ವಿಷಯಕ್ಕೆ ಹೋಗಿ

ಭಾರತಿ ಮದಭಾವಿ ಅವರ ನನ್ನೊಳಗಿನ ನಾನು ಕವನ ಸಂಕಲನದ ಕುರಿತು ಡಾ. ವ್ಹಾಯ್.ಎಂ.ಯಾಕೊಳ್ಳಿ ಅವರ ಬರಹ

ಕವಿತೆಯಂದರೆ ಮನದ ಮಾತು.ತನ್ನೊಂದಿಗೆ ತಾನು ಸದಾ ಸ್ಪಂದಿಸುವ ,ತನ್ನ ಭಾವನೆಗೆ ತಾನು ನಿಷ್ಠನಾಗಿರುವ ,ತನ್ನೊಳಗನ್ನು ಬಿಚ್ಚಿ‌ಮಾತನಾಡುಕವಿತೆಯಂದರೆ ಮನದ ಮಾತು.ತನ್ನೊಂದಿಗೆ ತಾನು ಸದಾ ಸ್ಪಂದಿಸುವ ,ತನ್ನ ಭಾವನೆಗೆ ತಾನು ನಿಷ್ಠನಾಗಿರುವ ,ತನ್ನೊಳಗನ್ನು ಬಿಚ್ಚಿ‌ಮಾತನಾಡುವ ಸಂವಾದ.
ಹೀಗಾಗಿ ವರುಷಕ್ಕೆ ಸಾವಿರಾರು ಕವನ ಸಮಕಲನ ಬಂದರು ಪ್ರತಿ ಸಂಕಲನವೂ ಒಂದಿಷ್ಟು ಹೊಸತನ್ನು ,ವಿಶಿಷ್ಟತೆಯನ್ನು ಹೊತ್ತು ತಂದಿರುತ್ತದೆ.ಅದಕ್ಕೆ ಕವಿ ಪಂಪ ಕಾವ್ಯವನ್ನು ಉರಿತು " ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿಗಂಭೀರಂ " ಎಂದದಗದ್ದು.‌ನಮ್ಮ ಹೊರಿಯರು ಕವಿತೆಯನ್ನು  ಉದಧಿ,ಸಮುದ್ರಕ್ಕೆ ಹೋಲೊಸಿದರು.ಕಾರಣ ಸಮುದ್ರ ದ ಪ್ರತಿ ಅಲೆಯೂ ಒಡಲೊಳಗಿಂದ ಬರುವ ಹೊಸಾಲೆ.ಮತ್ತು ನಿತ್ಯ ನೂತನ ಅಲ್ಲಿ ಹಳತೆಂಬುದು ಇಲ್ಲ.

ಗೋಕಾವಿ ನಾಡಿನ ಭರವಸೆಯ ಕವಯಿತ್ರಿ ಶ್ರೀ ಮತಿ ಭಾರತಿ‌ ಮದಭಾವಿಯವರು ಕಾವ್ಯ ಕ್ಷೇತ್ರಕ್ಕೆ ಹೊಸಬರೇನೂ ಅಲ್ಲ.ಸಾಹಿತ್ಯ ಸಂಘಟನೆಯ ಮೂಲಕ ,ಭಾವಯಾನ ' ಎಂಬ ಸಂಘಟನೆಯ ಮೂಲಕ ಪ್ರತಿ ತಿಂಗಳೂ ಅನೃಕ ಸಾಹಿತ್ಯ ಕಾರ್ಯಕ್ರಮ ಮಾಡುತ್ತಾ ಬಂದವರು.  ಅವರು ತಾವು ಮಾತ್ರವಲ್ಲ, ತಮ್ಮ ಸುತ್ತಲಿನ ವರನ್ನು ಸೇರಿಸಿಕೊಂಡು ಸಾಹಿತ್ಯ ಚಟುವಟಿಕೆಯಲ್ಲಿ ನಿತ್ಯ ಕೃಷಿ‌ ಮಾಡುತ್ತ ಬಂದಿದ್ದಾರೆ.
ಸಂಕಲನಕ್ಕೆ ಮುನ್ನುಡಿ ಬರೆದ ಹಿರಿಯ ಸಾಹಿತಿಗಳಾದ ಶ್ರೀ ಚಂದ್ರಶೇಖರ ಅವರು ಗುರುತಿಸಿದಂತೆ ಒಂದು ತಾಲೂಕು ಪ್ರದೇಶದಲ್ಲಿ ಮಹಿಳೆಯರೇ ಸ್ವಂತ ಸಂಘಟನೆ ಕಟ್ಟಿಕೊಂಡು ಸಾಹಿತ್ಯ ಪರ ಕೆಲಸ ಮಾಡುತ್ತಿರುವದು ಗೋಕಾವಿಯಲ್ಲಿ‌ ಮಾತ್ರ ಎನಿಸುತ್ತದೆ.ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವ್ಯಾಪ್ತಿ ಇದಕ್ಕೂ ಮಿಗಿಲಾದುದು.

ನನ್ನೊಳಗಿನ ನಾನು "ಶ್ರೀ ಮತಿ ಭಾರತಿ‌ ಮದಭಾವಿಯವರ ಮೊದಲ ಸಂಕಲನ ಇದರಲ್ಲಿ ೫೧ ಕವಿತೆಗಳಿವೆ. "ನನ್ನೊಳಗಿನ‌ ನಾನು- ತುಂಬ ಚಂದದ ಶೀರ್ಷಿಕೆ. ಕವಿತೆಯಂದರೆ ತನ್ನತ್ವದ ಹುಡುಕಾಟವೇ.ಎಷಟೋ ತನಗರಿಯದಂತೆಯೆ‌ ಕವಿತೆಯಲ್ಲಿ ತನ್ನತ್ವ ಪ್ರಕಟವಾಗಿ ಬಿಟ್ಟಿರುತ್ತದೆ. ಹೀಗಾಗಿ ಪ್ರತಿ ಕವಿ ಯ ಕೆಲಸ ತನ್ನೊಳಗೆ ಹುದುಗಿರುವ ತನ್ನನ್ನು ಹುಡುಕಿ ಹೊರಗೆಳೆಯುವ ಕಾರ್ಯವೇ.ಅದು ಅಂತರಂಗದ ಶೋಧ.ಪ್ರತೊಯೊಬ್ಬರೊಳಗೂ ಒಬ್ನ ಪ್ರಾಮಾಣಿಕಸಾತ್ವಿಕ, ಹೋರಾಟಗಾರ,ಪ್ರೇಮಿ,ಯುವಕ..ತುಂಟ...ಹೀಗೆ ಏನೇನೋ ಆಗಿರುವ ವ್ಯಕ್ತಿ ಇದ್ದೇ ಇರುತ್ತಾನೆ.ನಮ್ಮ ಮುಂದೆ ಕಾಣುವ ದೈಹಿಕ ವ್ಯಕ್ತಿಯ‌ ಒಳಗೆ ಹುದುಗಿರುವ ಹತ್ತಾರು ವ್ಯಕ್ತಿತ್ವಗಳನ್ನು ಕವಿತೆಯ‌ ಮೂಲಕಹುಡುಕುವ ಕಾರ್ಯವನ್ನು ಪ್ರತಿಯೊಬ್ಬ ಕವಿ‌ ಮಾಡಬೇಕಾಗುತ್ತದೆ.ಎಷ್ಟೊ ಸಲ ಬಹಿರಂಗವಾಗಿ ವ್ಯಕ್ತ ಮಾಡಲಾರದ ನೋವು ನಲಿವು ಗಳನ್ನು ಕಾವ್ಯದ ಮೂಲಕ ವ್ಯಕ್ತ ಮಾಡತ್ತಿರುತ್ತಾನೆ ಅದನ್ನೆ ಕವಿ ಕುವೆಂಪು 

ಕವಿಯ ಹಾರದಯವೊಂದು ವೀಣೆ 
ಲೋಕವದನೆ ಮಿಡಿವುದು

ಎಂದಿದ್ದರು. ಈ ಅರ್ಥದಲ್ಲಿ ಸಂಕಲನದ ಶೀರ್ಷಿಕೆಯೆ ಬಹು ಮುಖ್ಯವಾಗಿ ನನಗೆ ಕಂಡಿದೆ.

ಇಡೀ ಸಂಕಲನ ಹೆಣ್ಣಿನ ಮೌನ ನೋವು ನಿರಾಶೆ , ಆಕೆಯ ಕೈಗೂಡದ ಆಸೆಗಳನ್ನು ಅನಾವರಣ ಮಾಡಿವೆ.  ಇಲ್ಲಿನ ವಿಶೇಷ ಹೆಣ್ಣು ಬಾಯಿ ಕಚ್ಚಿ ಹಿಡಿದ,  ತನಗಾದ ನೋವನ್ನು ,ಒಟ್ಟು‌ ಮಹಿಳೆ ಎದುರಿಸುವ ಸಂಕಟವನ್ನು ಮುಕ್ತವಾಗಿ ಹೇಳಿದ್ದು.ಯಾವ ಚರಿತ್ರೆಯ ಪುಸ್ತಕವೂ ಅವಳ ನೋವನ್ನು ಸಂಪೂರ್ಣ ಬಿಡಿಸಿಟ್ಟಿಲ್ಲ.

ಕವನಗಳು, ಕಥೆಗಳು
ವಿಮರ್ಶೆಗಳು 
ಅವಳ ಬದುಕೊಂದು
ಇದೆಲ್ಲ ಮೀರಿದ ಕಾದಂಬರಿ
ಅದೇ ಅವಳ ಮೌನ
ನಾರಿ ಅವಳ ..ಹೆಸರು(ಹೆಣ್ಣಿನ ಮೌನ)

ಅಂದರೆ ಯಾವ ಬರಹ‌ಕೂಡ ಮಹಿಳೆಯ ನೋವು ವಿವರಿಸ ಲು ಸಾದ್ಯವಾಗಿಲ್ಲ.ಅದು ಜನಪದ ಗರತಿ‌ ಗುರುತಿಸಿದಂತೆ ಹಾಡಲ್ಕ ಅವಳ ಒಡಲುರಿ.ಹೆಣ್ಣು ಎಂದರೆ ಏನು ? ಎಂಬ ವ್ಯಖ್ಯಾನವನ್ನು ಪದಗಳಲ್ಲಿ ಹಿಡಿದಿಡುವ ಕವಯಿತ್ರಿ
ಇಟ್ಟಂತೆವಬಾಳಿ
ನಗುಮುಖವ ತೋರುತ
ನೋವನ್ನು ಬದಿಗೆ ಸರಿಸಿ
ನಲಿವನ್ನು‌ಕೈಚಾಚಿ
ಬರಮಾಡಿಕೊಳ್ಳುವ.ಮನೆ ದೀಪ ಬೆಳಗಿಸುವ

ಅವಳಚಿತ್ರವನ್ನು  ಬಿಡಿಸುತ್ತಾರೆ.ಇಷ್ಟೆಲ್ಲ ತ್ಯಾಗ ಮಾಡಿದರೂ ಅವಳೇ ಪ್ರತಿ ಸಲ ಸೋಲವ
ಬೆಕಾಗಿರುವ ಸ್ಥತಿ ಕೋಪ ತರಿಸಿದೆ ಅದಕ್ಕ ಇನ್ನೊಂದು ಕವಿತೆಯಲ್ಲಿ

ಅನುದಿನವು ಅನುಕ್ಷಣವು 
ಅನುರಾಗ ಬಂಧನವು
ಹಸಿರಾಗಿಸುವ ಹೊಣೆಯ
ಬರೀ‌ನನಗೆ ಸೀಮಿತವೇನು?
ನನ್ನೊಲವೆ?

ಎಂಬ ಪ್ರಶ್ನೆ ಇಂದು ನಿನ್ನೆಯದಲ್ಲ.ಸೀತೆಯ ಕಾಲದ್ದೂ ಆಗಿದೆ.ಹೆಣ್ಣು ಕಣ್ಣೀರು ಹಾಕುವದನ್ನು ಕವಿತೆ ಒಪ್ಪುವದಿಲ್ಲ ಅದಕ್ಕೆ ಗಂಗೆ ಗೆ  " ಮರೆತೇಕೆ ಕುಳಿತಿರುವೆ ತಾಯಿ ಗಂಗೆ ಹೆಣ್ಣಿನಾ ಕಂಗಳಲ್ಲಿ? ನಿನ್ನ ಸ್ಥಾನವಿರುವದು ಶಿವನ ಜಡೆಯಲ್ಕಿ ನೆನಪಿರಲಿ" ಎಂದು ವ್ಯಂಗ್ಯವಾಡುತ್ತಾರೆ.ತಲಾ ತಲಾಂತರದಿಂದಲೂ ಕೇವಲ ಹೊಗಳಿಕೆಯ ನಡುವೆ ಮುಳುಗಿಸಿರುವದರ ಬಗೆಗೆ ಅವರಿಗೆ ಕೋಪವಿದೆ.."ಹ್ಯಾಪಿ ಬರ್ತಡೇ‌"ಎಂಬ ಕವಿತೆಯಲ್ಲಿ 

ಆ ಬಿನ್ನಾಣವಿಲ್ಲ ,ಬಿಂಕವಿಲ್ಲ
ಅಳಿಸಿ ಆಗಿರುವೆ ಸಪ್ಪೆ ಸಾರು
ಅತ್ತೆ ಮಾವನ ಆದೇಶಕ್ಕೆ 
ಗಂಡ ಮಕಗಕಳ ಆರ್ಭಟಕ್ಕೆ
ಮರೆತು ಹೋಗಿದೆ
ನನಗೆ ನನ್ನದೆ ಹೆಸರು..

ಹೀಗೆ ತನ್ನ ಹೆಸರನ್ನೂ‌ಮರೆತ ದುಸ್ತಿತಿ ಆಕೆಯದು.ಇಲ್ಲಿನ‌ಕವಿತೆಗಳ ಧನಾತ್ಮಕ ಅಂಶವೆಂದರೆ - ತನ್ನ ಎಲ್ಲ ನೋವಿಗೂ ಹೆದರದ ಸ್ತ್ರೀ- ಅದನ್ನು ಅನುಭವಿಸಿಯೂ - ಅದನ್ನೆಲ್ಲ ಮರೆತು ತನ್ನಂತೆ ನೋವು ಅನುಭವಿಸುವ ಇತರೆ ಜೀವಿಗಳಿಗೆ ಆಸರೆಯಾಗುವ ನಿರ್ಧಾರ ಮಾಡುವದು." ಉಸಿರಾಗಬಯಸುವೆ" ಕವಿತೆಬ

ಉಸಿರಾಗ ಬಯಸುವೆ 
ಉಸಿರಿಲ್ಲದವರಿಗೆ
ನೆಲೆಯಾಗ ಬಯಸುವೆ 
ನೆಲೆ ಇಲ್ಲದವರಿಗೆ
ಎನ್ನುತ್ತಾರೆ.ಹಾಗೆಯೆ ಸ್ತ್ರೀಯನ್ನು ಹೊರ ಹೊರಗೆ ಅನುಕಂಪ ತೋರಿಸಿ ಅವಳನ್ನು Exploit ಮಾಡುತ್ತಲೆ ಬಂದ ಸಮಾಜವನ್ನು ಅವರ‌ ಕವಿತೆ ಧಿಕ್ಕರಿಸುತ್ತದೆ." ಸೋಲುವ ಜಾಯಮಾನ ನನ್ನದಲ್ಲ" ಕವಿತೆ ತುಸು ವಾಚ್ಯವಾಗಿಯೆ ತಾನು ಏನು ಎನ್ನುವದನ್ನು ಬಣ್ಣಿಸುತ್ತ

ಕಣ್ಣೀರು ಹಾಕುತ್ತೇನೆ
ಹಾಗಂತ ಅಸಹಾಯಕ ಳೇನಲ್ಕ
ಇರುವದನ್ನೇಬಹೇಳುತ್ತೇನೆ 
ಯಾರ ಸಾಂತ್ವನವೂ ಬೇಕಿಲ್ಲ
ಪುಟಿದೇಳುವ ಶಕ್ತಿಯೊದೆ
ಹಾಗಂತ ಬಜಾರಿಯೆನಲ್ಲ
ನನ್ನಂತೆ ನಾನು
ಯಾರ ಹೋಲಿಕೆ ನನಗಿಲ್ಲ

ನಾಲ್ಕೇ ನಾಲ್ಕು ಸಾಲುಗಳಲ್ಲಿ ಸ್ತ್ರೀ ಅಸ್ಮಿತೆಯ ಇಡಿ ಚಿತ್ರವನ್ನು ಬಿಡಿಸುತ್ತಾರೆ " ಸಾಂತ್ವನ " ಕವಿತೆಯಲ್ಲಿ.ಸಂಕಲನದ ಒಂದು ಶ್ರೇಷ್ಠ ಕವಿತೆ " ಅಹಲ್ಯೆ" .ಪುರಾಣದ ಕಥೆವೊದನ್ನು  ಹೊಸ ದೃಷ್ಟಿಕೋನದಿಂದ ನೋಡುತ್ತಾದೆ.ಸತ್ಯ ಒಪ್ಪಿಕೊಂಡ ಅಹಲ್ಯೆ ತನ್ನ ಗಂಡನ ರೂಪದಲ್ಲಿ ಬಂದ  ಚಂದ್ರ ,ಚಂದ್ರನೆಂದು ಗೊತ್ತಿದ್ದೇ ಅವನನ್ನು ಸ್ವೀಕರಿಸಿದ್ದು ಎಂಬ ಹೊಸ ನೋಟವ ನ್ನು ಸ್ಪೋಟಿಸುತ್ತದೆ." ಬುದ್ದಿ ಎಚ್ಚರಿಸಿದರೂ ದೇಹ ಕೇಳಲಿಲ್ಲ" ಎಂಬ ಸಾಲುಗಳು ಪುರಾಣದ ಕಥೆಯನ್ಮು ಇನ್ನೊಂದು ನೆಲೆಯಲ್ಲಿ ನೋಡುವ ಸಾಧ್ಯತೆಯನ್ನು ಕಾಣಿಸಿದೆ.ಪರಂಪರೆಯನ್ನು ಧಿಕ್ಕರಿಸುವ ,ವಿಮರ್ಶಿಸುವ ಧೈರ್ಯ ತಾಳಿದೆ.

ಕಲಿಗಾಲಮೋ, ಹಣಕೊಟ್ಟರೆ..ಮೊದಲಾದ ಕವಿತೆಗಳಲ್ಲಿ ತಾಯ್ತನದ ಭಾವನೆಗಳು  ಖುಷಿ, ನೋವುಗಳು ಕವಿತೆಯಾಗಿವೆ.ಮಕ್ಕಳ ಅಗಲಿಕೆ ನೀಡುವ ದುಃಖ ಉಂಟಾಗುವ ನೀರವ ಭಾವಗಳನ್ಮು ವಿವರಿಸಿವೆ. ಭಾವಯಾನ ಅವರೇ ಸ್ನೆಹಿತೆಯರು‌ ಕೂಡಿ ಕಟ್ಟಿದ ಸಂಘಟನೆ.ಅದರ ವಿವಿಧ ವಿಶೇಷತೆಗಳನ್ನು 

ಬದುಕಿನಾ ಕಲ್ಪನೆಯ 
ಭಾವನೆಗಳ ಬೆನ್ನೇರಿ
ಕಾಣುವುದೇ ಭಾವಯಾನ
ಮುಗಿಯದ ಸುಂದರ ಪಯಣ

ಎನ್ನುತ್ತ ಅಲ್ಲಿ-

ಬದುಕಿನಾ ಪಾಠಗಳ ಓದಿಸಿ
ಹೊಸ ಚಿತ್ರ ಅರ್ಥೈಸಸಿ
ಹುಡುಕಾಡಿ ತಡಕಾಡಿ
ಬಗೆ ಬಗೆಯ ಹೊಸ ಭಾಷ್ಯ ಬರೆಯುವದು.

ನಾರಿಯರ ಒಲವು ಒಗ್ಗಟ್ಟು 
ಬತ್ತದಾ ಒರತೆ ಇದು
ಎಂದೆಂದೂ ಸಾಗಿಹುದು
ಮುಗಿಯದಾ ಪಯಣವು

ಇದಕ್ಕೆ ಸಾಕ್ಷಿಯಾಗಿರುವ ಹತ್ತಾರು ಕಾರ್ಯ ಚಟುವಟಿಕೆಗಳು ನಿರಂತರ ನಡೆದಿರುವದು ಕವಿತೆಯನ್ನು ಸಮಕಾಲೀನ ಗೊಳಿಸಿವೆ..
ಸಂಕಲನ ಮಹಿಳೆ ,ಅವಳ ನೋವು ನಲಿವು ನೆನಪುಗಳ ಭಾವಯಾನವೇ ! ಬಸವಣ್ಣನವರ ಕುರಿತು, ಕಾರ್ಮಿಕ ದಿನಾಚರಣೆ ಇಂತಹ ಒಂದೆರಡು ಕವಿತೆ ಬಿಟ್ಟರೆ ಇಡಿ ಸಂಕಲನ ನೆನಪಿನ ಭಾವಯಾನವೇ ಆಗಿದೆ. ಶ್ರೀ ಮತಿ‌ ಮದಭಾವಿಯವರು‌ ಈಚೆಗೆ ಎರಡನೆಯ ಸಂಕಲನವನ್ನೂ ತಂದಿದ್ದಾರೆ .ಅವರ ಕಾವ್ಯಯಾನ‌ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ.ವ ಸಂವಾದ.
ಹೀಗಾಗಿ ವರುಷಕ್ಕೆ ಸಾವಿರಾರು ಕವನ ಸಮಕಲನ ಬಂದರು ಪ್ರತಿ ಸಂಕಲನವೂ ಒಂದಿಷ್ಟು ಹೊಸತನ್ನು ,ವಿಶಿಷ್ಟತೆಯನ್ನು ಹೊತ್ತು ತಂದಿರುತ್ತದೆ.ಅದಕ್ಕೆ ಕವಿ ಪಂಪ ಕಾವ್ಯವನ್ನು ಉರಿತು " ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿಗಂಭೀರಂ " ಎಂದದಗದ್ದು.‌ ನಮ್ಮ ಹೊರಿಯರು ಕವಿತೆಯನ್ನು  ಉದಧಿ,ಸಮುದ್ರಕ್ಕೆ ಹೋಲೊಸಿದರು. ಕಾರಣ ಸಮುದ್ರದ ಪ್ರತಿ ಅಲೆಯೂ ಒಡಲೊಳಗಿಂದ ಬರುವ ಹೊಸಾಲೆ ಮತ್ತು ನಿತ್ಯ ನೂತನ ಅಲ್ಲಿ ಹಳತೆಂಬುದು ಇಲ್ಲ.

ಗೋಕಾವಿ ನಾಡಿನ ಭರವಸೆಯ ಕವಯಿತ್ರಿ ಶ್ರೀ ಮತಿ ಭಾರತಿ‌ ಮದಭಾವಿಯವರು ಕಾವ್ಯ ಕ್ಷೇತ್ರಕ್ಕೆ ಹೊಸಬರೇನೂ ಅಲ್ಲ. ಸಾಹಿತ್ಯ ಸಂಘಟನೆಯ ಮೂಲಕ ,ಭಾವಯಾನ ' ಎಂಬ ಸಂಘಟನೆಯ ಮೂಲಕ ಪ್ರತಿ ತಿಂಗಳೂ ಅನೃಕ ಸಾಹಿತ್ಯ ಕಾರ್ಯಕ್ರಮ ಮಾಡುತ್ತಾ ಬಂದವರು.  ಅವರು ತಾವು ಮಾತ್ರವಲ್ಲ, ತಮ್ಮ ಸುತ್ತಲಿನ ವರನ್ನು ಸೇರಿಸಿಕೊಂಡು ಸಾಹಿತ್ಯ ಚಟುವಟಿಕೆಯಲ್ಲಿ ನಿತ್ಯ ಕೃಷಿ‌ ಮಾಡುತ್ತ ಬಂದಿದ್ದಾರೆ.
ಸಂಕಲನಕ್ಕೆ ಮುನ್ನುಡಿ ಬರೆದ ಹಿರಿಯ ಸಾಹಿತಿಗಳಾದ ಶ್ರೀ ಚಂದ್ರಶೇಖರ ಅವರು ಗುರುತಿಸಿದಂತೆ ಒಂದು ತಾಲೂಕು ಪ್ರದೇಶದಲ್ಲಿ ಮಹಿಳೆಯರೇ ಸ್ವಂತ ಸಂಘಟನೆ ಕಟ್ಟಿಕೊಂಡು ಸಾಹಿತ್ಯ ಪರ ಕೆಲಸ ಮಾಡುತ್ತಿರುವದು ಗೋಕಾವಿಯಲ್ಲಿ‌ ಮಾತ್ರ ಎನಿಸುತ್ತದೆ.ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವ್ಯಾಪ್ತಿ ಇದಕ್ಕೂ ಮಿಗಿಲಾದುದು.

ನನ್ನೊಳಗಿನ ನಾನು "ಶ್ರೀ ಮತಿ ಭಾರತಿ‌ ಮದಭಾವಿಯವರ ಮೊದಲ ಸಂಕಲನ ಇದರಲ್ಲಿ ೫೧ ಕವಿತೆಗಳಿವೆ. "ನನ್ನೊಳಗಿನ‌ ನಾನು- ತುಂಬ ಚಂದದ ಶೀರ್ಷಿಕೆ. ಕವಿತೆಯಂದರೆ ತನ್ನತ್ವದ ಹುಡುಕಾಟವೇ.ಎಷಟೋ ತನಗರಿಯದಂತೆಯೆ‌ ಕವಿತೆಯಲ್ಲಿ ತನ್ನತ್ವ ಪ್ರಕಟವಾಗಿ ಬಿಟ್ಟಿರುತ್ತದೆ. ಹೀಗಾಗಿ ಪ್ರತಿ ಕವಿ ಯ ಕೆಲಸ ತನ್ನೊಳಗೆ ಹುದುಗಿರುವ ತನ್ನನ್ನು ಹುಡುಕಿ ಹೊರಗೆಳೆಯುವ ಕಾರ್ಯವೇ.ಅದು ಅಂತರಂಗದ ಶೋಧ.ಪ್ರತೊಯೊಬ್ಬರೊಳಗೂ ಒಬ್ನ ಪ್ರಾಮಾಣಿಕಸಾತ್ವಿಕ, ಹೋರಾಟಗಾರ,ಪ್ರೇಮಿ,ಯುವಕ..ತುಂಟ...ಹೀಗೆ ಏನೇನೋ ಆಗಿರುವ ವ್ಯಕ್ತಿ ಇದ್ದೇ ಇರುತ್ತಾನೆ.ನಮ್ಮ ಮುಂದೆ ಕಾಣುವ ದೈಹಿಕ ವ್ಯಕ್ತಿಯ‌ ಒಳಗೆ ಹುದುಗಿರುವ ಹತ್ತಾರು ವ್ಯಕ್ತಿತ್ವಗಳನ್ನು ಕವಿತೆಯ‌ ಮೂಲಕಹುಡುಕುವ ಕಾರ್ಯವನ್ನು ಪ್ರತಿಯೊಬ್ಬ ಕವಿ‌ ಮಾಡಬೇಕಾಗುತ್ತದೆ.ಎಷ್ಟೊ ಸಲ ಬಹಿರಂಗವಾಗಿ ವ್ಯಕ್ತ ಮಾಡಲಾರದ ನೋವು ನಲಿವು ಗಳನ್ನು ಕಾವ್ಯದ ಮೂಲಕ ವ್ಯಕ್ತ ಮಾಡತ್ತಿರುತ್ತಾನೆ ಅದನ್ನೆ ಕವಿ ಕುವೆಂಪು 

ಕವಿಯ ಹಾರದಯವೊಂದು ವೀಣೆ 
ಲೋಕವದನೆ ಮಿಡಿವುದು

ಎಂದಿದ್ದರು. ಈ ಅರ್ಥದಲ್ಲಿ ಸಂಕಲನದ ಶೀರ್ಷಿಕೆಯೆ ಬಹು ಮುಖ್ಯವಾಗಿ ನನಗೆ ಕಂಡಿದೆ.

ಇಡೀ ಸಂಕಲನ ಹೆಣ್ಣಿನ ಮೌನ ನೋವು ನಿರಾಶೆ , ಆಕೆಯ ಕೈಗೂಡದ ಆಸೆಗಳನ್ನು ಅನಾವರಣ ಮಾಡಿವೆ.  ಇಲ್ಲಿನ ವಿಶೇಷ ಹೆಣ್ಣು ಬಾಯಿ ಕಚ್ಚಿ ಹಿಡಿದ,  ತನಗಾದ ನೋವನ್ನು ,ಒಟ್ಟು‌ ಮಹಿಳೆ ಎದುರಿಸುವ ಸಂಕಟವನ್ನು ಮುಕ್ತವಾಗಿ ಹೇಳಿದ್ದು.ಯಾವ ಚರಿತ್ರೆಯ ಪುಸ್ತಕವೂ ಅವಳ ನೋವನ್ನು ಸಂಪೂರ್ಣ ಬಿಡಿಸಿಟ್ಟಿಲ್ಲ.

ಕವನಗಳು, ಕಥೆಗಳು
ವಿಮರ್ಶೆಗಳು 
ಅವಳ ಬದುಕೊಂದು
ಇದೆಲ್ಲ ಮೀರಿದ ಕಾದಂಬರಿ
ಅದೇ ಅವಳ ಮೌನ
ನಾರಿ ಅವಳ ..ಹೆಸರು(ಹೆಣ್ಣಿನ ಮೌನ)

ಅಂದರೆ ಯಾವ ಬರಹ‌ಕೂಡ ಮಹಿಳೆಯ ನೋವು ವಿವರಿಸ ಲು ಸಾದ್ಯವಾಗಿಲ್ಲ.ಅದು ಜನಪದ ಗರತಿ‌ ಗುರುತಿಸಿದಂತೆ ಹಾಡಲ್ಕ ಅವಳ ಒಡಲುರಿ.ಹೆಣ್ಣು ಎಂದರೆ ಏನು ? ಎಂಬ ವ್ಯಖ್ಯಾನವನ್ನು ಪದಗಳಲ್ಲಿ ಹಿಡಿದಿಡುವ ಕವಯಿತ್ರಿ
ಇಟ್ಟಂತೆವಬಾಳಿ
ನಗುಮುಖವ ತೋರುತ
ನೋವನ್ನು ಬದಿಗೆ ಸರಿಸಿ
ನಲಿವನ್ನು‌ಕೈಚಾಚಿ
ಬರಮಾಡಿಕೊಳ್ಳುವ.ಮನೆ ದೀಪ ಬೆಳಗಿಸುವ

ಅವಳಚಿತ್ರವನ್ನು  ಬಿಡಿಸುತ್ತಾರೆ.ಇಷ್ಟೆಲ್ಲ ತ್ಯಾಗ ಮಾಡಿದರೂ ಅವಳೇ ಪ್ರತಿ ಸಲ ಸೋಲವ
ಬೆಕಾಗಿರುವ ಸ್ಥತಿ ಕೋಪ ತರಿಸಿದೆ ಅದಕ್ಕ ಇನ್ನೊಂದು ಕವಿತೆಯಲ್ಲಿ

ಅನುದಿನವು ಅನುಕ್ಷಣವು 
ಅನುರಾಗ ಬಂಧನವು
ಹಸಿರಾಗಿಸುವ ಹೊಣೆಯ
ಬರೀ‌ನನಗೆ ಸೀಮಿತವೇನು?
ನನ್ನೊಲವೆ?

ಎಂಬ ಪ್ರಶ್ನೆ ಇಂದು ನಿನ್ನೆಯದಲ್ಲ.ಸೀತೆಯ ಕಾಲದ್ದೂ ಆಗಿದೆ.ಹೆಣ್ಣು ಕಣ್ಣೀರು ಹಾಕುವದನ್ನು ಕವಿತೆ ಒಪ್ಪುವದಿಲ್ಲ ಅದಕ್ಕೆ ಗಂಗೆ ಗೆ  " ಮರೆತೇಕೆ ಕುಳಿತಿರುವೆ ತಾಯಿ ಗಂಗೆ ಹೆಣ್ಣಿನಾ ಕಂಗಳಲ್ಲಿ? ನಿನ್ನ ಸ್ಥಾನವಿರುವದು ಶಿವನ ಜಡೆಯಲ್ಕಿ ನೆನಪಿರಲಿ" ಎಂದು ವ್ಯಂಗ್ಯವಾಡುತ್ತಾರೆ.ತಲಾ ತಲಾಂತರದಿಂದಲೂ ಕೇವಲ ಹೊಗಳಿಕೆಯ ನಡುವೆ ಮುಳುಗಿಸಿರುವದರ ಬಗೆಗೆ ಅವರಿಗೆ ಕೋಪವಿದೆ.."ಹ್ಯಾಪಿ ಬರ್ತಡೇ‌"ಎಂಬ ಕವಿತೆಯಲ್ಲಿ 

ಆ ಬಿನ್ನಾಣವಿಲ್ಲ ,ಬಿಂಕವಿಲ್ಲ
ಅಳಿಸಿ ಆಗಿರುವೆ ಸಪ್ಪೆ ಸಾರು
ಅತ್ತೆ ಮಾವನ ಆದೇಶಕ್ಕೆ 
ಗಂಡ ಮಕಗಕಳ ಆರ್ಭಟಕ್ಕೆ
ಮರೆತು ಹೋಗಿದೆ
ನನಗೆ ನನ್ನದೆ ಹೆಸರು..

ಹೀಗೆ ತನ್ನ ಹೆಸರನ್ನೂ‌ಮರೆತ ದುಸ್ತಿತಿ ಆಕೆಯದು.ಇಲ್ಲಿನ‌ಕವಿತೆಗಳ ಧನಾತ್ಮಕ ಅಂಶವೆಂದರೆ - ತನ್ನ ಎಲ್ಲ ನೋವಿಗೂ ಹೆದರದ ಸ್ತ್ರೀ- ಅದನ್ನು ಅನುಭವಿಸಿಯೂ - ಅದನ್ನೆಲ್ಲ ಮರೆತು ತನ್ನಂತೆ ನೋವು ಅನುಭವಿಸುವ ಇತರೆ ಜೀವಿಗಳಿಗೆ ಆಸರೆಯಾಗುವ ನಿರ್ಧಾರ ಮಾಡುವದು." ಉಸಿರಾಗಬಯಸುವೆ" ಕವಿತೆಬ

ಉಸಿರಾಗ ಬಯಸುವೆ 
ಉಸಿರಿಲ್ಲದವರಿಗೆ
ನೆಲೆಯಾಗ ಬಯಸುವೆ 
ನೆಲೆ ಇಲ್ಲದವರಿಗೆ
ಎನ್ನುತ್ತಾರೆ.ಹಾಗೆಯೆ ಸ್ತ್ರೀಯನ್ನು ಹೊರ ಹೊರಗೆ ಅನುಕಂಪ ತೋರಿಸಿ ಅವಳನ್ನು Exploit ಮಾಡುತ್ತಲೆ ಬಂದ ಸಮಾಜವನ್ನು ಅವರ‌ ಕವಿತೆ ಧಿಕ್ಕರಿಸುತ್ತದೆ." ಸೋಲುವ ಜಾಯಮಾನ ನನ್ನದಲ್ಲ" ಕವಿತೆ ತುಸು ವಾಚ್ಯವಾಗಿಯೆ ತಾನು ಏನು ಎನ್ನುವದನ್ನು ಬಣ್ಣಿಸುತ್ತ

ಕಣ್ಣೀರು ಹಾಕುತ್ತೇನೆ
ಹಾಗಂತ ಅಸಹಾಯಕ ಳೇನಲ್ಕ
ಇರುವದನ್ನೇಬಹೇಳುತ್ತೇನೆ 
ಯಾರ ಸಾಂತ್ವನವೂ ಬೇಕಿಲ್ಲ
ಪುಟಿದೇಳುವ ಶಕ್ತಿಯೊದೆ
ಹಾಗಂತ ಬಜಾರಿಯೆನಲ್ಲ
ನನ್ನಂತೆ ನಾನು
ಯಾರ ಹೋಲಿಕೆ ನನಗಿಲ್ಲ

ನಾಲ್ಕೇ ನಾಲ್ಕು ಸಾಲುಗಳಲ್ಲಿ ಸ್ತ್ರೀ ಅಸ್ಮಿತೆಯ ಇಡಿ ಚಿತ್ರವನ್ನು ಬಿಡಿಸುತ್ತಾರೆ " ಸಾಂತ್ವನ " ಕವಿತೆಯಲ್ಲಿ.ಸಂಕಲನದ ಒಂದು ಶ್ರೇಷ್ಠ ಕವಿತೆ " ಅಹಲ್ಯೆ" .ಪುರಾಣದ ಕಥೆವೊದನ್ನು  ಹೊಸ ದೃಷ್ಟಿಕೋನದಿಂದ ನೋಡುತ್ತಾದೆ.ಸತ್ಯ ಒಪ್ಪಿಕೊಂಡ ಅಹಲ್ಯೆ ತನ್ನ ಗಂಡನ ರೂಪದಲ್ಲಿ ಬಂದ  ಚಂದ್ರ ,ಚಂದ್ರನೆಂದು ಗೊತ್ತಿದ್ದೇ ಅವನನ್ನು ಸ್ವೀಕರಿಸಿದ್ದು ಎಂಬ ಹೊಸ ನೋಟವ ನ್ನು ಸ್ಪೋಟಿಸುತ್ತದೆ." ಬುದ್ದಿ ಎಚ್ಚರಿಸಿದರೂ ದೇಹ ಕೇಳಲಿಲ್ಲ" ಎಂಬ ಸಾಲುಗಳು ಪುರಾಣದ ಕಥೆಯನ್ಮು ಇನ್ನೊಂದು ನೆಲೆಯಲ್ಲಿ ನೋಡುವ ಸಾಧ್ಯತೆಯನ್ನು ಕಾಣಿಸಿದೆ.ಪರಂಪರೆಯನ್ನು ಧಿಕ್ಕರಿಸುವ ,ವಿಮರ್ಶಿಸುವ ಧೈರ್ಯ ತಾಳಿದೆ.

ಕಲಿಗಾಲಮೋ, ಹಣಕೊಟ್ಟರೆ..ಮೊದಲಾದ ಕವಿತೆಗಳಲ್ಲಿ ತಾಯ್ತನದ ಭಾವನೆಗಳು  ಖುಷಿ, ನೋವುಗಳು ಕವಿತೆಯಾಗಿವೆ.ಮಕ್ಕಳ ಅಗಲಿಕೆ ನೀಡುವ ದುಃಖ ಉಂಟಾಗುವ ನೀರವ ಭಾವಗಳನ್ಮು ವಿವರಿಸಿವೆ. ಭಾವಯಾನ ಅವರೇ ಸ್ನೆಹಿತೆಯರು‌ ಕೂಡಿ ಕಟ್ಟಿದ ಸಂಘಟನೆ.ಅದರ ವಿವಿಧ ವಿಶೇಷತೆಗಳನ್ನು 

ಬದುಕಿನಾ ಕಲ್ಪನೆಯ 
ಭಾವನೆಗಳ ಬೆನ್ನೇರಿ
ಕಾಣುವುದೇ ಭಾವಯಾನ
ಮುಗಿಯದ ಸುಂದರ ಪಯಣ

ಎನ್ನುತ್ತ ಅಲ್ಲಿ-

ಬದುಕಿನಾ ಪಾಠಗಳ ಓದಿಸಿ
ಹೊಸ ಚಿತ್ರ ಅರ್ಥೈಸಸಿ
ಹುಡುಕಾಡಿ ತಡಕಾಡಿ
ಬಗೆ ಬಗೆಯ ಹೊಸ ಭಾಷ್ಯ ಬರೆಯುವದು.

ನಾರಿಯರ ಒಲವು ಒಗ್ಗಟ್ಟು 
ಬತ್ತದಾ ಒರತೆ ಇದು
ಎಂದೆಂದೂ ಸಾಗಿಹುದು
ಮುಗಿಯದಾ ಪಯಣವು

ಇದಕ್ಕೆ ಸಾಕ್ಷಿಯಾಗಿರುವ ಹತ್ತಾರು ಕಾರ್ಯ ಚಟುವಟಿಕೆಗಳು ನಿರಂತರ ನಡೆದಿರುವದು ಕವಿತೆಯನ್ನು ಸಮಕಾಲೀನ ಗೊಳಿಸಿವೆ..
ಸಂಕಲನ ಮಹಿಳೆ ,ಅವಳ ನೋವು ನಲಿವು ನೆನಪುಗಳ ಭಾವಯಾನವೇ ! ಬಸವಣ್ಣನವರ ಕುರಿತು, ಕಾರ್ಮಿಕ ದಿನಾಚರಣೆ ಇಂತಹ ಒಂದೆರಡು ಕವಿತೆ ಬಿಟ್ಟರೆ ಇಡಿ ಸಂಕಲನ ನೆನಪಿನ ಭಾವಯಾನವೇ ಆಗಿದೆ. ಶ್ರೀ ಮತಿ‌ಮದಭಾವಿಯವರು‌ಈಚೆಗೆ ಎರಡನೆಯ ಸಂಕಲನವನ್ನೂ ತಂದಿದ್ದಾರೆ .ಅವರ ಕಾವ್ಯಯಾನ‌ನಿರಂತರವಾಗಿರಲಿ ಎಂದು ಹಾರೈಸುತ್ತೇನೆ.


ಡಾ, Y,M ಯಾಕೊಳ್ಳಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ರಾಷ್ಟ್ರೀಯ ಹಬ್ಬಗಳು

ಭಾರತದ ರಾಷ್ಟ್ರೀಯ ಹಬ್ಬಗಳು.Indian National Festivals ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಭಾರತ ದೇಶವು ಜಾತ್ಯತೀತ ದೇಶವಾಗಿದೆ, ಇಲ್ಲಿ ಎಲ್ಲಾ ಜಾತಿ ಧರ್ಮದ ಜನರು ಎಲ್ಲಾ ಟೀಜ್ ಹಬ್ಬವನ್ನು ಬಹಳ ಆಡಂಬರದಿಂದ ಆಚರಿಸುತ್ತಾರೆ. ರಾಖಿ, ದೀಪಾವಳಿ, ದಸರಾ, ಈದ್, ಕ್ರಿಸ್‌ಮಸ್ ಮತ್ತು ಅನೇಕ ಜನರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಭಾರತದ ದೇಶದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ, ಧರ್ಮದ ಪ್ರಕಾರ ವಿಭಿನ್ನ ಹಬ್ಬಗಳಿವೆ. ಆದರೆ ಅಂತಹ ಕೆಲವು ಹಬ್ಬಗಳಿವೆ, ಅವು ಯಾವುದೇ ಜಾತಿಯವರಲ್ಲ, ಆದರೆ ನಮ್ಮ ರಾಷ್ಟ್ರವನ್ನು ನಾವು ರಾಷ್ಟ್ರೀಯ ಹಬ್ಬ ಎಂದು ಕರೆಯುತ್ತೇವೆ. ಭಾರತದ ರಾಷ್ಟ್ರೀಯ ಹಬ್ಬ. (Indian national festivals in Kannada ). 1947 ರಿಂದ ದೇಶದ ಸ್ವಾತಂತ್ರ್ಯದ ನಂತರ, ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಭಾಗವಾದವು, ಅಂದಿನಿಂದ ನಾವು ಅವರನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ. ಈ ಹಬ್ಬವು ನಮ್ಮ ರಾಷ್ಟ್ರೀಯ ಏಕತೆಯನ್ನು ತೋರಿಸುತ್ತದೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು – 1. ಸ್ವಾತಂತ್ರ್ಯ ದಿನ15 ಆಗಸ್ಟ್ 2. ಗಣರಾಜ್ಯೋತ್ಸವ 26 ಜನವರಿ 3. ಗಾಂಧಿ ಜಯಂತಿ 2 ಅಕ್ಟೋಬರ್ ಇದು ರಾಷ್ಟ್ರೀಯ ಹಬ್ಬ, ಇದು ರಾಷ್ಟ್ರೀಯ ರಜಾದಿನವೂ ಆಗಿದೆ. ಇದಲ್ಲದೆ, ಶಿಕ್ಷಕರ ದಿನ, ಮಕ್ಕಳ ದಿನವೂ ರಾಷ್ಟ್ರೀಯ ರಜಾದಿನವಾಗಿದೆ, ಇವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಆಚರಿಸಲಾಗುತ್ತದೆ. ಇದಲ

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ