ವಿಷಯಕ್ಕೆ ಹೋಗಿ

ಅರಮನೆಯಿಂದ ಅರಿವಿನರಮನೆಗೆ...

ಅರಮನೆಯಿಂದ ಅರಿವಿನರಮನೆಗೆ...
ನಡುರಾತ್ರಿ ಅರಮನೆಯಲ್ಲಿ
ನೀರವ ಮೌನ
ಝಗಝಗಿಸುವ ದೀಪದ ಬೆಳಕಿನಲ್ಲಿ
ಹೃದಯ ತಲ್ಲಣ
ಎದೆಯ ಕಣ್ಣು ಮುಚ್ಚಿದ ವಿಲಾಸ
ಇಂದೇಕೆ ಹೀಗಾಗುತ್ತಿದೆ?
ಅರಮನೆಯ ವಿಲಾಸ ಬದುಕೆ
ಬೇಸರವೆನಿಸುತ್ತಿದೆ
ನಿನ್ನೆಯ ಆ ಚಿತ್ರಗಳು
ಕಣ್ಣ ಮುಂದೆ ಬಂದು ಕುಣಿಯುತ್ತಿವೆಯಲ್ಲ
ಆ ವೃದ್ಧ, ಆ ರುಗ್ಣ, ಆ ಶವಯಾತ್ರೆ
ನನ್ನನ್ನು ಆವರಿಸಿ ಕಾಡುತ್ತಿವೆ

ಈ ಅರಮನೆ
ವೃದ್ಧನನ್ನು ಮುಪ್ಪಿನಿಂದ
ರುಗ್ಣನನ್ನು ರೋಗದಿಂದ
ಸತ್ತವನನ್ನು ಸಾವಿನಿಂದ
ಪಾರು ಮಾಡಲು ಸಾಧ್ಯವಿಲ್ಲವೆ?
ಹಾಗಾದರೆ........
ಇದೆಂತಹ ಅರಮನೆ?

ಅರಮನೆಗೊಬ್ಬ ರಾಜ
ರಾಜನಿಗೋ
ಹತ್ತು ನೂರು ಸಾವಿರ ಲಕ್ಷ ಸೇವಕರು
ರಾಣಿಯರು ದಾಸಿಯರು
ಕೋಟೆ ಕೊತ್ತಲಗಳು
ಅಡಿಗಡಿಗೊಬ್ಬ ಕಾವಲುಗಾರ
ಆದರೂ ಇದೇನಿದು?
ನಿನ್ನೆಯವರು ಇಂದು
ಇಂದಿನವರು ನಾಳೆ ಇರುತ್ತಿಲ್ಲವಲ್ಲ
ಹಾಗಾದರೆ.......ಮುಂದೆ......
ಈ ಅರಮನೆಯೂ? ರಾಜನೂ? ಹಾಹಾಹಾ!
ಮತ್ತೇ..... ಇವಳು?
ಹಾಗೆ.......ಇವನು?
ಜೊತೆಗೆ....ನಾನೂ?
ಇದೇಕೆ ಹೀಗೆ? ಉತ್ತರವಿಲ್ಲವಿದಕೆ?

ಅರೆರೆ ಯಾರೋ ಗವಾಕ್ಷಿಯಿಂದ
ಕೂಗಿದಂತಾಯಿತಲ್ಲ, ಯಾರಿರಬಹುದು?
ಓಹೋ!  ಮೂಡಣದ ತಾರೆ
ನನ್ನತ್ತ ದಿಟ್ಟಿ ನೆಟ್ಟು 
ಕೈಬೀಸಿ ಕರೆಯುತ್ತಿದೆ
ಬಾ ಬಾ ನಿನಗೆ ಉತ್ತರಬೇಕಲ್ಲವೆ?
ಬಾ ಬೇಗ ಬಾ ಈಗಲೇ ಬಾ
ಅರಮನೆಯ ಹಂಗು ತೊರೆದು
ನಸುನಗುತ ಬಾ ಅನಂತ ದಾರಿಯಲಿ

ಆಹಾ! ಎಂಥ ಬೆಳದಿಂಗಳು
ಪೂರ್ಣಚಂದ್ರ ಇಂದೇಕೆ
ಅಷ್ಟು ಹೊಳೆಯುತ್ತಿದ್ದಾನೆ?
ಈ ಮಧುರ ಮೌನದೊಳಗೆ
ಆದರೆ .........
ಅರಮನೆಯ ಸಹವಾಸ ಸಾಕೆನಿಸುತ್ತಿದೆ ನನಗೆ
ಬೆಳದಿಂಗಳರಮನೆಯ 
ದೀಪಗಳ ಮುಂದೆ 
ರಾಜನರಮನೆಯ 
ದೀಪಗಳು ಸೋತು ಹೋಗಿವೆ
ಮಸಣದಲ್ಲಿ ಉರಿಯುತ್ತಿರುವ 
ಶವದ ಕಿಚ್ಚಿನಂತೆ 

ಶೂನ್ಯ ಎಲ್ಲವೂ ಶೂನ್ಯ
ಹುಟ್ಟಿದ್ದು ಸಾಯುವುದೇತಕೆ?
ಪಥವಾವುದು ಜೀವನದರ್ಥಕೆ?
ಹುಡುಕಬೇಕು ಪಥವನು 
ನಾನು ಹುಡುಕಬೇಕು
ಸ್ಥಿತ್ಯಂತರದ ಜೀವದವಸ್ಥೆಯನು
ಮೂಡಣದರಮನೆಯಿಂದ
ನೇಸರನನಾಗಮನ
ರಾಜನರಮನೆಯಿಂದ 
ಅಭವ ನಿರ್ಗಮನ
ಕಳೆಯಿತು ಅರಮನೆಯ 
ಭವದ ಕತ್ತಲೆಯು
ಬೆಳಗಿತು ಲೋಕದರಮನೆಯನ್ನು
ಅರಿವಿನ ಬೆಳಕು........
 

ರಚನೆ: ಸುರೇಶ ಮುದ್ದಾರ, ಕವಿ- ಕಥೆಗಾರ- ಚಿಂತಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ಬಿ.ಎ. ಪ್ರಥಮ ವರ್ಷದ ಮಾದರಿ ಪ್ರಶ್ನೆ ಪತ್ರಿಕೆಗಳು

ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು, ಕಲ್ಲೋಳಿ ಕರ್ನಾಟಕದ  ಸಾಂಸ್ಕೃತಿಕ ಇತಿಹಾಸ(OCE) BA Ist Semester Model question Paper Total Marks : 60.    Total time: 2 hours Section A *Q.1 ಬೇಕಾದ ಎರಡು ಪ್ರಶ್ನೆಗಳಿಗೆ ಟಿಪ್ಪಣಿ ಬರೆಯಿರಿ.   ೨×೫=೧೦* ೧. ಕರ್ನಾಟಕದ ಪ್ರಾಚೀನತೆ ೨. ಶಿಕ್ಷಣ ಪದ್ಧತಿ ಮತ್ತು ಅಗ್ರಹಾರ ೩. ದಸರಾ ಮತ್ತು ಮಹಾಮಸ್ತಕಾಭಿಷೇಕ ೪. ಪ್ರದರ್ಶನ ಕಲೆಗಳು Section B *Q. 2. ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿ. 2×10=20* ೧. ಪ್ರಾಚೀನ ಕರ್ನಾಟಕ ಅಧ್ಯಯನದ ಶಾಸನಗಳು ತಿಳಿಸಿರಿ‌. ೨. ಪ್ರಾಚೀನ ಕರ್ನಾಟಕದ ಕೃಷಿ ಪದ್ಧತಿ ಹಾಗೂ ನಿರಾವರಿ ವ್ಯವಸ್ಥೆಯನ್ನು ವಿವರಿಸಿ. ೩. ಭೂದತ್ತಿ ಎಂದರೇನು? ಪ್ರಕಾರಗಳನ್ನು ವಿವರಿಸಿರಿ. ೪. ಕರ್ನಾಟಕ ಹಿಂದೂ ಧರ್ಮದ ವಿವಿಧ ಪಂಥಗಳಾದ ಶೈವ, ವೈಷ್ಣವ, ಭಾಗವತ ಪಂಥಗಳ ಕುರಿತು ಬರೆಯಿರಿ. Section C *Q.3. ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ. ನಕಾಶೆ ಪ್ರಶ್ನೆ ಕಡ್ಡಾಯ. 2×15=30* ೧. ೩ನೇ ಶತಮಾನದಿಂದ ೧೦ನೇ ಶತಮಾನದ ವರೆಗಿನ ಸಾಹಿತ್ಯದ ಬೆಳವಣಿಗೆಯನ್ನು ತಿಳಿಸಿರಿ. ೨. ಪ್ರಾಚೀನ ಕರ್ನಾಟಕದ ಸಾಮಾಜಿಕ ಜೀವನವನ್ನು ವಿವರಿಸಿರಿ. ೩. ಪ್ರಾಚೀನ ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪವನ್ನು ತಿಳಿಸಿರಿ. ೪. ಕರ್ನಾಟಕದ ಜೈನ ಮತ್ತು ಬೌದ್ಧ ಕೇಂದ್ರಗಳ ಕುರಿತು ಬರೆಯಿರಿ. ----------------------- DSC 1: ಕರ್ನಾಟಕ ರಾಜಕೀಯ ಇತ...