ವಿಷಯಕ್ಕೆ ಹೋಗಿ

ಇಂದು ಸಂಜೆಗೊಂದು*ಗಜಲ್...* ಓದಿನೊಂದಿಗೆ ಡಾ. ವ್ಹಾಯ್. ಎಂ.ಯಾಕೋಳ್ಳಿ

ಇಂದು ಸಂಜೆಗೊಂದು*ಗಜಲ್...* ಓದಿನೊಂದಿಗೆ,

-
ಮೇಳಿ ಹಾಲು ಕುಡಿದ ಅಂಗೈ ಎದೆಗೆ ಮೊಳೆ ಹೊಡೆದು ಶಿಲುಬೆಗೇರಿಸಿದ್ದಾರೆ 
ಬೆವರ ಹೊನ್ನಿರಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳನು ನೇಣಿಗೇರಿಸಿದ್ದಾರೆ
-
ಸೊಂಟ ಬಿದ್ದ ಮುಳ್ಳು ನಾಲಿಗೆಯ ಕುಶಾಲಿ ಮಾತುಗಳು ಒಡಲಾಗ್ನಿ ನಂದಿಸಲಿಲ್ಲ 
ಹೆಗಲ ಮೇಲಿನ ಹಸಿರು ಗಿಣಿಗಳನು ಗದರಿಸಿ ಚದುರಿಸುವ ಹುನ್ನಾರ ನಡೆಸಿದ್ದಾರೆ 
-
ಮೊಳೆತ ಬೆಳೆಸಾಲದ ಇಳುವರಿಗೆ ಹೆದರಿ ಗಳೆ ಸಾಮಾನುಗಳು ಗುಳೆ ಹೊರಟಿವೆ
ಬಿಗಿದ ನೆಲದ ಬೆತ್ತಲ ನೆತ್ತಿ ಚೂರಿದ ನೇಗಿಲ ಕುಲಕ್ಕೆ ಹಸಿವಿನ ಬುತ್ತಿ ಹೊರೆಸಿದ್ದಾರೆ
-
ವಸುಂಧರೆಯ ಹೊಕ್ಕುಳ ಬೇರು ಇದ್ದಿಲು ಗಣಿಗಾರಿಕೆಯಲಿ ಬೂದಿಯಾಗಿದೆ 
ರಾಜ ವ್ಯಾಪಾರಿಯಾಗಿ ಮಣ್ಣಿನ ಧ್ಯಾನ ಮಾಡುವ ಮಕ್ಕಳು ಭಿಕಾರಿಯಾಗಿದ್ದಾರೆ
-
ಅಳಿದುಳಿದವರು ಉಟ್ಟ ಬಟ್ಟೆಯಲಿ ಉರಿವ ಧರೆ ಮೇಲೆ ನೆತ್ತರದ ಹಾದಿ ಮಾಡುತ್ತಿದ್ದಾರೆ
ತಟ್ಟೆ ತುಂಬಿಸಿ ಹೊಟ್ಟೆ ಇಂಬಾಗಿಸಿದವರು ರೈತರ ನೋವಿನ ಧ್ವನಿಗೆ ಕಿವುಡಾಗಿದ್ದಾರೆ
-
ಮಣ್ಣಿನ ಮೂರ್ತಿಗೆ 'ಸಾಚಿ' ನಿತ್ಯ ತಿಳಿನೀರು ಬಸಿದರೂ ಅರೆಹೊಟ್ಟೆ ತುಂಬುತ್ತಿಲ್ಲ
ಕಳ್ಳರು ಉಳುವ ಯೋಗಿಯನು  ಉಳ್ಳವರೆದುರಿಗೆ ನೊಗ ಹೊರಿಸಿ ನಿಲ್ಲಿಸಿದ್ದಾರೆ
-
ಸಹದೇವ ಯರಗೊಪ್ಪ, ಗದಗ
:::::::::::::::::::::::::::::::::::::::::::::::::::::::::::::::::::::::::::::::::::
ಗಜಲ್ ವಿವರಣೆ: ಡಾ. ವಾಯ್.ಎಂ.ಯಾಕೊಳ್ಳಿ

ನಮ್ಮ ನಡುವಿನ ಶ್ರೇಷ್ಠ ಗಜಲ್ ಕಾರರಲ್ಲಿ ಸಹದೇವ  ಯರಗೊಪ್ಪ ಅವರು ಒಬ್ಬರು . ಹಾಗೆ  ನೋಡಿದರೆ ಸಹದೇವ ಅವರು ಸಾಹಿತ್ಯಯಾನ  ತುಂಬ ಅಚ್ಚರಿಯನ್ನು ಹುಟ್ಟಿಸುವಂತಿದೆ.ಏಕೆಂದರೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ್ದು ಅಂದರೆ ಬರಹ ಕ್ಷೇತ್ರ ಪ್ರವೇಶಿಸಿದ್ದು ತೀರಾ ಇತ್ತೀಚೆಗೆ.  ನಾಲ್ಕಾರು ವರ್ಷಗಳ ಹಿಂದೆ ಅವರ ಕವನ ಸಂಕಲನ,ಗಜಲ್ ಸಂಕ ಲನ ಬಂದವು. ಕೃಷಿ ಅಧಿಕಾರಿಗಳಾಗಿ ಅವರ ಇಲಾಖೆಯ  ಸಾಹಿತ್ಯ ಕುರಿತು ಕೆಲವು ಕೃತಿಗಳನ್ನು ಬರೆದಿದ್ದರು.ಆದರೆ ಅವರ ಸಾಹಿತ್ಯದ  ಅಧ್ಯಯನ  ಹವ್ಯಾಸವಾಗಿ ಆರಂಭವಾದದ್ದು ಬಹಳ ಹಿಂದೆಯೇ. ಅವರು ಕೃಷಿ  ವಿಜ್ಞಾನದ  ಸ್ನಾತಕೋತ್ತರ  ಪದವಿಧರರಾದ ರೂ  ಸಾಹಿತ್ಯವನ್ನು ಓದುವ ಹವ್ಯಾಸ ಬಾಲ್ಯದಿಂದಲೇ ಬಂದದ್ದು .ಕವಿತೆ ಅವರ ಆಳದಲ್ಲಿ ಹುದುಗಿದ್ದ ಅಮೂಲ್ಯ ಶಕ್ತಿ ಎನ್ನಿಸುವದು ಅವರ ಕವಿತೆಗಳನ್ನು ಓದಿದಾಗ ಸಹಜವಾಗಿ ಅನ್ನಿಸದಿರದು. ಕೆಲವೇ ವರ್ಷಗಳಲ್ಲಿ ಅವರ ಎರಡು ಗಜಲ್ ಸಂಕಲನ ಬಂದಿವೆ.

ಸಾಮಾನ್ಯವಾಗಿ ಗಜಲ್, ಒಲವಿನ ವಿರಹದ, ಆರ್ದ್ರ ನಿವೇದನೆ ಯಾಗಿರುವದು ಸಹಜ. ಆದರೆ ಇತ್ತೀಚೆಗೆ ಗಜಲ್ ಕಾವ್ಯ ಕೂಡ  ಬದುಕಿನ ಬೇರೆ ಬೇರೆ ಆಯಾಮಗಳನ್ನು ವಸ್ತುವಾಗಿ ಬಳಸಿ ಕೊಳ್ಳುತ್ತಿರುವದನ್ನು ಕಾಣುತ್ತೇವೆ.

ರೈತನ ಬದುಕು ,ಅವನ ದಾರುಣ ಬಡತನ, ಉಳ್ಳವರು ಮಾಡುವ ಶೋಷಣೆ ಇವೆಲ್ಲ ಗಜಲ್ ಕವಿತೆಯಲ್ಲಿ ಸಹದೇವರ ಕವಿತೆಗಳಲ್ಲಿ ತುಂಬ ಸಶಕ್ತವಾಗಿ ಬಂದಿವೆ .ಮೇಲಿನ ಗಜಲ್ ಕೂಡ ಇದಕ್ಕೆ ಒಂದು ಸಾಕ್ಷಿಯಂತಿದೆ.
ಆರಂಭದಲ್ಲಿಯೇ ಉಳ್ಳವರು  ರೈತನನ್ನು ,ಅವನ  ದುಡಿಮೆಯನ್ನು ಹೇಗೆ ಅಪಹರಿಸಿದ್ದಾರೆ ಎನ್ನುವುದನ್ನು  ಚಿತ್ರಿಸುತ್ತಾರೆ.ಮೊದಲ ಸ್ಟಾಂಜಾ-

ಮೇಳಿ ಹಾಲು ಕುಡಿದ ಅಂಗೈ ಎದೆಗೆ ಮೊಳೆ ಹೊಡೆದು ಶಿಲುಬೆಗೇರಿಸಿದ್ದಾರೆ 
ಬೆವರ ಹೊನ್ನಿರಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳನು ನೇಣಿಗೇರಿಸಿದ್ದಾರೆ

ಮೊದಲ ಸಾಲುಗಳಲ್ಲೇ ರೈತನಿಗೆ ,ಕ್ರಿಸ್ತನನ್ನು ಶಿಲುಬೆಗೆರಿಸಿದ ಹಾಗೆ ಮೊಳೆ ಹೊಡೆದಿರುವದನ್ನು ಚಿತ್ರಿಸಿದೆ.ಆದರೆ ಇಲ್ಲಿ ಮೊಳೆ ಹೊಡೆದಿರುವದು  ಅವನ ದುಡಿಯುವ ಕೈಗೆ. ಶಿಲುಬೆಗೆ ರಿದವರು ಬೆವರ ಹೊನ್ನಿನಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳು ಎನ್ನುವದು ರೈತ ಎದುರಿಸುತ್ತಿರುವ  ನಿಜವಾದ ದುರಂತ ಚಿತ್ರವಾಗಿದೆ. ರೈತನಿಗೆ ಉಪಕಾರ  ಮಾಡುವ ನೆವದಲ್ಲಿ  ಕೆಲವು ಅಳುವ ಕೈಗಳು ಅವನಿಗೆ ಸಹಾಯ ಮಾಡುವ ನಾಟಕ ಮಾಡಿವೆ. ಆದರೆ ಅದು ನಿಜವಾದ ಪ್ರೀತಿ ತುಂಬಿದ ಸಹಾಯವಾಗದೆ  ಕುಶಲ ಮಾತುಗಳು ಆಟವಾಗಿದೆ .ಅಂತಹ ಖಾಲಿ ಮಾತುಗಳು ಅವನ ಒಡಲಾಗ್ನಿ ನಂದಿಸುವದಿಲ್ಲ. ಹಾಗಾಗಿ ಒಮ್ಮೊಮ್ಮೆ ರೈತ ತನ್ನ ಸಂಘಟನೆ ಕಟ್ಟಿಕೊಂಡು ಅಂಥವರ ವಿರುದ್ಧ  ಪ್ರತಿಭಟನೆಗಿಳಿದಿದ್ದಾನೆ. ಆದರೆ ಅವನ ಪ್ರತಿಭಟನೆಯನ್ನು ವ್ಯವಸ್ಥಿತ ವರ್ಗ ಚದುರಿಸುವ ಹುನ್ನಾರ ಮಾಡಿದೆ.ಇದನ್ನು ಈ ಕೆಳಗಿನ ಸಾಲುಗಳು ಚಿತ್ರಿಸಿದೆ.

ಸೊಂಟ ಬಿದ್ದ ಮುಳ್ಳು ನಾಲಿಗೆಯ ಕುಶಾಲಿ ಮಾತುಗಳು ಒಡಲಾಗ್ನಿ ನಂದಿಸಲಿಲ್ಲ 
ಹೆಗಲ ಮೇಲಿನ ಹಸಿರು ಗಿಣಿಗಳನು ಗದರಿಸಿ ಚದುರಿಸುವ ಹುನ್ನಾರ ನಡೆಸಿದ್ದಾರೆ 

 ಈಗ ರೈತನಿಗೆ ಬೇರೆ ದಾರಿಯೇ ಇಲ್ಲ. ಆತ  ಹೊತ್ತೆಗನ್ನವನರಸಿ ಗುಳೆ ಹೋಗುವುದು ಅನಿವಾರ್ಯವಾಗಿದೆ. ಅವನ ಹೊಲದಲ್ಲಿ ಇಳುವರಿ  ಬಂದದ್ಧು ಬೆಳೆಯದಾಗಿರದೇ ಬೆಳೆ ಸಾಲದ್ದು. ಬೆಳೆದ ಬೆಳೆಗೆ ಬೆಲೆ ಸಿಗದೆ ಸಾಲದ ಸುಳಿಗೆ ಸಿಕ್ಕು ತನ್ನ ಗಳೆ ಸಾಮಾನುಗಳೊಂದೀಗೆ ಗುಳೆ ಹೊರಟಿದ್ದಾನೆ. ಮೊಳೆತದ್ದು ಬೇಳೆಸಾಲವೆ  ಹೊರತು ಬೇಳೆಯಲ್ಲ.ಇಡೀ ನೇಗಿಲ ಕುಲದ ನೆತ್ತಿಗೆ ಹಸಿವಿನ ಬುತ್ತಿ ಹೊರುವ ಸ್ಥಿತಿ ಬಂದಿದೆ .ಈ ದಾರುಣ ಚಿತ್ರ ಕೆಳಗಿನ ಸಾಲುಗಳಲ್ಲಿದೆ.

ಮೊಳೆತ ಬೆಳೆ ಸಾಲದ ಇಳುವರಿಗೆ ಹೆದರಿ ಗಳೆ ಸಾಮಾನುಗಳು ಗುಳೆ ಹೊರಟಿವೆ
ಬಿಗಿದ ನೆಲದ ಬೆತ್ತಲ ನೆತ್ತಿ ಚೂರಿದ ನೇಗಿಲ ಕುಲಕ್ಕೆ ಹಸಿವಿನ ಬುತ್ತಿ ಹೊರೆಸಿದ್ದಾರೆ 

ಭೂಮಿಯ ಹೊಕ್ಕುಳಿನ ಮಕ್ಕಳು ಭಿಕಾರಿಯಾಗಿ ಅನ್ನ ಕೊಡುವ  ನೆಲವೆಲ್ಲ  ಗಣಿಗಾರಿಕೆಯ ಜನರ ಕೈಯಲ್ಲಿ ಸಿಲುಕಿದೆ.ರಕ್ಸಿಸಬೇಕಾದ ರಾಜನೇ ವ್ಯಾಪಾರಿಯಾಗಿದ್ದಾನೆ. ಮುಂದೆ ರಕ್ಷಿಸುವವರು ಯಾರು? ಮಣ್ಣಿನ ಧ್ಯಾನ ಮಾಡುವ    ಮಕ್ಕಳು ಭಿಕಾರಿಯಾದರೆ ಬೇರೆ ಮಾರ್ಗವೆಲ್ಲಿದೆ? ನಿಜಕ್ಕೂ ಕವಿತೆ ಎದೆ ಒಡೆಯುವ ಚಿತ್ರಗಳನ್ನು ನಿರುಮ್ಮಳ ಶೈಲಿಯಲ್ಲಿ ಚಿತ್ರಿ ಸಿದೆ. ಅಳಿದುಳಿದವರಿಗೆ ಉಳಿದಿರುವುದು ನೆತ್ತರದ ಹಾದಿಯಲ್ಲದೆ ಇನ್ನೇನು? ಅಂತೆಯೇ ಕವಿ ಕೊನೆ ಸಾಲುಗಳಲ್ಲಿ

ಮಣ್ಣಿನ ಮೂರ್ತಿಗೆ 'ಸಾಚಿ' ನಿತ್ಯ ತಿಳಿನೀರು ಬಸಿದರೂ ಅರೆಹೊಟ್ಟೆ ತುಂಬುತ್ತಿಲ್ಲ
ಕಳ್ಳರು ಉಳುವ ಯೋಗಿಯನು  ಉಳ್ಳವರೆದುರಿಗೆ ನೊಗ ಹೊರಿಸಿ ನಿಲ್ಲಿಸಿದ್ದಾರೆ

ರೈತನನ್ನು ಊಳುವ ಯೋಗಿಯಂದದ್ದು ಸಾರ್ಥಕ ಪ್ರತಿಮೆ.ನಿತ್ಯ ದುಡಿದರು ಹೊಟ್ಟೆ ತುಂಬುವಷ್ಟು ಅನ್ನ ಸಿಗದ ರೈತರಲ್ಲವರೆದುರಿಗೆ ನೋಗ ಹೊತ್ತು ನಿಂತಿರುವ ದಾರುಣ ಚಿತ್ರದೊಂದಿಗೆ ಕವಿತೆ ಮುಕ್ತಾಯವಾಗಿದೆ.
ನಿಜಕ್ಕೂ ಒಂದು ಅಪರೂಪದ ಗಜಲ್ ನೀಡಿದ ಸಹದೇವ ಯರಗೊಪ್ಪ ಅವರನ್ನು ಅಭಿನಂದಿಸುವದೂ ಒಂದು ರೀತಿಯಲ್ಲಿ ಹೆಮ್ಮೆಯ ಮಾತಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ಬಿ.ಎ. ಪ್ರಥಮ ವರ್ಷದ ಮಾದರಿ ಪ್ರಶ್ನೆ ಪತ್ರಿಕೆಗಳು

ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು, ಕಲ್ಲೋಳಿ ಕರ್ನಾಟಕದ  ಸಾಂಸ್ಕೃತಿಕ ಇತಿಹಾಸ(OCE) BA Ist Semester Model question Paper Total Marks : 60.    Total time: 2 hours Section A *Q.1 ಬೇಕಾದ ಎರಡು ಪ್ರಶ್ನೆಗಳಿಗೆ ಟಿಪ್ಪಣಿ ಬರೆಯಿರಿ.   ೨×೫=೧೦* ೧. ಕರ್ನಾಟಕದ ಪ್ರಾಚೀನತೆ ೨. ಶಿಕ್ಷಣ ಪದ್ಧತಿ ಮತ್ತು ಅಗ್ರಹಾರ ೩. ದಸರಾ ಮತ್ತು ಮಹಾಮಸ್ತಕಾಭಿಷೇಕ ೪. ಪ್ರದರ್ಶನ ಕಲೆಗಳು Section B *Q. 2. ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿ. 2×10=20* ೧. ಪ್ರಾಚೀನ ಕರ್ನಾಟಕ ಅಧ್ಯಯನದ ಶಾಸನಗಳು ತಿಳಿಸಿರಿ‌. ೨. ಪ್ರಾಚೀನ ಕರ್ನಾಟಕದ ಕೃಷಿ ಪದ್ಧತಿ ಹಾಗೂ ನಿರಾವರಿ ವ್ಯವಸ್ಥೆಯನ್ನು ವಿವರಿಸಿ. ೩. ಭೂದತ್ತಿ ಎಂದರೇನು? ಪ್ರಕಾರಗಳನ್ನು ವಿವರಿಸಿರಿ. ೪. ಕರ್ನಾಟಕ ಹಿಂದೂ ಧರ್ಮದ ವಿವಿಧ ಪಂಥಗಳಾದ ಶೈವ, ವೈಷ್ಣವ, ಭಾಗವತ ಪಂಥಗಳ ಕುರಿತು ಬರೆಯಿರಿ. Section C *Q.3. ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ. ನಕಾಶೆ ಪ್ರಶ್ನೆ ಕಡ್ಡಾಯ. 2×15=30* ೧. ೩ನೇ ಶತಮಾನದಿಂದ ೧೦ನೇ ಶತಮಾನದ ವರೆಗಿನ ಸಾಹಿತ್ಯದ ಬೆಳವಣಿಗೆಯನ್ನು ತಿಳಿಸಿರಿ. ೨. ಪ್ರಾಚೀನ ಕರ್ನಾಟಕದ ಸಾಮಾಜಿಕ ಜೀವನವನ್ನು ವಿವರಿಸಿರಿ. ೩. ಪ್ರಾಚೀನ ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪವನ್ನು ತಿಳಿಸಿರಿ. ೪. ಕರ್ನಾಟಕದ ಜೈನ ಮತ್ತು ಬೌದ್ಧ ಕೇಂದ್ರಗಳ ಕುರಿತು ಬರೆಯಿರಿ. ----------------------- DSC 1: ಕರ್ನಾಟಕ ರಾಜಕೀಯ ಇತ...