ವಿಷಯಕ್ಕೆ ಹೋಗಿ

ಇಂದು ಸಂಜೆಗೊಂದು*ಗಜಲ್...* ಓದಿನೊಂದಿಗೆ ಡಾ. ವ್ಹಾಯ್. ಎಂ.ಯಾಕೋಳ್ಳಿ

ಇಂದು ಸಂಜೆಗೊಂದು*ಗಜಲ್...* ಓದಿನೊಂದಿಗೆ,

-
ಮೇಳಿ ಹಾಲು ಕುಡಿದ ಅಂಗೈ ಎದೆಗೆ ಮೊಳೆ ಹೊಡೆದು ಶಿಲುಬೆಗೇರಿಸಿದ್ದಾರೆ 
ಬೆವರ ಹೊನ್ನಿರಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳನು ನೇಣಿಗೇರಿಸಿದ್ದಾರೆ
-
ಸೊಂಟ ಬಿದ್ದ ಮುಳ್ಳು ನಾಲಿಗೆಯ ಕುಶಾಲಿ ಮಾತುಗಳು ಒಡಲಾಗ್ನಿ ನಂದಿಸಲಿಲ್ಲ 
ಹೆಗಲ ಮೇಲಿನ ಹಸಿರು ಗಿಣಿಗಳನು ಗದರಿಸಿ ಚದುರಿಸುವ ಹುನ್ನಾರ ನಡೆಸಿದ್ದಾರೆ 
-
ಮೊಳೆತ ಬೆಳೆಸಾಲದ ಇಳುವರಿಗೆ ಹೆದರಿ ಗಳೆ ಸಾಮಾನುಗಳು ಗುಳೆ ಹೊರಟಿವೆ
ಬಿಗಿದ ನೆಲದ ಬೆತ್ತಲ ನೆತ್ತಿ ಚೂರಿದ ನೇಗಿಲ ಕುಲಕ್ಕೆ ಹಸಿವಿನ ಬುತ್ತಿ ಹೊರೆಸಿದ್ದಾರೆ
-
ವಸುಂಧರೆಯ ಹೊಕ್ಕುಳ ಬೇರು ಇದ್ದಿಲು ಗಣಿಗಾರಿಕೆಯಲಿ ಬೂದಿಯಾಗಿದೆ 
ರಾಜ ವ್ಯಾಪಾರಿಯಾಗಿ ಮಣ್ಣಿನ ಧ್ಯಾನ ಮಾಡುವ ಮಕ್ಕಳು ಭಿಕಾರಿಯಾಗಿದ್ದಾರೆ
-
ಅಳಿದುಳಿದವರು ಉಟ್ಟ ಬಟ್ಟೆಯಲಿ ಉರಿವ ಧರೆ ಮೇಲೆ ನೆತ್ತರದ ಹಾದಿ ಮಾಡುತ್ತಿದ್ದಾರೆ
ತಟ್ಟೆ ತುಂಬಿಸಿ ಹೊಟ್ಟೆ ಇಂಬಾಗಿಸಿದವರು ರೈತರ ನೋವಿನ ಧ್ವನಿಗೆ ಕಿವುಡಾಗಿದ್ದಾರೆ
-
ಮಣ್ಣಿನ ಮೂರ್ತಿಗೆ 'ಸಾಚಿ' ನಿತ್ಯ ತಿಳಿನೀರು ಬಸಿದರೂ ಅರೆಹೊಟ್ಟೆ ತುಂಬುತ್ತಿಲ್ಲ
ಕಳ್ಳರು ಉಳುವ ಯೋಗಿಯನು  ಉಳ್ಳವರೆದುರಿಗೆ ನೊಗ ಹೊರಿಸಿ ನಿಲ್ಲಿಸಿದ್ದಾರೆ
-
ಸಹದೇವ ಯರಗೊಪ್ಪ, ಗದಗ
:::::::::::::::::::::::::::::::::::::::::::::::::::::::::::::::::::::::::::::::::::
ಗಜಲ್ ವಿವರಣೆ: ಡಾ. ವಾಯ್.ಎಂ.ಯಾಕೊಳ್ಳಿ

ನಮ್ಮ ನಡುವಿನ ಶ್ರೇಷ್ಠ ಗಜಲ್ ಕಾರರಲ್ಲಿ ಸಹದೇವ  ಯರಗೊಪ್ಪ ಅವರು ಒಬ್ಬರು . ಹಾಗೆ  ನೋಡಿದರೆ ಸಹದೇವ ಅವರು ಸಾಹಿತ್ಯಯಾನ  ತುಂಬ ಅಚ್ಚರಿಯನ್ನು ಹುಟ್ಟಿಸುವಂತಿದೆ.ಏಕೆಂದರೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ್ದು ಅಂದರೆ ಬರಹ ಕ್ಷೇತ್ರ ಪ್ರವೇಶಿಸಿದ್ದು ತೀರಾ ಇತ್ತೀಚೆಗೆ.  ನಾಲ್ಕಾರು ವರ್ಷಗಳ ಹಿಂದೆ ಅವರ ಕವನ ಸಂಕಲನ,ಗಜಲ್ ಸಂಕ ಲನ ಬಂದವು. ಕೃಷಿ ಅಧಿಕಾರಿಗಳಾಗಿ ಅವರ ಇಲಾಖೆಯ  ಸಾಹಿತ್ಯ ಕುರಿತು ಕೆಲವು ಕೃತಿಗಳನ್ನು ಬರೆದಿದ್ದರು.ಆದರೆ ಅವರ ಸಾಹಿತ್ಯದ  ಅಧ್ಯಯನ  ಹವ್ಯಾಸವಾಗಿ ಆರಂಭವಾದದ್ದು ಬಹಳ ಹಿಂದೆಯೇ. ಅವರು ಕೃಷಿ  ವಿಜ್ಞಾನದ  ಸ್ನಾತಕೋತ್ತರ  ಪದವಿಧರರಾದ ರೂ  ಸಾಹಿತ್ಯವನ್ನು ಓದುವ ಹವ್ಯಾಸ ಬಾಲ್ಯದಿಂದಲೇ ಬಂದದ್ದು .ಕವಿತೆ ಅವರ ಆಳದಲ್ಲಿ ಹುದುಗಿದ್ದ ಅಮೂಲ್ಯ ಶಕ್ತಿ ಎನ್ನಿಸುವದು ಅವರ ಕವಿತೆಗಳನ್ನು ಓದಿದಾಗ ಸಹಜವಾಗಿ ಅನ್ನಿಸದಿರದು. ಕೆಲವೇ ವರ್ಷಗಳಲ್ಲಿ ಅವರ ಎರಡು ಗಜಲ್ ಸಂಕಲನ ಬಂದಿವೆ.

ಸಾಮಾನ್ಯವಾಗಿ ಗಜಲ್, ಒಲವಿನ ವಿರಹದ, ಆರ್ದ್ರ ನಿವೇದನೆ ಯಾಗಿರುವದು ಸಹಜ. ಆದರೆ ಇತ್ತೀಚೆಗೆ ಗಜಲ್ ಕಾವ್ಯ ಕೂಡ  ಬದುಕಿನ ಬೇರೆ ಬೇರೆ ಆಯಾಮಗಳನ್ನು ವಸ್ತುವಾಗಿ ಬಳಸಿ ಕೊಳ್ಳುತ್ತಿರುವದನ್ನು ಕಾಣುತ್ತೇವೆ.

ರೈತನ ಬದುಕು ,ಅವನ ದಾರುಣ ಬಡತನ, ಉಳ್ಳವರು ಮಾಡುವ ಶೋಷಣೆ ಇವೆಲ್ಲ ಗಜಲ್ ಕವಿತೆಯಲ್ಲಿ ಸಹದೇವರ ಕವಿತೆಗಳಲ್ಲಿ ತುಂಬ ಸಶಕ್ತವಾಗಿ ಬಂದಿವೆ .ಮೇಲಿನ ಗಜಲ್ ಕೂಡ ಇದಕ್ಕೆ ಒಂದು ಸಾಕ್ಷಿಯಂತಿದೆ.
ಆರಂಭದಲ್ಲಿಯೇ ಉಳ್ಳವರು  ರೈತನನ್ನು ,ಅವನ  ದುಡಿಮೆಯನ್ನು ಹೇಗೆ ಅಪಹರಿಸಿದ್ದಾರೆ ಎನ್ನುವುದನ್ನು  ಚಿತ್ರಿಸುತ್ತಾರೆ.ಮೊದಲ ಸ್ಟಾಂಜಾ-

ಮೇಳಿ ಹಾಲು ಕುಡಿದ ಅಂಗೈ ಎದೆಗೆ ಮೊಳೆ ಹೊಡೆದು ಶಿಲುಬೆಗೇರಿಸಿದ್ದಾರೆ 
ಬೆವರ ಹೊನ್ನಿರಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳನು ನೇಣಿಗೇರಿಸಿದ್ದಾರೆ

ಮೊದಲ ಸಾಲುಗಳಲ್ಲೇ ರೈತನಿಗೆ ,ಕ್ರಿಸ್ತನನ್ನು ಶಿಲುಬೆಗೆರಿಸಿದ ಹಾಗೆ ಮೊಳೆ ಹೊಡೆದಿರುವದನ್ನು ಚಿತ್ರಿಸಿದೆ.ಆದರೆ ಇಲ್ಲಿ ಮೊಳೆ ಹೊಡೆದಿರುವದು  ಅವನ ದುಡಿಯುವ ಕೈಗೆ. ಶಿಲುಬೆಗೆ ರಿದವರು ಬೆವರ ಹೊನ್ನಿನಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳು ಎನ್ನುವದು ರೈತ ಎದುರಿಸುತ್ತಿರುವ  ನಿಜವಾದ ದುರಂತ ಚಿತ್ರವಾಗಿದೆ. ರೈತನಿಗೆ ಉಪಕಾರ  ಮಾಡುವ ನೆವದಲ್ಲಿ  ಕೆಲವು ಅಳುವ ಕೈಗಳು ಅವನಿಗೆ ಸಹಾಯ ಮಾಡುವ ನಾಟಕ ಮಾಡಿವೆ. ಆದರೆ ಅದು ನಿಜವಾದ ಪ್ರೀತಿ ತುಂಬಿದ ಸಹಾಯವಾಗದೆ  ಕುಶಲ ಮಾತುಗಳು ಆಟವಾಗಿದೆ .ಅಂತಹ ಖಾಲಿ ಮಾತುಗಳು ಅವನ ಒಡಲಾಗ್ನಿ ನಂದಿಸುವದಿಲ್ಲ. ಹಾಗಾಗಿ ಒಮ್ಮೊಮ್ಮೆ ರೈತ ತನ್ನ ಸಂಘಟನೆ ಕಟ್ಟಿಕೊಂಡು ಅಂಥವರ ವಿರುದ್ಧ  ಪ್ರತಿಭಟನೆಗಿಳಿದಿದ್ದಾನೆ. ಆದರೆ ಅವನ ಪ್ರತಿಭಟನೆಯನ್ನು ವ್ಯವಸ್ಥಿತ ವರ್ಗ ಚದುರಿಸುವ ಹುನ್ನಾರ ಮಾಡಿದೆ.ಇದನ್ನು ಈ ಕೆಳಗಿನ ಸಾಲುಗಳು ಚಿತ್ರಿಸಿದೆ.

ಸೊಂಟ ಬಿದ್ದ ಮುಳ್ಳು ನಾಲಿಗೆಯ ಕುಶಾಲಿ ಮಾತುಗಳು ಒಡಲಾಗ್ನಿ ನಂದಿಸಲಿಲ್ಲ 
ಹೆಗಲ ಮೇಲಿನ ಹಸಿರು ಗಿಣಿಗಳನು ಗದರಿಸಿ ಚದುರಿಸುವ ಹುನ್ನಾರ ನಡೆಸಿದ್ದಾರೆ 

 ಈಗ ರೈತನಿಗೆ ಬೇರೆ ದಾರಿಯೇ ಇಲ್ಲ. ಆತ  ಹೊತ್ತೆಗನ್ನವನರಸಿ ಗುಳೆ ಹೋಗುವುದು ಅನಿವಾರ್ಯವಾಗಿದೆ. ಅವನ ಹೊಲದಲ್ಲಿ ಇಳುವರಿ  ಬಂದದ್ಧು ಬೆಳೆಯದಾಗಿರದೇ ಬೆಳೆ ಸಾಲದ್ದು. ಬೆಳೆದ ಬೆಳೆಗೆ ಬೆಲೆ ಸಿಗದೆ ಸಾಲದ ಸುಳಿಗೆ ಸಿಕ್ಕು ತನ್ನ ಗಳೆ ಸಾಮಾನುಗಳೊಂದೀಗೆ ಗುಳೆ ಹೊರಟಿದ್ದಾನೆ. ಮೊಳೆತದ್ದು ಬೇಳೆಸಾಲವೆ  ಹೊರತು ಬೇಳೆಯಲ್ಲ.ಇಡೀ ನೇಗಿಲ ಕುಲದ ನೆತ್ತಿಗೆ ಹಸಿವಿನ ಬುತ್ತಿ ಹೊರುವ ಸ್ಥಿತಿ ಬಂದಿದೆ .ಈ ದಾರುಣ ಚಿತ್ರ ಕೆಳಗಿನ ಸಾಲುಗಳಲ್ಲಿದೆ.

ಮೊಳೆತ ಬೆಳೆ ಸಾಲದ ಇಳುವರಿಗೆ ಹೆದರಿ ಗಳೆ ಸಾಮಾನುಗಳು ಗುಳೆ ಹೊರಟಿವೆ
ಬಿಗಿದ ನೆಲದ ಬೆತ್ತಲ ನೆತ್ತಿ ಚೂರಿದ ನೇಗಿಲ ಕುಲಕ್ಕೆ ಹಸಿವಿನ ಬುತ್ತಿ ಹೊರೆಸಿದ್ದಾರೆ 

ಭೂಮಿಯ ಹೊಕ್ಕುಳಿನ ಮಕ್ಕಳು ಭಿಕಾರಿಯಾಗಿ ಅನ್ನ ಕೊಡುವ  ನೆಲವೆಲ್ಲ  ಗಣಿಗಾರಿಕೆಯ ಜನರ ಕೈಯಲ್ಲಿ ಸಿಲುಕಿದೆ.ರಕ್ಸಿಸಬೇಕಾದ ರಾಜನೇ ವ್ಯಾಪಾರಿಯಾಗಿದ್ದಾನೆ. ಮುಂದೆ ರಕ್ಷಿಸುವವರು ಯಾರು? ಮಣ್ಣಿನ ಧ್ಯಾನ ಮಾಡುವ    ಮಕ್ಕಳು ಭಿಕಾರಿಯಾದರೆ ಬೇರೆ ಮಾರ್ಗವೆಲ್ಲಿದೆ? ನಿಜಕ್ಕೂ ಕವಿತೆ ಎದೆ ಒಡೆಯುವ ಚಿತ್ರಗಳನ್ನು ನಿರುಮ್ಮಳ ಶೈಲಿಯಲ್ಲಿ ಚಿತ್ರಿ ಸಿದೆ. ಅಳಿದುಳಿದವರಿಗೆ ಉಳಿದಿರುವುದು ನೆತ್ತರದ ಹಾದಿಯಲ್ಲದೆ ಇನ್ನೇನು? ಅಂತೆಯೇ ಕವಿ ಕೊನೆ ಸಾಲುಗಳಲ್ಲಿ

ಮಣ್ಣಿನ ಮೂರ್ತಿಗೆ 'ಸಾಚಿ' ನಿತ್ಯ ತಿಳಿನೀರು ಬಸಿದರೂ ಅರೆಹೊಟ್ಟೆ ತುಂಬುತ್ತಿಲ್ಲ
ಕಳ್ಳರು ಉಳುವ ಯೋಗಿಯನು  ಉಳ್ಳವರೆದುರಿಗೆ ನೊಗ ಹೊರಿಸಿ ನಿಲ್ಲಿಸಿದ್ದಾರೆ

ರೈತನನ್ನು ಊಳುವ ಯೋಗಿಯಂದದ್ದು ಸಾರ್ಥಕ ಪ್ರತಿಮೆ.ನಿತ್ಯ ದುಡಿದರು ಹೊಟ್ಟೆ ತುಂಬುವಷ್ಟು ಅನ್ನ ಸಿಗದ ರೈತರಲ್ಲವರೆದುರಿಗೆ ನೋಗ ಹೊತ್ತು ನಿಂತಿರುವ ದಾರುಣ ಚಿತ್ರದೊಂದಿಗೆ ಕವಿತೆ ಮುಕ್ತಾಯವಾಗಿದೆ.
ನಿಜಕ್ಕೂ ಒಂದು ಅಪರೂಪದ ಗಜಲ್ ನೀಡಿದ ಸಹದೇವ ಯರಗೊಪ್ಪ ಅವರನ್ನು ಅಭಿನಂದಿಸುವದೂ ಒಂದು ರೀತಿಯಲ್ಲಿ ಹೆಮ್ಮೆಯ ಮಾತಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್...

Antiquity of Karnataka

Antiquity of Karnataka The Pre-history of Karnataka traced back to paleolithic hand-axe culture. It is also compared favourably with the one that existed in Africa and is quite distinct from the Pre-historic culture that prevailed in North India.The credit for doing early research on ancient Karnataka goes to Robert Bruce-Foote. Many locales of Pre-noteworthy period have been discovered scattered on the stream valleys of Krishna, Tungabhadra, Cauvery, Bhima, Ghataprabha, Malaprabha, Hemavathi, Shimsha, Manjra, Netravati, and Pennar and on their tributaries. The disclosure of powder hills at Kupgal and Kudatini in 1836 by Cuebold (a British officer in Bellary district), made ready for the investigation of Pre-notable examinations in India.   Some of the important sites representing the various stages of Prehistoric culture that prevailed in Karnataka are Hunasagi,Kaladevanahal li, Tegginahalli, Budihal, Piklihal, Kibbanahalli, Kaladgi, Khyad, Nyamati, Nittur, Anagavadi, Balehonnur a...