ವಿಷಯಕ್ಕೆ ಹೋಗಿ

ಕರ್ನಾಟಕದ ಜನಪ್ರಿಯ ಹಬ್ಬಗಳು ಮತ್ತು ಉತ್ಸವಗಳು

ಕರ್ನಾಟಕದ ಜನಪ್ರಿಯ ಹಬ್ಬಗಳು ಮತ್ತು ಉತ್ಸವಗಳು

  

ಕರ್ನಾಟಕವು ಸಾಂಸ್ಕೃತಿಕವಾಗಿ ಶ್ರೀಮಂತ ರಾಜ್ಯವಾಗಿದ್ದು ಪ್ರತಿವರ್ಷವೂ ಹಲವಾರು ಉತ್ಸವಗಳನ್ನು ಆಚರಿಸುತ್ತದೆ. ಈ ಉತ್ಸವಗಳು ಧಾರ್ಮಿಕ ಕೊಡುಗೆಯಾಗಿ ಅಥವಾ ವಿಜಯನಗರ ಸಾಮ್ರಾಜ್ಯ, ಮೌರ್ಯರು, ಚಾಲುಕ್ಯರು ಮುಂತಾದ ವಿವಿಧ ಆಡಳಿತಗಾರರ ಪರಂಪರೆಯಿಂದ ಹುಟ್ಟಿದವು.

ಈ ಸುಂದರ ರಾಜ್ಯದ ಸಂಸ್ಕೃತಿಯನ್ನು ಗುರುತಿಸಲು ಇಲ್ಲಿಯ ಕೆಲವು ಪ್ರಮುಖ ಹಬ್ಬಗಳ ಕಡೆಗೆ ಗಮನ ಹರಿಸೋಣ ಇವುಗಳಲ್ಲಿ ಕೆಲವು ಹಬ್ಬಗಳು ಇಲ್ಲಿ ಮಾತ್ರ ಆಚರಿಸಲ್ಪಡುತ್ತವೆ.

ಕರ್ನಾಟಕವು ಒಂದು ಸುಂದರವಾದ ರಾಜ್ಯವಾಗಿದ್ದು, ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ, ಒಡೆಯರುಗಳು ಮುಂತಾದ ಹಲವು ಪ್ರಬಲ ರಾಜವಂಶಗಳ ಪರಂಪರೆಯನ್ನು ಹೊಂದಿದೆ. ಈ ರಾಜವಂಶಗಳ ಪರಂಪರೆಯು ಶತಮಾನಗಳಿಂದ ನಡೆಯುತ್ತಾ ಬಂದಿರುವುದಾಗಿದ್ದು ಮತ್ತು ಇಲ್ಲಿಯವರೆಗೂ ಆಚರಿಸಲ್ಪಡುತ್ತಿರುವ ಉತ್ಸವಗಳ ರೂಪದಲ್ಲಿ ಅಥವಾ ದೊಡ್ಡ ಹಬ್ಬಗಳ ರೂಪದಲ್ಲಿ ಉಳಿದಿರುವ ಅವಶೇಷಗಳು ಅಥವಾ ಸ್ಮಾರಕಗಳ ರೂಪದಲ್ಲಿ ಕಾಣಬಹುದಾಗಿದೆ.

ಹಂಪಿ, ಪಟ್ಟದಕಲ್ಲು, ಮೈಸೂರು ಮುಂತಾದ ಕರ್ನಾಟಕದ ಹಲವು ಸ್ಥಳಗಳು, ಹಿಂದಿನ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಪರಂಪರೆಯ ಪ್ರಭಾವವನ್ನು ಹೊಂದಿವೆ.ಇವುಗಳು ರಾಜ್ಯದ ಕೆಲವು ಪ್ರಮುಖ ಪ್ರವಾಸೀ ತಾಣಗಳಾಗಿವೆ. ಈ ಸ್ಥಳಗಳಿಗೆ ಭೇಟಿ ನೀಡಬಹುದಾದ ಅತ್ಯುತ್ತಮ ಸಮಯವೆಂದರೆ ಈ ಪ್ರದೇಶಗಳಲ್ಲಿ ನಡೆಯುವ ಪ್ರಮುಖ ಮತ್ತು ವಿಶೇಷ ಉತ್ಸವಗಳ ಸಂಧರ್ಭದಲ್ಲಿ.

ಕರ್ನಾಟಕದಲ್ಲಿ ಆಚರಿಸಲಾಗುವ ಇತರ ಪ್ರಮುಖ ಉತ್ಸವಗಳ ಜೊತೆಗೆ ಈ ಉತ್ಸವಗಳ ಬಗ್ಗೆ ತಿಳಿಯಿರಿ.

ಗೌರಿ ಹಬ್ಬ

ಈ ಹಬ್ಬವನ್ನು ಮುಖ್ಯವಾಗಿ ಕರ್ನಾಟಕದಲ್ಲಿ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತಿದ್ದು ಈ ಹಬ್ಬವು ಗಣೇಶ ಚತುರ್ಥಿ ಹಬ್ಬದ ಮುಂಚಿನ ದಿನ ಆಚರಿಸಲಾಗುತ್ತದೆ. ಗಣೇಶ ದೇವರ ತಾಯಿ ಹಾಗೂ ಶಿವನ ಪತ್ನಿಯಾದ ಗೌರಿ ದೇವಿಯನ್ನು ಪೂಜಿಸುವ ಈ ಹಬ್ಬವನ್ನು ಮದುವೆಯಾದ ಸ್ತ್ರೀಯರಿಂದ ಆಚರಿಸಲಾಗುತ್ತದೆ.

ಈ ಹಬ್ಬದ ದಿನ ಸ್ತ್ರೀಯರು ಗೌರಿಯ ಸಣ್ಣ ಪ್ರತಿಮೆಯನ್ನು ಅಲಂಕಾರ ಮಾಡಿ ಪೂಜಿಸುವುದು ಕಂಡುಬರುತ್ತದೆ. ಇದನ್ನು ವೀಕ್ಷಿಸಲು ಕುಟುಂಬದವರು ಮತ್ತು ನೆರೆಹೊರೆಯವರನ್ನು ಆಹ್ವಾನಿಸುತ್ತಾರೆ.

ಯುಗಾದಿ

ಕಲ್ಯಾಣ್ ಕನುರಿ ಯುಗಾದಿಯು ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಹಿಂದೂಗಳಿಂದ ಆಚರಿಸಲಾಗುತ್ತದೆ. ಚೈತ್ರ ಮಾಸದ ಮೊದಲ ದಿನದಂದು ಹಿಂದೂ ಲಿನಿಸೋಲಾರ್ ಕ್ಯಾಲೆಂಡರ್ ನ ಪ್ರಕಾರ ಈ ಉತ್ಸವ ನಡೆಯುತ್ತದೆ.

ಇದು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ ಅಥವಾ ಮೇ ಸಮಯದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂಗಳಿಗೆ ಹೊಸ ವರ್ಷ; ವಾಸ್ತವವಾಗಿ, ಇದು ಅಕ್ಷರಶಃ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ.

ಈ ಆಚರಣೆಯ ಸಮಯದಲ್ಲಿ ಬಾಗಿಲುಗಳನ್ನು ಮಾವಿನ ಎಲೆಗಳಿಂದ ತೋರಣದಿಂದ ಅಲಂಕರಿಸಲಾಗುತ್ತದೆ . ಮನೆಯ ದ್ವಾರದ ಮುಂದೆ ರೋಮಾಂಚಕವಾದ ಮತ್ತು ಸುಂದರವಾದ ದೊಡ್ಡ ದೊಡ್ಡ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಜೀವನದಲ್ಲಿ ಎಲ್ಲಾ ಸುವಾಸನೆಗಳನ್ನು ಅನುಭವಿಸುವ ಕಾರಣಕ್ಕಾಗಿ ಅದನ್ನು ಪ್ರತಿಬಿಂಬಿಸುವ ಸಲುವಾಗಿ ಸಿಹಿ, ಉಪ್ಪು, ಕಹಿ ಮತ್ತು ಹುಳಿ ಇವೆಲ್ಲವನ್ನು ಹೊಂದಿರುವ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.

ಹಂಪಿ ಉತ್ಸವ

ಹಂಪಿ ಕರ್ನಾಟಕದ ಒಂದು ಪ್ರಸಿದ್ಧ ಐತಿಹಾಸಿಕ ನಗರವಾಗಿದ್ದು, ಇದು ಯುನೆಸ್ಕೋ ವಿಶ್ವ ಪರಂಪರೆ ತಾಣಗಳಾಗಿ ಘೋಷಿಸಲ್ಪಟ್ಟಿದೆ ಮತ್ತು ಇದನ್ನು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾಗಿದೆ.

ಹಂಪಿ ಉತ್ಸವವು ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ನಡೆಯುತ್ತಿರುವ ಒಂದು ವೈಭವೋಪೇತ ಉತ್ಸವವಾಗಿದ್ದು, ಇಲ್ಲಿಯವರೆಗೂ ಮುಂದುವರೆಯುತ್ತಿದೆ. ಇದೊಂದು ಮೂರು ದಿನಗಳ ಕಾಲ ನಡೆಯುವ ಈ ಉತ್ಸವವು ಇಲ್ಲಿಯ ವಾರ್ಷಿಕ ಉತ್ಸವವಾಗಿದೆ.

ಭಾರತದ ಎಲ್ಲೆಡೆಯಿಂದ ಪ್ರಸಿದ್ಧವಾದ ಕಲಾವಿದರು ವಿವಿಧ ಜಾನಪದ ಮತ್ತು ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು, ಅದ್ಭುತ ಸಂಗೀತ ಪ್ರದರ್ಶನಗಳನ್ನು ಮತ್ತು ಇನ್ನೂ ಹೆಚ್ಚಿನದನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಇಲ್ಲಿಯ ಇನ್ನೊಂದು ಆಕರ್ಷಣೆಯೆಂದರೆ ಈ ಸಮಯದಲ್ಲಿ ಸ್ಮಾರಕಗಳನ್ನು ದೀಪಗಳಿಂದ ಅಲಂಕಾರಗೊಳಿಸಲಾಗುತ್ತದೆ ಇದರ ಬೆಳಕು ರಾತ್ರಿಹೊತ್ತಿನಲ್ಲಿ ಸುಂದರವಾಗಿ ಕಾಣುತ್ತದೆ. ಇದು ನೋಡಲು ಯೋಗ್ಯವಾದುದಾಗಿದೆ.

ಕಂಬಳ

ಇದನ್ನು ದಕ್ಷಿಣ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಆಚರಿಸಲಾಗುತ್ತದೆ . ಕಂಬಳವು ಒಂದು ವಾರ್ಷಿಕ ಉತ್ಸವವಾಗಿದ್ದು, ಕೋಣಗಳನ್ನು ಓಟ ಈ ಸಂಧರ್ಭದಲ್ಲಿ ನಡೆಸಲಾಗುತ್ತೆ. ಇದು ನವೆಂಬರ್ ನಿಂದ ಮಾರ್ಚ್ ತಿಂಗಳುಗಳ ಅವಧಿಯಲ್ಲಿ ನಡೆಸಲಾಗುತ್ತದೆ. ದಕ್ಷಿಣ ಕರ್ನಾಟಕದ ಸಣ್ಣ ಪುಟ್ಟ ಹಳ್ಳಿಗಳಲ್ಲಿ ಸುಮಾರು 45 ಕಡೆ ಈ ಓಟವನ್ನು ನಡೆಸಲಾಗುತ್ತದೆ.

ಇದು ಮೂಲತ: ವಾಗಿ ಹಳ್ಳಿ ಜನರ ಮನೋರಂಜನೆಗಾಗಿ ನಡೆಸಲಾಗುತ್ತಿತ್ತು. ಈ ಕಂಬಳದಲ್ಲಿ ಒಬ್ಬ ರೈತನಿಂದ ನಿಯಂತ್ರಿಸಲ್ಪ ಎರಡು ಜೊತೆ ಕೋಣಗಳನ್ನು ನಿಗದಿ ಪಡಿಸಲಾದ ಗದ್ದೆಗಳಲ್ಲಿ ಓಡಿಸಲಾಗುತ್ತದೆ. ಪಂದ್ಯವನ್ನು ಗೆಲ್ಲುವ ರೈತರಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ.

ಮಹಾ ಮಸ್ತಕಾಭಿಷೇಕ

ಜೈನರಿಗೆ ಇದೊಂದು ಪ್ರಮುಖವಾದ ಹಬ್ಬವಾಗಿದ್ದು ಇದನ್ನು ಶ್ರವಣಬೆಳಗೊಳದಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಶ್ರವಣಬೆಳಗೊಳ ಕರ್ನಾಟಕದ ಒಂದು ಸಣ್ಣ ಹಳ್ಳಿಯಾಗಿದ್ದು ಇದು 57 ಅಡಿ ಎತ್ತರದ ಗೋಮೇಟೇಶ್ವರ ಅಥವಾ ಬಾಹುಬಲಿಯ ಪ್ರತಿಮೆಯನ್ನು ಹೊಂದಿದೆ.

ಈ ಉತ್ಸವದ ಸಮಯದಲ್ಲಿ ಸಾವಿರಾರು ಯಾತ್ರಿಕರು, ವಿಶೇಷವಾಗಿ ಜೈನ ಭಕ್ತರು ಈ ಪ್ರದೇಶಕ್ಕೆ ಗುಂಪು ಗುಂಪಾಗಿ ಭೇಟಿ ನೀಡುತ್ತಾರೆ. ರಾಜ್ಯದ ಈ ಉತ್ಸವದ ಸಮಯದಲ್ಲಿ, ಬಾಹುಬಲಿಯ ದೈತ್ಯಾಕಾರದ ಮೂರ್ತಿಯನ್ನು ತೊಳೆದು ನೀರು, ಹಾಲು, ಕಬ್ಬು ರಸ, ಅರಿಶಿನ, ಇತ್ಯಾದಿಗಳೊಂದಿಗೆ ಸ್ನಾನ ಮಾಡಿಸಲಾಗುತ್ತದೆ. 

ಪಟ್ಟದಕಲ್ಲು ನೃತ್ಯೋತ್ಸವ

ಈ ವಾರ್ಷಿಕ ನೃತ್ಯ ಉತ್ಸವವು ಜನವರಿಯಲ್ಲಿ ಪಟ್ಟದಕಲ್ಲು ಎಂಬ ಸಣ್ಣ ಪಟ್ಟಣದಲ್ಲಿ ನಡೆಯುತ್ತದೆ. ಪಟ್ಟದಕಲ್ ಇಲ್ಲಿಯ 7ರಿಂದ 8ನೇ ಶತಮಾನಗಳಷ್ಟು ಹಳೆಯದಾದ ಮಂತ್ರಮುಗ್ದಗೊಳಿಸುವ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇದರ ವಾಸ್ತುಶಿಲ್ಪ ಸೌಂದರ್ಯತೆಯಿಂದಾಗಿ ಇವು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟಿದೆ.

ಈ ಉತ್ಸವದ ಸಮಯದಲ್ಲಿ ಈ ದೇವಾಲಯಗಳ ಮುಂದೆ ದೇಶದೆಲ್ಲೆಡೆಯ ಶಾಸ್ತ್ರೀಯ ನೃತ್ಯ ಕಲಾವಿದರು ಇಲ್ಲಿ ಒಟ್ಟು ಸೇರಿ ತಮ್ಮ ಉತ್ತಮ ನೃತ್ಯ ಪ್ರದರ್ಶನವನ್ನು ಕೊಡುತ್ತಾರೆ. ನೀವು ಶಾಸ್ತ್ರೀಯ ನೃತ್ಯವನ್ನು ಪ್ರೋತ್ಸಾಹಿಸುವವರಾಗಿದ್ದಲ್ಲಿ ಅಥವಾ ಈ ಶಾಸ್ತ್ರೀಯ ನೃತ್ಯದ ವಿವಿಧ ಬಗೆಗಳಾದ ಭರತನಾಟ್ಯ, ಕೂಚುಪುಡಿ, ಕಥಕ್ ಇತ್ಯಾದಿಗಳನ್ನು ನೋಡಲು ಇಚ್ಚಿಸುವವರಾಗಿದ್ದಲ್ಲಿ, ಜನವರಿ ತಿಂಗಳಲ್ಲಿ ಪಟ್ಟದಕಲ್ಲು ಕಡೆಗೆ ನಿಮ್ಮ ಪ್ರವಾಸವನ್ನು ಯೋಜಿಸಿ.

ಮೈಸೂರು ದಸರಾ

ದಸರಾವನ್ನು ದೇಶದ ಎಲ್ಲಾ ಕಡೆ ಆಚರಿಸಿದರೂ ಮೈಸೂರು ದಸರ ಎಲ್ಲಾ ಕಡೆಗಳಿಗಿಂತಲೂ ವಿಭಿನ್ನವಾದುದಾಗಿದೆ. ಇದು 10 ದಿನಗಳ ವಾರ್ಷಿಕ ಉತ್ಸವವಾಗಿದ್ದು, ಇದು ನವರಾತ್ರಿ ಪ್ರಾರಂಭದೊಂದಿಗೆ ಆರಂಭವಾಗುತ್ತದೆ ಮತ್ತು ವಿಜಯದಶಮಿ ದಿನದಂದು ಕೊನೆಗೊಳ್ಳುತ್ತದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ವಿಜಯನಗರ ಸಾಮ್ರಾಜ್ಯದ ಕಾಲದಿಂದಲೇ ದಸರಾವನ್ನು ಸಂಪೂರ್ಣ ವೈಭವದಿಂದ ಆಚರಿಸಲಾಗುತ್ತದೆ.ಈ ಉತ್ಸವದ ಸಮಯದಲ್ಲಿ ನಡೆಯುವ ಕೆಲವು ಆಕರ್ಷಣೆಗಳಲ್ಲಿ ಜಂಬೂ ಸವಾರಿಯಂತಹ ಸಾಂಪ್ರದಾಯಿಕ ಮೆರವಣಿಗೆಯನ್ನು ಮೈಸೂರು ಅರಮನೆಯಲ್ಲಿ ವಿಶೇಷ ದರ್ಬಾರ್ ಇತ್ಯಾದಿಗಳನ್ನು ಒಳಗೊಂಡಿದೆ.

ಈ ಸಮಯದ ಇನ್ನೊಂದು ಆಕರ್ಷಣೆಯೆಂದರೆ ಮೈಸೂರು ಅರಮನೆಯನ್ನು ಸಂಜೆ7 ರಿಂದ ಸಂಜೆ 10ರ ವರೆಗೆ ದಸರದ ಎಲ್ಲಾ ದಿನಗಳಲ್ಲಿ ಸುಮಾರು 100,000 ಬಲ್ಬುಗಳ ಸಹಾಯದಿಂದ ಸುಂದರವಾಗಿ ಬೆಳಗಿಸಿ ಅಲಂಕರಿಸಲಾಗುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್...

Antiquity of Karnataka

Antiquity of Karnataka The Pre-history of Karnataka traced back to paleolithic hand-axe culture. It is also compared favourably with the one that existed in Africa and is quite distinct from the Pre-historic culture that prevailed in North India.The credit for doing early research on ancient Karnataka goes to Robert Bruce-Foote. Many locales of Pre-noteworthy period have been discovered scattered on the stream valleys of Krishna, Tungabhadra, Cauvery, Bhima, Ghataprabha, Malaprabha, Hemavathi, Shimsha, Manjra, Netravati, and Pennar and on their tributaries. The disclosure of powder hills at Kupgal and Kudatini in 1836 by Cuebold (a British officer in Bellary district), made ready for the investigation of Pre-notable examinations in India.   Some of the important sites representing the various stages of Prehistoric culture that prevailed in Karnataka are Hunasagi,Kaladevanahal li, Tegginahalli, Budihal, Piklihal, Kibbanahalli, Kaladgi, Khyad, Nyamati, Nittur, Anagavadi, Balehonnur a...