೋಲ್ ಗುಂಬಜ್‌ಗೆ ಪ್ರತಿಸ್ಪರ್ಧಿಯಾಗಿರುತ್ತಿತ್ತು.

ಸರಳವಾದ ಗೋರಿಗಳು

ಪ್ರವಾಸಿಗರು ಈ ಸ್ಥಳಕ್ಕೆ ಪ್ರವೇಶಿಸುತ್ತಿದ್ದಂತೆ, ಬೃಹತ್ ಕಮಾನುಗಳನ್ನು ನೋಡಿ ಪ್ರಭಾವಿತನಾದರೆ ಆಶ್ಚರ್ಯಪಡಬೇಕಿಲ್ಲ. ಕಂಬಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದ್ದು, ಎತ್ತರವಾಗಿವೆ. ಈ ಸ್ಮಾರಕವನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದವರ ವಾಸ್ತುಶಿಲ್ಪ ಕೌಶಲ್ಯ ಗಮನಾರ್ಹವಾಗಿದೆ. ಇದು ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದ್ದು, ಅನುಗ್ರಹ, ಸೌಂದರ್ಯ ಮತ್ತು ಸಮೃದ್ಧಿಗೆ ಸಮಾನಾರ್ಥಕವಾಗಿದೆ. ಕಟ್ಟಡಕ್ಕೆ ಮೇಲ್ಛಾವಣಿಯಿಲ್ಲ, ಈ ಮೊದಲೇ ನಿಮಗೆ ಕಟ್ಟಡ ಯಾಕೆ ಅಪೂರ್ಣವಾಯಿತು ಎಂಬ ಬಗ್ಗೆ ತಿಳಿಸಲಾಗಿದೆ . ಕಮಾನುಗಳನ್ನು ಬೃಹತ್ ಕಂಬಗಳು, ದೊಡ್ಡ ಕಲ್ಲುಗಳು ಚೆನ್ನಾಗಿ ಹಿಡಿದಿಟ್ಟುಕೊಂಡು ಬೆಂಬಲಿಸುತ್ತವೆ. ಕಮಾನುಗಳು ಪರಸ್ಪರ ಸಂಪರ್ಕ ಹೊಂದಿದ್ದು, ಯಾವುದೇ ಅಲಂಕಾರ ಮತ್ತು ಮೇಲ್ಭಾಗವಿಲ್ಲದೆ ಗೋರಿಗಳು ಸರಳವಾಗಿವೆ. ಬಾರಾ ಕಮಾನ್ ಮುಂಭಾಗದ ಉದ್ಯಾನವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಇತಿಹಾಸವನ್ನು ಕೆದಕಿದಾಗ ತಂದೆ ಮತ್ತು ಮಗ ಸಮಾಧಿಗಳ ವಿಷಯದಲ್ಲಿ ಇಬ್ಬರೂ ಪರಸ್ಪರರನ್ನು ಮೀರಿಸಲು ಪ್ರಯತ್ನಿಸಿರುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಬಾರಾ ಕಮಾನ್ ಉತ್ತಮ ಫೋಟೋ ಶೂಟ್ ತಾಣವಾಗಿಯೂ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ.ಪ್ರವಾಸಿಗರು ಈ ಸ್ಥಳಕ್ಕೆ ಪ್ರವೇಶಿಸುತ್ತಿದ್ದಂತೆ, ಬೃಹತ್ ಕಮಾನುಗಳನ್ನು ನೋಡಿ ಪ್ರಭಾವಿತನಾದರೆ ಆಶ್ಚರ್ಯಪಡಬೇಕಿಲ್ಲ. ಕಂಬಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದ್ದು, ಎತ್ತರವಾಗಿವೆ. ಈ ಸ್ಮಾರಕವನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದವರ ವಾಸ್ತುಶಿಲ್ಪ ಕೌಶಲ್ಯ ಗಮನಾರ್ಹವಾಗಿದೆ. ಇದು ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದ್ದು, ಅನುಗ್ರಹ, ಸೌಂದರ್ಯ ಮತ್ತು ಸಮೃದ್ಧಿಗೆ ಸಮಾನಾರ್ಥಕವಾಗಿದೆ. ಕಟ್ಟಡಕ್ಕೆ ಮೇಲ್ಛಾವಣಿಯಿಲ್ಲ, ಈ ಮೊದಲೇ ನಿಮಗೆ ಕಟ್ಟಡ ಯಾಕೆ ಅಪೂರ್ಣವಾಯಿತು ಎಂಬ ಬಗ್ಗೆ ತಿಳಿಸಲಾಗಿದೆ . ಕಮಾನುಗಳನ್ನು ಬೃಹತ್ ಕಂಬಗಳು, ದೊಡ್ಡ ಕಲ್ಲುಗಳು ಚೆನ್ನಾಗಿ ಹಿಡಿದಿಟ್ಟುಕೊಂಡು ಬೆಂಬಲಿಸುತ್ತವೆ. ಕಮಾನುಗಳು ಪರಸ್ಪರ ಸಂಪರ್ಕ ಹೊಂದಿದ್ದು, ಯಾವುದೇ ಅಲಂಕಾರ ಮತ್ತು ಮೇಲ್ಭಾಗವಿಲ್ಲದೆ ಗೋರಿಗಳು ಸರಳವಾಗಿವೆ. ಬಾರಾ ಕಮಾನ್ ಮುಂಭಾಗದ ಉದ್ಯಾನವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಇತಿಹಾಸವನ್ನು ಕೆದಕಿದಾಗ ತಂದೆ ಮತ್ತು ಮಗ ಸಮಾಧಿಗಳ ವಿಷಯದಲ್ಲಿ ಇಬ್ಬರೂ ಪರಸ್ಪರರನ್ನು ಮೀರಿಸಲು ಪ್ರಯತ್ನಿಸಿರುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಬಾರಾ ಕಮಾನ್ ಉತ್ತಮ ಫೋಟೋ ಶೂಟ್ ತಾಣವಾಗಿಯೂ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ.(ಕೃಪೆ: ವಿಜಯ ಕರ್ನಾಟಕ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ರಾಷ್ಟ್ರೀಯ ಹಬ್ಬಗಳು

ಭಾರತದ ರಾಷ್ಟ್ರೀಯ ಹಬ್ಬಗಳು.Indian National Festivals ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಭಾರತ ದೇಶವು ಜಾತ್ಯತೀತ ದೇಶವಾಗಿದೆ, ಇಲ್ಲಿ ಎಲ್ಲಾ ಜಾತಿ ಧರ್ಮದ ಜನರು ಎಲ್ಲಾ ಟೀಜ್ ಹಬ್ಬವನ್ನು ಬಹಳ ಆಡಂಬರದಿಂದ ಆಚರಿಸುತ್ತಾರೆ. ರಾಖಿ, ದೀಪಾವಳಿ, ದಸರಾ, ಈದ್, ಕ್ರಿಸ್‌ಮಸ್ ಮತ್ತು ಅನೇಕ ಜನರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಭಾರತದ ದೇಶದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ, ಧರ್ಮದ ಪ್ರಕಾರ ವಿಭಿನ್ನ ಹಬ್ಬಗಳಿವೆ. ಆದರೆ ಅಂತಹ ಕೆಲವು ಹಬ್ಬಗಳಿವೆ, ಅವು ಯಾವುದೇ ಜಾತಿಯವರಲ್ಲ, ಆದರೆ ನಮ್ಮ ರಾಷ್ಟ್ರವನ್ನು ನಾವು ರಾಷ್ಟ್ರೀಯ ಹಬ್ಬ ಎಂದು ಕರೆಯುತ್ತೇವೆ. ಭಾರತದ ರಾಷ್ಟ್ರೀಯ ಹಬ್ಬ. (Indian national festivals in Kannada ). 1947 ರಿಂದ ದೇಶದ ಸ್ವಾತಂತ್ರ್ಯದ ನಂತರ, ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಭಾಗವಾದವು, ಅಂದಿನಿಂದ ನಾವು ಅವರನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ. ಈ ಹಬ್ಬವು ನಮ್ಮ ರಾಷ್ಟ್ರೀಯ ಏಕತೆಯನ್ನು ತೋರಿಸುತ್ತದೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು – 1. ಸ್ವಾತಂತ್ರ್ಯ ದಿನ15 ಆಗಸ್ಟ್ 2. ಗಣರಾಜ್ಯೋತ್ಸವ 26 ಜನವರಿ 3. ಗಾಂಧಿ ಜಯಂತಿ 2 ಅಕ್ಟೋಬರ್ ಇದು ರಾಷ್ಟ್ರೀಯ ಹಬ್ಬ, ಇದು ರಾಷ್ಟ್ರೀಯ ರಜಾದಿನವೂ ಆಗಿದೆ. ಇದಲ್ಲದೆ, ಶಿಕ್ಷಕರ ದಿನ, ಮಕ್ಕಳ ದಿನವೂ ರಾಷ್ಟ್ರೀಯ ರಜಾದಿನವಾಗಿದೆ, ಇವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಆಚರಿಸಲಾಗುತ್ತದೆ. ಇದಲ

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ