ವಿಷಯಕ್ಕೆ ಹೋಗಿ

ಬಾರಾ ಕಮಾನಿನ ಹಿಂದಿದೆ ಸಾವಿನ ಕಥೆ-ವ್ಯಥೆ

ಬಾರಾ ಕಮಾನ್’… ಇದು 1656 ರಿಂದ 1686 ರವರೆಗೆ ಆಳಿದ ಬಿಜಾಪುರದ ಸುಲ್ತಾನ್ ಅಲಿ ಆದಿಲ್ ಷಾ ಅವರ ಅಪೂರ್ಣ ಸಮಾಧಿ. ಸಮಾಧಿಯ ಸುತ್ತಲೂ ಲಂಬವಾಗಿ ಮತ್ತು ಅಡ್ಡಲಾಗಿ ಒಟ್ಟು ಹನ್ನೆರಡು ಕಮಾನುಗಳಿವೆ. ಇದರ ಬಗ್ಗೆ ಹೆಚ್ಚು ಪರಿಚಯದ ಅಗತ್ಯವಿಲ್ಲ. ಯಾಕೆಂದರೆ ಇದು ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯದ, ದೇಶದ ಪ್ರವಾಸಿಗರ ಆಕರ್ಷಣೆಯಾಗಿದೆ. ಇಂತಹ ಬಾರಾ ಕಮಾನ್ ಬಗ್ಗೆ ಪೂರ್ತಿ ವಿವರ ಇಲ್ಲಿದೆ ನೋಡಿ.
ಸಮಾಧಿಯ ಕೆಲಸ ಅಪೂರ್ಣ

‘ಬಾರಾ ಕಮಾನ್’ ಬಿಜಾಪುರ ನಗರದ ಪ್ರಾಚೀನ ಮತ್ತು ಪ್ರಸಿದ್ಧ ಐತಿಹಾಸಿಕ ಸ್ಮಾರಕವಾಗಿದೆ. ಆದಿಲ್ ಶಾಹಿ ರಾಜವಂಶದ ಅಲಿ ಆದಿಲ್ ಷಾ ಅದ್ಭುತ ವಾಸ್ತುಶಿಲ್ಪವಿರುವ ಸಮಾಧಿಯನ್ನು ನಿರ್ಮಿಸಲು ಬಯಸಿದ್ದನು. ಅಲಿ ಆದಿಲ್ ಷಾ ಸಮಾಧಿಯ ಸುತ್ತಲೂ ಹನ್ನೆರಡು ಕಮಾನುಗಳನ್ನು ಲಂಬವಾಗಿ ಮತ್ತು ಅಡ್ಡಲಾಗಿ ಇಡಬೇಕೆಂದು ಯೋಜಿಸಲಾಗಿತ್ತು. ಆದರೂ, ಕೆಲವು ಕಾರಣಗಳಿಗಾಗಿ ಸಮಾಧಿಯ ಕೆಲಸವು ಅಪೂರ್ಣವಾಗಿ ಉಳಿದಿದೆ. ಕೇವಲ ಎರಡು ಕಮಾನುಗಳನ್ನು ಮಾತ್ರ ಲಂಬವಾಗಿ ಎತ್ತಲಾಯಿತು. ಇತ್ತೀಚಿನ ದಿನಗಳಲ್ಲಿ ಅಡ್ಡಲಾಗಿ ಇರಿಸಲಾಗಿರುವ ಹನ್ನೆರಡು ಕಮಾನುಗಳ ಅವಶೇಷಗಳನ್ನು ಇನ್ನೂ ಕಾಣಬಹುದು. ಈ ಸ್ಥಳವನ್ನು ಭಾರತೀಯ ಪುರಾತತ್ವ ಸಮೀಕ್ಷೆ ನಿರ್ವಹಿಸುತ್ತದೆ.

ಕಮಾನುಗಳು ಅಪೂರ್ಣವಾಗಿದ್ದೇಕೆ?

ಬಾರಾ ಕಮಾನ್ ಅನ್ನು 1672ರಲ್ಲಿ ಅಲಿ ಎರಡನೇ ಆದಿಲ್ ಷಾ ನಿರ್ಮಿಸಿದನು. ಆದರೆ ಬಾರಾ ಕಾಮನ್ ಪೂರ್ಣಗೊಳ್ಳುವ ಮೊದಲು, ಅವನ ಸ್ವಂತ ತಂದೆ ಮುಹಮ್ಮದ್ ಆದಿಲ್ ಶಾ ಕೊಲೆ ಮಾಡಿದನು. ಬಾರಾ ಕಮಾನ್ ನಿರ್ಮಾಣವಾದರೆ, ಗೋಲ್ ಗುಂಬಜ್‌ವಾಸ್ತುಶಿಲ್ಪದ ವೈಭವ ಕಡಿಮೆಯಾಗುತ್ತಿತ್ತು. ಆದ್ದರಿಂದ ಎರಡನೇ ಆದಿಲ್ ಷಾ ತನ್ನ ತಂದೆಯಿಂದ ಕೊಲ್ಲಲ್ಪಟ್ಟನು. ಇದರಿಂದ ಸಮಾಧಿ ಮತ್ತು ಕಮಾನುಗಳು ಅಪೂರ್ಣವಾದವು ಎಂದು ಹೇಳಲಾಗುತ್ತದೆ. ಬಾರಾ ಕಮಾನ್ ಎರಡನೇ ಅಲಿ ಆದಿಲ್ ಶಾ, ಅವನ ಪತ್ನಿ ಚಂದ್ ಬೀಬಿ ಮತ್ತು ಉಪಪತ್ನಿಯರು ಹಾಗೂ ಅವರ ಹೆಣ್ಣುಮಕ್ಕಳ ಸಮಾಧಿಗಳನ್ನು ಒಳಗೊಂಡಿದೆ. ವಿಶೇಷವೆಂದರೆ ಈ ಸ್ಥಳವು ಪ್ರವಾಸಿಗರ ಗಮನವನ್ನು ಸೆಳೆಯಲು ಎಂದಿಗೂ ವಿಫಲವಾಗಿಲ್ಲ.
ಮೊದಲಿನ ಹೆಸರು ಅಲಿ ರೂಜಾ

ಬಾರಾ ಕಮಾನ್ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಅದರ ಕಮಾನುಗಳು. ಅದರ ಔಟ್‘ಲೈನ್ ಸಂಪೂರ್ಣವಾಗಿ ಗೋಥಿಕ್ ಸ್ಟೈಲ್ ನಲ್ಲಿರುವುದನ್ನು ಕಾಣಬಹುದು. ಒಳ ಆವರಣದಲ್ಲಿ ಅಲಿ ಆದಿಲ್ ಷಾ ಸಮಾಧಿ ಇದೆ. ಇಂದಿನ ಬಿಜಾಪುರ ಪಟ್ಟಣದಿಂದ ಒಂದು ಕಿ.ಮೀ. ದೂರದಲ್ಲಿ ತುದಿಯಲ್ಲಿ ನಿಂತಿರುವ ಮುಖ್ಯ ಮಾರುಕಟ್ಟೆಯ ಸಮೀಪದಲ್ಲಿರುವ ಬಾರಾ ಕಾಮನ್ ಅನ್ನು ಅಲಿ ರೋಜಾ ಎಂದೂ ಕರೆಯುತ್ತಾರೆ.

ಗೋಲ್ ಗುಂಬಜ್‌ಗೆ ಪ್ರತಿಸ್ಪರ್ಧಿ!

ವಾಸ್ತುಶಿಲ್ಪಿ ಮಲಿಕ್ ಸಂದಾಲ್ ಆರಂಭದಲ್ಲಿ ಘನ ಗೋಡೆಗಳನ್ನು ಏಕ ಕೇಂದ್ರದಲ್ಲಿ ಕಮಾನುಗಳ ರೂಪದಲ್ಲಿ ಕಟ್ಟಿಸಿದನು. ಒಮ್ಮೆ ಸಂಪೂರ್ಣ ಗೋಡೆ ನಿರ್ಮಾಣವಾದ ನಂತರ, ಒಳಗಿನ ಕಮಾನುಗಳನ್ನು ಕಟ್ಟಲಾಯಿತು. ಆದರೆ ಹೊರಗಿನ ಕಮಾನು ಮಾತ್ರ ಹಾಗೇ ಉಳಿದಿತ್ತು. ಕಲ್ಲುಗಳನ್ನು ಹಿಡಿದಿಡಲು ಕಬ್ಬಿಣದ ಉಂಗುರಗಳನ್ನು ಸಹ ಬಳಸಲಾಗುತ್ತಿತ್ತು. ಅವುಗಳನ್ನು ಒಟ್ಟಿಗೆ ಸಿಮೆಂಟ್ ಮಾಡಲಾಗಿಲ್ಲ. ಒಂದು ವೇಳೆ ಸಮಾಧಿ ಪೂರ್ಣಗೊಂಡಿದ್ದರೆ, ಅದು ಖಂಡಿತವಾಗಿಯೂ ಬಿಜಾಪುರದ ಗೋಲ್ ಗುಂಬಜ್‌ಗೆ ಪ್ರತಿಸ್ಪರ್ಧಿಯಾಗಿರುತ್ತಿತ್ತು.

ಸರಳವಾದ ಗೋರಿಗಳು

ಪ್ರವಾಸಿಗರು ಈ ಸ್ಥಳಕ್ಕೆ ಪ್ರವೇಶಿಸುತ್ತಿದ್ದಂತೆ, ಬೃಹತ್ ಕಮಾನುಗಳನ್ನು ನೋಡಿ ಪ್ರಭಾವಿತನಾದರೆ ಆಶ್ಚರ್ಯಪಡಬೇಕಿಲ್ಲ. ಕಂಬಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದ್ದು, ಎತ್ತರವಾಗಿವೆ. ಈ ಸ್ಮಾರಕವನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದವರ ವಾಸ್ತುಶಿಲ್ಪ ಕೌಶಲ್ಯ ಗಮನಾರ್ಹವಾಗಿದೆ. ಇದು ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದ್ದು, ಅನುಗ್ರಹ, ಸೌಂದರ್ಯ ಮತ್ತು ಸಮೃದ್ಧಿಗೆ ಸಮಾನಾರ್ಥಕವಾಗಿದೆ. ಕಟ್ಟಡಕ್ಕೆ ಮೇಲ್ಛಾವಣಿಯಿಲ್ಲ, ಈ ಮೊದಲೇ ನಿಮಗೆ ಕಟ್ಟಡ ಯಾಕೆ ಅಪೂರ್ಣವಾಯಿತು ಎಂಬ ಬಗ್ಗೆ ತಿಳಿಸಲಾಗಿದೆ . ಕಮಾನುಗಳನ್ನು ಬೃಹತ್ ಕಂಬಗಳು, ದೊಡ್ಡ ಕಲ್ಲುಗಳು ಚೆನ್ನಾಗಿ ಹಿಡಿದಿಟ್ಟುಕೊಂಡು ಬೆಂಬಲಿಸುತ್ತವೆ. ಕಮಾನುಗಳು ಪರಸ್ಪರ ಸಂಪರ್ಕ ಹೊಂದಿದ್ದು, ಯಾವುದೇ ಅಲಂಕಾರ ಮತ್ತು ಮೇಲ್ಭಾಗವಿಲ್ಲದೆ ಗೋರಿಗಳು ಸರಳವಾಗಿವೆ. ಬಾರಾ ಕಮಾನ್ ಮುಂಭಾಗದ ಉದ್ಯಾನವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಇತಿಹಾಸವನ್ನು ಕೆದಕಿದಾಗ ತಂದೆ ಮತ್ತು ಮಗ ಸಮಾಧಿಗಳ ವಿಷಯದಲ್ಲಿ ಇಬ್ಬರೂ ಪರಸ್ಪರರನ್ನು ಮೀರಿಸಲು ಪ್ರಯತ್ನಿಸಿರುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಬಾರಾ ಕಮಾನ್ ಉತ್ತಮ ಫೋಟೋ ಶೂಟ್ ತಾಣವಾಗಿಯೂ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ.ಪ್ರವಾಸಿಗರು ಈ ಸ್ಥಳಕ್ಕೆ ಪ್ರವೇಶಿಸುತ್ತಿದ್ದಂತೆ, ಬೃಹತ್ ಕಮಾನುಗಳನ್ನು ನೋಡಿ ಪ್ರಭಾವಿತನಾದರೆ ಆಶ್ಚರ್ಯಪಡಬೇಕಿಲ್ಲ. ಕಂಬಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದ್ದು, ಎತ್ತರವಾಗಿವೆ. ಈ ಸ್ಮಾರಕವನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದವರ ವಾಸ್ತುಶಿಲ್ಪ ಕೌಶಲ್ಯ ಗಮನಾರ್ಹವಾಗಿದೆ. ಇದು ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದ್ದು, ಅನುಗ್ರಹ, ಸೌಂದರ್ಯ ಮತ್ತು ಸಮೃದ್ಧಿಗೆ ಸಮಾನಾರ್ಥಕವಾಗಿದೆ. ಕಟ್ಟಡಕ್ಕೆ ಮೇಲ್ಛಾವಣಿಯಿಲ್ಲ, ಈ ಮೊದಲೇ ನಿಮಗೆ ಕಟ್ಟಡ ಯಾಕೆ ಅಪೂರ್ಣವಾಯಿತು ಎಂಬ ಬಗ್ಗೆ ತಿಳಿಸಲಾಗಿದೆ . ಕಮಾನುಗಳನ್ನು ಬೃಹತ್ ಕಂಬಗಳು, ದೊಡ್ಡ ಕಲ್ಲುಗಳು ಚೆನ್ನಾಗಿ ಹಿಡಿದಿಟ್ಟುಕೊಂಡು ಬೆಂಬಲಿಸುತ್ತವೆ. ಕಮಾನುಗಳು ಪರಸ್ಪರ ಸಂಪರ್ಕ ಹೊಂದಿದ್ದು, ಯಾವುದೇ ಅಲಂಕಾರ ಮತ್ತು ಮೇಲ್ಭಾಗವಿಲ್ಲದೆ ಗೋರಿಗಳು ಸರಳವಾಗಿವೆ. ಬಾರಾ ಕಮಾನ್ ಮುಂಭಾಗದ ಉದ್ಯಾನವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಇತಿಹಾಸವನ್ನು ಕೆದಕಿದಾಗ ತಂದೆ ಮತ್ತು ಮಗ ಸಮಾಧಿಗಳ ವಿಷಯದಲ್ಲಿ ಇಬ್ಬರೂ ಪರಸ್ಪರರನ್ನು ಮೀರಿಸಲು ಪ್ರಯತ್ನಿಸಿರುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಬಾರಾ ಕಮಾನ್ ಉತ್ತಮ ಫೋಟೋ ಶೂಟ್ ತಾಣವಾಗಿಯೂ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ.(ಕೃಪೆ: ವಿಜಯ ಕರ್ನಾಟಕ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೊಳಂಬರ ಇತಿಹಾಸ

ನೊಳಂಬ ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ. ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ. ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...