ವಿಷಯಕ್ಕೆ ಹೋಗಿ

ಗುಪ್ತ ಸಾಮ್ರಾಜ್ಯ

ಗುಪ್ತರ ಸಾಮ್ರಾಜ್ಯ


ಗುಪ್ತರ ಏಳಿಗೆಗೆ ಮುನ್ನ ಉತ್ತರ ಭಾರತದ ಪರಿಸ್ಥಿತಿ

ಕ್ರಿ.ಶ 150 ರಿಂದ 300 ರವರೆಗೆ ಉತ್ತರ ಭಾರತವನ್ನು 
ಅನೇಕ ಸಣ್ಣ ಪುಟ್ಟ ರಾಜ್ಯಗಳು ಆಳುತ್ತಿದ್ದವು . ಅವುಗಳಲ್ಲಿ ಕೆಲವು ರಾಜಪ್ರಭುತ್ವವನ್ನು ಇನ್ನು ಕೆಲವು ಗಣರಾಜ್ಯಗಳನ್ನು ಹೊಂದಿದ್ದವು ( ಕುಶಾನರ ಪತನಾನಂತರ ಗುಪ್ತರು ಏಳಿಗೆಗೆ ಬರುವವರೆಗೆ )
a. ರಾಜಪ್ರಭುತ್ವ - ನಾಗರು ,ಅಹಿಚ್ಚತ್ರರು ,ಅಯೋದ್ಯ , ವಾಕಟಕರು
b. ಮೌಕರಿಗಳು ಮತ್ತು ಗುಪ್ತರು
c. ಗಮರಾಜ್ಯಗಳಲ್ಲಿ - ಅರ್ಜುನಯಾನರು ಮಾಳ್ವರು , ಯಾದೇಯರು ,ಸಿಬಿಗಳು ,ಕುಲುಟರು

ಹಾಗೇಯೇ ಪಶ್ಚಿಮ ಭಾರತದಲ್ಲಿ ಕ್ಷತ್ರಪರು ( ರುದ್ರದಾಮನ ) ಹಾಗೂ ದಕ್ಷಿಣದಲ್ಲಿ ಶಾತವಾಹನರು ಏಳಿಗೆ ಹೊಂದಲು ಹವಣಿಸುತ್ತಿದ್ದರು ಈ ರಾಜ್ಯಗಳಲ್ಲೆ ಸ್ವಲ್ಪ ಮಟ್ಟಿಗೆ ಪ್ರಾಮುಖ್ಯತೆಯನ್ನು ಪಡೆದವರು ,ವಾಕಟಕರು ಹಾಗೂ ಗುಪ್ತರು

ಗುಪ್ತರು ,ಮೌರ್ಯರು ಮತ್ತು ಶಾತವಾಹನರ ಕಾಲದಲ್ಲಿ ಸಾಮ್ರಜ್ಯದ ಗುಪ್ತಾಚಾರ ಅಧಿಕಾರಿಗಳಾಗಿದ್ದರು
ಗುಪ್ತರ ಮೂಲ ಪುರುಷ - ಮಹಾರಾಜ ಶ್ರೀಗುಪ್ತ
ಶ್ರೀಗುಪ್ತನ ಮಗನ ಹೆಸರು - ಘಟೋತ್ಕಚ ಗುಪ್ತ
ಮಹಾರಾಜ ರೆಂಬ ಬಿರುದನ್ನು ಹೊಂದಿದ್ದವನು - 1 ನೇ ಚಂದ್ರಗುಪ್ತ
1 ನೇ ಚಂದ್ರಗುಪ್ತನ ರಾಜಧಾನಿ - ಪಾಟಲಿಪುತ್ರ
1 ನೇ ಚಂದ್ರಗುಪ್ತನ ಪತ್ನಿಯ ಹೆಸರು - ಲಿಚ್ಚವಿ ವಂಶದ ರಾಜಕುಮಾರಿ ಕುಮಾರ ದೇವಿ
1 ನೇ ಚಂದ್ರಗುಪ್ತನ ಮಗನ ಹೆಸರು - ಸಮುದ್ರಗುಪ್ತ

ಸಮುದ್ರಗುಪ್ತ
ಗುಪ್ತರ ಪ್ರಸಿದ್ದ ದೊರೆ - ಸಮುದ್ರಗುಪ್ತ
ಸಮುದ್ರಗುಪ್ತನ ಪ್ರಾರಂಭದ ರಾಜಧಾನಿ - ಪಾಟಲಿಪುತ್ರ
ಸಮುದ್ರಗುಪ್ತನ ಎರಡನೇ ರಾಜಧಾನಿ - ಉಜ್ಜಯಿನಿ
ಗುಪ್ತ ಸಂತತಿಯಲ್ಲಿ ದಿಗ್ವಿಜಯಕ್ಕೆ ಈತನ ಕುರಿತಾಗಿದೆ - ಸಮುದ್ರಗುಪ್ತನ
ಅಲಹಾಬಾದ್ ಸ್ತಂಭ ಶಾಸನ ಮೊದಲು ಿದ್ದ ಪ್ರದೇಶ - ಕೌಸಂಬಿ
ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ - ಫೀರೋಜ್ ಷಾ ತುಘಲಕ್

ಅಲಹಾಬಾದ್ ಸ್ತಂಭ ಶಾಸನದ ಕರ್ತೃ - ಹರಿಷೇಣ
ಹರಿಷೇಣನಿಗಿದ್ದ ಬಿರುದುಗಳು - ಸಂಧಿ ವಿಗ್ರಾಹಕ , ಮಹಾದಂಡನಾಯಕ ,ಕುಮಾರ ವ್ಯಾಸ
ಸಮುದ್ರಗುಪ್ತ ದಕ್ಷಿಣ ಭಾರತದ ದಂಡಯಾತ್ರೆಯ ಸಮಯದಲ್ಲಿದ್ದ ಪಲ್ಲವರ ್ರಸ - ವಿಷ್ಣುಗೋಪ
ಭಾರತದ ನೆಪೋಲಿಯನ್ ಎಂದು ಕರೆಸಿಕೊಂಡವರು - ಸಮುದ್ರಗುಪ್ತ
ಸಮುದ್ರಗುಪ್ತನನ್ನು ಭಾರತದ ನೆಪೋಲಿಯನ್ ಎಂದು ಕರೆದವರು - ವಿ.ಎ.ಸ್ಮಿತ್
ಎಂಟು ಬಗೆಯ ಚಿನ್ನದ ನಾಣ್ಯಗಳನ್ನು ಚಂಕಿಸಿದ ಗುಪ್ತ ದೊರೆ - ಸಮುದ್ರಗುಪ್ತನ
ಕವಿರಾಜ ನೆಂದು ಬಿರುದುಳ್ಳ ಗುಪ್ತ ಅರಸ - ಸಮುದ್ರಗುಪ್ತನ
ಸಮುದ್ರಗುಪ್ತನ ಆಸ್ಥಾನದ ಕವಿಗಳು - ಹರಿಷೇಣ ಹಾಗೂ ವಸುಬಂಧು
ಸಮುದ್ರಗುಪ್ತನ ನಂತರ ಅಧಿಕಾರಕ್ಕೆ ಬಂದವರು - ಆತನ ಮಗ ರಾಮಗುಪ್ತ.

-ಗುಪ್ತ ಸಾಮ್ರಾಜ್ಯದ ಪ್ರಮುಖ ದೊರೆ ಸಮುದ್ರಗುಪ್ತ ಅವನ ಕಾಲವನ್ನು "ಭಾರತದ ಸುವರ್ಣ ಯುಗ" ಎಂದು ಪರಿಗಣಿಸಲಾಗಿದೆ. ಸಮುದ್ರ ಗುಪ್ತನ ದಿಗ್ವಿಜಯವನ್ನು, ಹರಿಸೇನನ 'ಅಲಹಬಾದ್ ಸ್ತ೦ಭ ಶಾಸನ' ವಿವರಿಸುತ್ತದೆ.


ಗರುಡ ಸ್ತಂಭದೊಂದಿಗೆ ಸಮುದ್ರಗುಪ್ತನ ನಾಣ್ಯ.British Museum.

ಸಮುದ್ರಗುಪ್ತ, ಗುಪ್ತ ಸಾಮ್ರಾಜ್ಯದ ರಾಜ (ಸಿ 335 -.. ಸಿ 375 ಸಿಇ) , ಭಾರತೀಯ ಇತಿಹಾಸದಲ್ಲಿ ಮಹಾನ್ ಸೇನಾ ಪ್ರತಿಭೆಗಳ ಒಂದು ಗಣಿ ಎಂದು ಪರಿಗಣಿಸಲಾಗಿದೆ. ಈತ ಗುಪ್ತ ರಾಜವಂಶದ ಮೂರನೇ ಮಹಾನ್ ದೊರೆ. ಈತ ಒಬ್ಬ ಉಪಕಾರ ಬುದ್ಧಿಯ ಆಡಳಿತಗಾರ, ಮಹಾನ್ ಯೋಧ ಮತ್ತು ಕಲೆಗಳ ಪೋಷಕನಾಗಿದ್ದನುಸಮುದ್ರಗುಪ್ತನ ಹಲವಾರು ಹಿರಿಯ ಸಹೋದರರು ಮತ್ತು ತನ್ನ ತಂದೆಯ ಆಯ್ಕೆಯ ಮೇರೆಗೆ ಅವನು ತಂದೆಯ ಉತ್ತರಾಧಿಕಾರಿಯಾದನು. ಸಮುದ್ರಗುಪ್ತನಿಗೆ "ರಾಜಾ ಚಕ್ರವರ್ತಿ" ಅಥವಾ ಮಹಾನ್ ಚಕ್ರವರ್ತಿ, ನಿರ್ವಿವಾದ ರಾಜ ಎಂಬ ಬಿರುದುಗಳಿದ್ದವು.

ಸಮುದ್ರಗುಪ್ತ (ಕ್ರಿ.ಶ. ೩೩೫-೩೮೦)

  • ಒಂದನೆಯ ಚಂದ್ರಗುಪ್ತನ ಮಗನೂ, ಉತ್ತರಾಧಿಕಾರಿಯೂ ಆದ ಸಮುದ್ರಗುಪ್ತನು ಗುಪ್ತ ಸಂತತಿಯ ಅತ್ಯಂತ ಪ್ರಸಿದ್ದ ದೊರೆ. ಮಹಾದಂಡನಾಯಕನಾಗಿ, ದಿಗ್ವಿಜಯಿಯಾಗಿ, ಸಾಮ್ರಾಜ್ಯ ನಿರ್ಮಾಪಕನಾಗಿ ಸಂಗೀತಗಾರನಾಗಿ, ಉತ್ತಮ ಆಡಳಿತಗಾರನಾಗಿ ಭಾರತದ ಚರಿತ್ರೆಯಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಡಿದ್ದಾನೆ. ಡಿ.ಅರ್.ಎಸ್.ತ್ರಿಪಾಠಿಯವರು ಬರೆಯುವಂತೆ ಯುದ್ದ ಮತ್ತು ಆಕ್ರಮಣಗಳನ್ನೇ ಗುರಿಯಾಗಿ ಹೊಂದಿದ್ದ ಸಮುದ್ರಗುಪ್ತನು ಶಾಂತಿ ಮತ್ತು ಧರ್ಮಗಳನ್ನು ಗುರಿಯಾಗಿ ಹೊಂದಿದ್ದ ಅಶೋಕನಿಗೆ ತದ್ವಿರುದ್ದನಾಗಿದ್ದನು.
  • ಈ ಹೇಳಿಕೆ ಅವನ ಒಟ್ಟಾರೆ ಆಳ್ವಿಕೆಯನ್ನು ವಿಮರ್ಶಿಸುತ್ತದೆ. ಮಹಾದಿಗ್ವಿಜಯಿಯಾಗಿದ್ದ ಸಮುದ್ರಗುಪ್ತನ ದಿಗ್ವಿಜಯವನ್ನು ತಿಳಿಯಲು ಇರುವ ಪ್ರಮುಖ ಆಧಾರವೆಂದರೆ ಅಲಹಾಬಾದ್ ಸ್ತಂಭಶಾಸನ, ಈ ಶಿಲಾಶಾಸನವು ಅವನ ದಂಡನಾಯಕನೂ, ಆಸ್ಥಾನ ಕವಿಯೂ ಆದ ಹರಿಸೇನನಿಂದ ರಚಿಸಲ್ಪಟ್ಟಿತು. ಇದು ಸಂಸ್ಕೃತ ಭಾಷೆಯ ಉತ್ಕೃಷ್ಟ ಶೈಲಿಯಲ್ಲಿದ್ದು ಗದ್ಯ ಮತ್ತು ಪದ್ಯ ಮಿಶ್ರಿತ ಚಂಪೂ ಕಾವ್ಯದ ಶೈಲಿಯಲ್ಲಿದೆ. ಅದರ ಕವಿಯೂ ಸಂಸ್ಕೃತ ಭಾಷೆಯ ಶ್ರೇಷ್ಟ ಸಾಹಿತಿಯಾಗಿದ್ದನೆಂಬುದನ್ನು ಸೂಚಿಸುತ್ತದೆ.
  • ಅಲಹಾಬಾದ್ ಸ್ತಂಭಶಾಸನವು ಮೂಲತಃ ಅಶೋಕನ ಶಾಸನವಾಗಿದ್ದು ಆ ಕಂಬದ ಮೇಲೆಯೇ ಸಮುದ್ರಗುಪ್ತನ ಸಾಧನೆಯನ್ನು ಕೆತ್ತಲಾಗಿದೆ. ಈ ಶಾಸನದಲ್ಲಿ ಸಮುದ್ರಗುಪ್ತನ ದಿಗ್ವಿಜಯವನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಶಾಸನದ ೧೩, ೧೪, ೨೧ ಮತ್ತು ೨೩ನೆಯ ಸಾಲುಗಳು ಸಮುದ್ರಗುಪ್ತನ ಆರ್ಯಾವರ್ತ ಅಂದರೆ ಉತ್ತರಭಾರತದ ದಿಗ್ವಿಜಯಗಳನ್ನು ಕುರಿತು ವಿವರಿಸುತ್ತವೆ.
  • ಉತ್ತರದ ಅರಸರುಗಳಾದ ಅಚ್ಯುತ (ಪದ್ಮಾವತಿ ರಾಜ್ಯ, ಮಧ್ಯಭಾರತ) ನಾಗಸೇನ (ಅಹಿಚ್ಚತ್ರ ರೋಹಿಲ್ ಖಂಡ) ಹೆಸರಿನೊಂದಿಗೆ ಉತ್ತರ ಗಂಗಾ ಕಣಿವೆಯಲ್ಲಿ ಆಳುತ್ತಿದ್ದ ರುದ್ರದೇವ, ಮೈಥಿಲಾ, ನಾಗದತ್ತ, ಚಂದ್ರವರ್ಮ, ಗಣಪತಿನಾಗ, ನಂದಿನ್ ಮತ್ತು ಬಲವರ್ಮ ಹೀಗೆ ಒಂಬತ್ತು ರಾಜರನ್ನು ಸೋಲಿಸಿ ಆ ರಾಜ್ಯಗಳನ್ನು ತನ್ನ ಆಳ್ವಿಕೆಗೆ ಸೇರಿಸಿಕೊಡನೆಂದು ತಿಳಿದುಬರುತ್ತದೆ.
  • ಎರಡನೆಯದಾಗಿ ನೇಪಾಳ, ಬಂಗಾಳ, ಅಸ್ಸಾಂ ಮುಂತಾದ ಹಿಮಾಲಯದ ರಾಜ್ಯಗಳು ಮತ್ತು ಗಡಿರಾಜ್ಯಗಳು. ಪಂಜಾಬಿನಲ್ಲಿ ಮೌರ್ಯ ಸಾಮ್ರಾಜ್ಯದ ನಂತರವೂ ಜೀವಂತವಾಗಿದ್ದ ಗಣರಾಜ್ಯಗಳನ್ನು ಸಮುದ್ರಗುಪ್ತ ತನ್ನ ಸೇನಾಪ್ರಭವದ ವಲಯದೊಳಕ್ಕೆ ತಂದುಕೊಂಡನು. ಮೂರನೆಯದಾಗಿ ಅವನ ಹತೋಟಿಗೆ ಒಳಗಾದ ರಾಜ್ಯಗಳೆಂದರೆ ವಿಂಧ್ಯ ಪ್ರದೇಶದ ಅಟವಿಕ ಅಂದರೆ ಆದಿವಾಸಿ ರಾಜ್ಯಗಳು ಸೇರುತ್ತವೆ.
  • ನಾಲ್ಕನೆಯದಾಗಿ ದಕ್ಷಿಣ ಭಾರತದ ಪೂರ್ವ ಭಾಗದ ಹನ್ನೆರಡು ರಾಜ್ಯಗಳನ್ನು ಗೆದ್ದು ಅವರಿಂದ ಕಪ್ಪ ಸಂಗ್ರಹಿಸಿ ಪನಃ ಅಲ್ಲಿನ ಅರಸರಿಗೇ ರಾಜ್ಯಗಳನ್ನು ಹಿಂದಿರುಗಿಸಲಾಯಿತು. ಅವುಗಳೆಂದರೆ ಕೋಸಲದ ಮಹೇಂದ್ರ ರಾಜ (ಮೇಲಿನಾಮಹಾನದಿ ಕಣಿವೆ) ಮಹಾಕಾಂತಾರದ ವ್ಯಾಘ್ರ ರಾಜ (ಮಹಾರಣ್ಯ ಅಥವಾ ದಂಡಕಾರಣ್ಯ) ಕೌರಾಲದ ಮಂಟರಾಜ, ಪಿಷ್ಟಪುರದ ಮಹೇಂದ್ರ (ಗೋದಾವರಿ ಜಿಲ್ಲೆಯ ಪೀತಪುರಂ) ಕೊಟ್ಟೂರದ ಸ್ವಾಮಿದತ್ತ (ಮದಶನು ಪ್ರಾಂತ್ಯದ ಉತ್ತರದ ಭಾಗ) ಎರಂಡಪಲಾದ ದಮನ (ವಿಶಾಖಪಟ್ಟಣ ಜಿಲ್ಲೆ) ಕಂಚಿಯ ಪಲ್ಲವ ರಾಜ ವಿಷ್ಣುಗೋಪ, ಅವಮುಕ್ತದ ನೀಲರಾಜ (ಗೋದಾವರಿಜಿಲ್ಲೆ) ವೆಂಗಿಯ ಶಾಲಂಕಾಯನ ರಾಜ ಹಸ್ತಿವರ್ಮನ್ (ಪ್ರಾಯಶಃ ನಲ್ಲೂರು ಜಲ್ಲೆ), ಪಲಕ್ಕದ ಉಗ್ರಸೇನ (ನಲ್ಲೂರು ಜಿಲ್ಲೆ) ದೇವರಾಷ್ಟ್ರದ ಕುಬೇರ (ವಿಶಾಖಪಟ್ಟಣ ಜಿಲ್ಲೆ), ಕೌಸ್ಥಲಪುರದ ಧನಂಜಯ (ಉತ್ತರ ಆರ್ಕಾಟ್ ಜಿಲ್ಲೆ). ಐದನೆಯದಾಗಿ ಆಫ್ಘಾನಿಸ್ತಾನದ ಭಾಗದಲ್ಲಿ ಆಳುತ್ತಿದ್ದ ಕುಶಾನರು ಮತ್ತು ಶಕರನ್ನು ಅಧಿಕಾರದಿಂದ ಕಿತ್ತೊಗೆದು ದೂರದೇಶದ ರಾಜರನ್ನು ಆಶ್ರಿತರನ್ನಾಗಿ ಮಾಡಿಕೊಂಡನೆಂದು ಹೇಳಲಾಗಿದೆ.
  • ಸಮುದ್ರಗುಪ್ತನ ಪ್ರತಿಷ್ಠೆ ಹಾಗೂ ಪ್ರಭಾವಗಳು ಭಾರತದ ಹೊರಗಿನ ದೇಶಗಳಿಗೂ ಮುಟ್ಟಿತ್ತು. ಲಂಕೆಯ ರಾಜನಾದ ಶ್ರೀಮೇಘವರ್ಮನು ಸಮುದ್ರಗುಪ್ತನ ಆಸ್ಥಾನಕ್ಕೆ ರಾಯಭಾರಿಗಳ ತಂಡವೊಂದನ್ನು ಕಳುಹಿಸಿ, ಬುದ್ದಗಯೆಯಲ್ಲಿ ವಿಹಾರವೊಂದನ್ನು ಕಟ್ಟಿಸಲು ಅನುಮತಿಯನ್ನು ಪಡೆದುಕೊಡಿದ್ದನೆಂದು ಹ್ಯೂಯೆನ್ ತ್ಸಾಂಗ್ ತಿಳಿಸಿದ್ದಾನೆ. ಇವನ ದಿಗ್ವಿಜಯದಿಂದ ಬೆದರಿದ ಭಾರತದ ಗಡಿನಾಡಿನ ಜನರು ತಾವೇ ತಾವಾಗಿ ಶರಣಾಗತರಾದರೆಂದೂ ಶಾಸನದಿಂದ ತಿಳಿದುಬರುತ್ತದೆ.
  • ಆರ್.ಕೆ. ಮುಖರ್ಜಿಯವರ ಪ್ರಕಾರ ಸಮುದ್ರಗುಪ್ತನ ಸಾಮ್ರಾಜ್ಯವು ಉತ್ತರದಲ್ಲಿ ಹಿಮಾಲಯದಿಂದ ದಕ್ಷಿಣದಲ್ಲಿ ನರ್ಮದಾ ನದಿಯವರೆಗೆ ಮತ್ತು ಪಶ್ಚಿಮದಲ್ಲಿ ಪಂಜಾಬಿನಿಂದ ಪೂರ್ವದಲ್ಲಿ ಬ್ರಹ್ಮಪುತ್ರ ನದಿಯವರೆಗೆ ಹರಡಿದ್ದಿತು. ಇದರ ಸುತ್ತಮುತ್ತ ಸಾಮಂತ ರಾಜರ ಹಲವು ರಾಜ್ಯಗಳಿದ್ದವು. ಈ ವಲಯದ ಹೊರಗೆ ಮಿತ್ರರಾಜ್ಯವಾಗಿದ್ದವೆಂದು ತಿಳಿದುಬರುತ್ತದೆ.

ಸಮುದ್ರಗುಪ್ತನ ವ್ಯಕ್ತಿತ್ವ

  • ಸಮುದ್ರಗುಪ್ತ ಕೇವಲ ದಿಗ್ವಿಜಯಿಯಾಗಿರದೆ ಸಾಹಿತ್ಯ ಕಲೆಗಳ ಪೋಷಕನೂ ಆಗಿದ್ದನು. ಅಲಹಾಬಾದ್ ಶಾಸನವು ಇವನನ್ನು ‘ಕವಿರಾಜ’ ಎಂದು ವರ್ಣಿಸಿದೆ. ಸ್ವತಃ ಕವಿಯಾಗಿದ್ದುದೇ ಅಲ್ಲದೆ ಹಲವು ಕವಿಗಳಿಗೆ ಆಶ್ರಯ ನೀಡಿದ್ದನು. ಖ್ಯಾತ ಬೌದ್ಧವಿದ್ವಾಂಸ ವಸುಬಂಧು ಇವನ ಮಂತ್ರಿ. ಹರಿಸೇನ ದಂಡನಾಯಕನೂ, ಮಂತ್ರಿಯೂ, ಸಾಹಿತಿಯೂ ಆಗಿದ್ದನು. ಸಮುದ್ರಗುಪ್ತನಿಗೆ ಸಂಗೀತದಲ್ಲಿಯೂ ಆಸಕ್ತಿಯಿತ್ತು.
  • ಇವನ ಕೆಲವು ನಾಣ್ಯಗಳಲ್ಲಿ ಇವನನ್ನು ವೀಣೆ ಅಥವಾ ಕೊಳಲಿನಂತಹ ವಾದ್ಯವನ್ನು ನುಡಿಸುತ್ತಿರುವಂತೆ ಚಿತ್ರಿಸಲಾಗಿದೆ. ತನ್ನ ದಿಗ್ವಿಜಯದ ನೆನಪಿಗಾಗಿ ಅಶ್ವಮೇಧಯಾಗವೊಂದನ್ನು ಮಾಡಿ ಅಶ್ವಮೇಧ ಪರಾಕ್ರಮ ಎಂಬ ಬಿರುದನ್ನು ಧರಿಸಿದ್ದನು. ಆದರ ನೆನಪಿಗಾಗಿ ಎಂಟು ಬಗೆಯ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದ್ದನು. ಈ ನಾಣ್ಯಗಳೂ ಆ ಕಾಲದ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುತ್ತವೆ.

ಸಮುದ್ರಗುಪ್ತನ ಆಡಳಿತ ನೀತಿ

  • ಸಮುದ್ರಗುಪ್ತ ಒಬ್ಬ ಉತ್ತಮ ಆಡಳಿತಗಾರ, ನಾಗಸೇನನನ್ನು ಸೋಲಿಸಿದನು. ಸಮುದ್ರಗುಪ್ತ ದಕ್ಷಿಣ ರಾಜ್ಯಗಳ ವಿರುದ್ಧ ಪ್ರಚಾರ ಆರಂಭಿಸಿದನು. ಈ ದಕ್ಷಿಣ ಪ್ರಚಾರ ಬಂಗಾಳಕೊಲ್ಲಿ ಉದ್ದಕ್ಕೂ ದಕ್ಷಿಣಕ್ಕೂ ಹಬ್ಬಿದೆ. ಅವರು ಮಧ್ಯಪ್ರದೇಶದ ವಿಶಾಲ ಪ್ರದೇಶಗಳಾದ ಒಡಿಶಾ ಕರಾವಳಿ, ಗಂಜಾಂ, ವಿಶಾಖಪಟ್ಟಣಂ, ಗೋದಾವರಿ, ಕೃಷ್ಣಾ ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಮೂಲಕ ಮೆರವಣಿಗೆ ನಡೆಸಿದರು ಮತ್ತು ದೂರದ ಕಾಂಚೀಪುರ ತಲುಪಿದರು. ಆದರೆ ಅವರನ್ನು ಯಾರೂ ನೇರವಾಗಿ ನಿಯಂತ್ರಿಸಲಿಲ್ಲ.
  • ತನ್ನ ಶತ್ರುಗಳನ್ನು ಸೆರೆಹಿಡಿದ ನಂತರ ಗುಪ್ತ ಸಾಮ್ರಾಜ್ಯವನ್ನು ವಿಸ್ತರಿಸ ತೊಡಗಿದನು. ಇವನ ಆಳ್ವಿಕೆಯು ರಾಜನೀತಿಜ್ಞತೆಯಿಂದ ಹಲವು ಸಾಮರ್ಥ್ಯಗಳನ್ನು ಒದಗಿಸುತ್ತದೆ. ಅವನು ಎಲ್ಲಾ ಪ್ರದೇಶಗಳ ವಿಜಯಕ್ಕೆಮತ್ತು ಸ್ವಾಧೀನ ಮಾಡಿಕೊಳ್ಳಲು "ದಿಗ್ವಿಜಯ" ನೀತಿಯನ್ನು ಅಳವಡಿಸಿಕೊಂಡನು. ಬಂಗಾಳದ ಗಡಿ ಬಹುಶಃ (ಈಗಿನ ಉತ್ತರ ಪ್ರದೇಶ ರಾಜ್ಯದಲ್ಲಿ) ಅಲಹಾಬಾದ್ ಈಗ ತಲುಪಿತು. ಇವರು ದೆಹಲಿಯ ಹತ್ತಿರ ತನ್ನ ಉತ್ತರ ನೆಲೆಯಿಂದ ವಿಸ್ತರಣೆಯ ಯುದ್ಧಗಳ ಒಂದು ಸರಣಿಯನ್ನು ಆರಂಭಿಸಿದನು.
  • ಕಾಂಚೀಪುರಂ ದಕ್ಷಿಣ ಪಲ್ಲವ ಸಾಮ್ರಾಜ್ಯದ ನಂತರ ರಾಜಾ ವಿಷ್ಣುಗೋಪನನ್ನು ಮತ್ತು ಇತರರನ್ನು ಸೋಲಿಸಿದನು. ದಕ್ಷಿಣ ರಾಜ್ಯ ಪುನಃಸ್ಥಾಪನೆ ಮಾಡಿದನು. ಹಲವಾರು ಉತ್ತರ ಪ್ರಾಂತ್ಯಗಳನ್ನು ಗುಪ್ತ ಸಾಮ್ರಾಜ್ಯಕ್ಕೆ ಸೇರಿಸಲಾಗಿದೆ. ಸಮುದ್ರಗುಪ್ತ ಅಧಿಕಾರದ ಉತ್ತುಂಗದಲ್ಲಿ ಅವರು ಸುಮಾರು ಎಲ್ಲಾ ಗಂಗಾ ನದಿಯ ಕಣಿವೆಯ ನಿಯಂತ್ರಿತ ಮತ್ತು ಪೂರ್ವ ಬಂಗಾಳ, ಅಸ್ಸಾಂ, ನೇಪಾಳ, ಪಂಜಾಬ್ ಪೂರ್ವ ಭಾಗದಲ್ಲಿ, ಮತ್ತು ರಾಜಸ್ಥಾನ ವಿವಿಧ ಬುಡಕಟ್ಟು ಭಾಗಗಳು ಅರಸರಿಂದ ಗೌರವ ಪಡೆದರು.
  • ಸಮುದ್ರಗುಪ್ತ ಒಂದು ಅದ್ಭುತ ಕಮಾಂಡರ್ ಮತ್ತು ದೊಡ್ಡ ಆಕ್ರಮಣಕಾರ. ಅವನ ಬಜಲಪುರ ಮತ್ತು ಛೋಟಾ ನಾಗ್ಪುರ ಬಳಿ ಒಂಬತ್ತು ಉತ್ತರ ಭಾರತದ ಕೆಲ ರಾಜ್ಯಗಳು ಸದ್ದಡಗಿಸಿಕೊಂಡವು. ಹಲವು ರಾಜ್ಯಗಳು ಅಳಿದುಹೋದುವು. ನೇಪಾಳ ಮತ್ತು ಕೃತಿಪುರ 'ತೆರಿಗೆ ಪಾವತಿ, ಆದೇಶಗಳನ್ನು ಪಾಲಿಸಿದನು'. ಇರಾನ್ ಶಾಸನ ಸಮುದ್ರಗುಪ್ತ ಯುದ್ಧದಲ್ಲಿ 'ಅಜೇಯ' ಎಂಬುದನ್ನು ಒತ್ತಿಹೇಳುತ್ತದೆ.

ಎರಡನೇ ಚಂದ್ರಗುಪ್ತ ವಿಕ್ರಮಾಧಿತ್ಯ
ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನ ಮಡದಿಯರು - ಲಿಚ್ಛವಿ ಕನ್ಯೆ ಕುಮಾರದೇವಿ ಹಾಗೂ ಕುಬೇರ ನಾಗ
ಶಕರಿ ಮತ್ತು ಶಶಾಂಕ ಎಂಬ ಬಿರುದುಳ್ಳ ಗುಪ್ತರ ಅರಸ - ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ
ನವರತ್ನ ಗಳೆಂಬ ಒಂಬತ್ತು ಮಂದಿ ವಿದ್ವಣ್ಮಣಿಗಳನ್ನು ಆಸ್ಥಾನದ ಕವಿಗಳನ್ನಾಗಿ ಹೊಂದಿದ್ದ ಗುಪ್ತ ದೊರೆ - ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನ
ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನಿಗೆ ಇದ್ದ ಬಿರುದುಗಳು - ವಿಕ್ರಮಾದಿತ್ಯ ವಿಕ್ರಮಾಂಕ ಹಾಗೂ ವಿಕ್ರಮ ಸಿಂಹ
ಗುಪ್ತರ ಇತಿಹಾಸದಲ್ಲಿ ಈತನ ಯುಗ ಸುವರ್ಣಯುಗವಾಗಿತ್ತು - ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ
ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಿಯಾತ್ರಿಕ - ಫಾಹಿಯಾನ್
ಪೋ - ಕೋ -ಕಿ ಕೃತಿಯ ಕರ್ತೃ - ಫಾಹಿಯಾನ್
ಮಹಾಕವಿ ಕಾಳಿದಾಸ ಈತನ ಆಸ್ಥಾನದಲ್ಲಿದ್ದ - ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನ
ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ ಈ ಮತದ ಅವಲಂಬಿಯಾಗಿದ್ದ - ವೈಷ್ಣವ ಮತಾವಲಂಬಿಯಾಗಿದ್ದ

ಗುಪ್ತರ ಕೊನೆಯ ಅಸಮರ್ಥ ದೊರೆಗಳು
ಕುಮಾರ ಗುಪ್ತ
ಸ್ಕಂದ ಗುಪ್ತ
ಬುಧಗುಪ್ತ
ನರಸಿಂಹ ಗುಪ್ತ

ಗುಪ್ತರ ಕಾಲದ ಸಂಸ್ಕೃತಿ
ಗುಪ್ತರ ಕಾಲವನ್ನು ಈ ಹೆಸರಿನಿಂದ ಕರೆಯಲಾಗಿದೆ - ಸುವರ್ಣಯುಗ
ಗುಪ್ತರ ಕಾಲವನ್ನು ಸುವರ್ಣಯುಗ ಎಂದು ಕರೆದವರು - ವಿ.ಎ.ಸ್ಮಿತ್
ಗುಪ್ತರ ಕಾಲವನ್ನು ಇವರ ಅಭ್ಯುದಯ ಕಾಲಕ್ಕೆ ಹೋಲಿಸಲಾಗಿದೆ - ಗ್ರೀಕ್ ಪೆರಿಕ್ಲಿಸ್ ಹಾಗೂ ಇಂಗ್ಲೆಂಡಿನ ಎಲಿಜಬೆತ್
ಹಿಂದೂ ಧರ್ಮದಲ್ಲಿ ನವೋದಯವನ್ನು ಉಂಟು ಮಾಡಿದವರು - ಗುಪ್ತರು
ಿವರ ಕಾಲದಲ್ಲಿ ಹಿಂದೂ ಧರ್ಮ ಪುನಃ ಏಳಿಗೆಗೆ ಬಂದಿತ್ತು - ಗುಪ್ತರು
ಶೈವ ಸಂಪ್ರದಾಯ ಸ್ಥಾಪಕ - ಲಾಕುಲೀಶ
ಶಕ್ತಿ ವಿಶಿಷ್ಟಾದ್ವೈತ ತತ್ವಕ್ಕೆ ಇವರ ಕಾಲದಲ್ಲಿ ದಾರಿ ದೊರಕಿತು - ಗುಪ್ತರು
ಗುಪ್ತರು ವಿಷ್ಣುವನ್ನು ಈ ಹೆಸರಿನಿಂದ ಪೂಜಿಸುತ್ತಿದ್ದರು - ಗದಾಧರ , ಕೃಷ್ಣ , ವಾಸುದೇವ ,ಜನರ್ಧಾನ , ಅನಂತಶಯನ , ನಾರಾಯಣ , ಗೋವಿಂದ
ಗುಪ್ತರು ಶಿವನನ್ನು ಈ ಹೆಸರಿನಿಂದ ಪೂಜಿಸುತ್ತಿದ್ದರು ೃ- ಮಹೇಶ್ವರ ,ಶಂಭು , ಶಂಕರ , ಹರ
ಗುಪ್ತರು ಪಾರ್ವತಿಯನ್ನು ಈ ಹೆಸರಿನಿಂದ ಪೂಜಿಸುತ್ತಿದ್ದರು - ಆದಿಶಕ್ತಿ , ಭಗವತಿ

ಸಾಹಿತ್ಯ
ಗುಪ್ತರ ಆಶ್ರಯ ಪಡೆದಿದ್ದ ವಿಧ್ವಾಂಸರಲ್ಲಿ ಅಗ್ರಗಣ್ಯನಾದವನು - ಕಾಳಿದಾಸ

ಕಾಳಿದಾಸನ ಕೃತಿಗಳು

ಸಂಸ್ಕೃತ ಕೃತಿಗಳು
ಕುಮಾರ ಸಂಭವ
ಶಾಕುಂತಲಾ
ವಿಕ್ರಮೋರ್ವಶೀಯ
ಮೇಘದೂತ
ಮಾಲವಿಕಾಗ್ನಿ ಮಿತ್ರ

ಭಾಷ ಕವಿಯ ನಾಟಕಗಳು
a. ಚಾರುದತ್ತ
b. ಮಧ್ಯಮ ವ್ಯಾಯೋಗ
c. ಧೂತವಾಕ್ಯ
d. ಬಾಲಚರಿತ
e. ಪ್ರತಿಮಾ
f. ಅಬಿಷೇಕ
g. ಅವಿಮಾರ್ಕ
h. ಪ್ರತಿಜ್ಞಾಯೋಗಂಧರಾಯಣ
i. ಸ್ವಪ್ನ ವಾಸವದ್ತ
j. ಧೂತ ಘಟೋತ್ಕಚ
k. ಊರು ಭಂಗ

ಮೃಚ್ಚಕಟಿಕ ನಾಟಕದ ಕರ್ತೃ - ಶೂದ್ರಕ
ಮುದ್ರಾರಾಕ್ಷಸದ ಕರ್ತೃ - ವಿಶಾಖದತ್ತ
ದೇವಿಗುಪ್ತರ ಕೃತಿಯ ಕರ್ತೃ - ವಿಶಾಖದತ್ತ
ಕಿರಾತಾರ್ಜುನಿಯ ಕೃತಿಯ ಕರ್ತೃ - ಭಾರವಿ
ದಶಕುಮಾರ ಚರಿತ್ರೆ ಹಾಗೂ ಕಾವ್ಯದರ್ಶ ಕೃತಿಯ ಕರ್ತೃ - ದಂಡಿ
ಪಂಚತಂತ್ರದ ಕರ್ತೃ - ವಿಷ್ಣುಶರ್ಮ
ಪಂಚತಂತ್ರ - ಇದು ವಿಶಿಷ್ಟ ನೀತಿಕತೆಗಳ ಸಂಗ್ರಹ
ಕಂಠಪಾಠದಲ್ಲಿ ವೇದಗಳು ಗ್ರಂಥರೂಪ ಪಡೆದದ್ದು ಇವರ ಕಾಲದಲ್ಲಿ - ಗುಪ್ತರು
ರಾವಣ ವಧ ಕೃತಿಯ ಕರ್ತೃ - ಭಟ್ಟ
ಉತ್ತರ ರಾಮನ ಚರಿತೆ ಕೃತಿಯ ಕರ್ತೃ - ಭವಭೂತಿ
ನೀತಿಶಾಸ್ತ್ರದ ಕರ್ತೃ - ಕಾಮಂದಕ
ಶಿಶುಪಾಲ ವಧ ಕೃತಿಯ ಕರ್ತೃ - ಮಾಘ
ಅಮರ ಕೋಶ ಕೃತಿಯ ಕರ್ತೃ - ಅಮರ ಸಿಂಹ
ಚರಕ ಸಂಹಿತೆಯ ಕರ್ತೃ - ಚರಕ
ಸುಶೃತ ಸಂಹಿತೆಯ ಕರ್ತೃ - ಸುಶೃತ
ಅಷ್ಟಾದ್ಯಾಯಿನಿ - ಪಾಣಿನಿ ( ವ್ಯಾಕರಣ )
ಶಿವಪುರಾಣ ಹಾಗೂ ವಿಷ್ಣು ಪುರಾಣದ ಕರ್ತೃ - ಭರ್ತೃಹರಿ
ಯೋಗಚಾರ ಭೂಮಶಾಸ್ತ್ರದ ಕರ್ತೃ - ಅಸಗ
ಬೃಹತ್ ಸಂಹಿತೆ ಹಾಗೂ ಬೃಹತ್ ಜಾತಕ ಕರ್ತೃ - ವರಾಹ ಮಿಹಿರ
ಅಷ್ಟಾಂಗ ಸಂಗ್ರಹ ( ವೈದ್ಯಗ್ರಂಥ ) ದ ಕರ್ತೃ - ವಾಗ್ಭಟ
ಸೂರ್ಯ ಸಿದ್ಧಾಂತ ( ಖಗೋಳ ಕೃತಿ )ಯ ಕರ್ತೃ - ಬ್ರಹ್ಮಗುಪ್ತ
ಆರ್ಯಭಟೀಯ (ಖಗೋಳ ) ಸೂರ್ಯಸಿದ್ಧಾಂತದ ಕರ್ತೃ - ಆರ್ಯಭಟ
ನಾಟ್ಯಶಾಸ್ತ್ರದ ಕರ್ತೃ - ಭರತಮುನಿ
ವರಾಹ ಮಿಹಿರ - ಖಗೋಳಜ್ಞನಾಗಿದ್ದ
ಗುಪ್ತರ ಕಾಲದ ಪ್ರಸಿದ್ದ ಶಿಲ್ಪ - ಶಂಕು

ವಿಜ್ಞಾನ ಕ್ಷೇತ್ರಕ್ಕೆ ಗುಪ್ತರ ಕೊಡುಗೆ
ಶೂನ್ಯ ಸಿದ್ಧಾಂತ ಹಾಗೂ ಬಿಂದುವಿನ ಉಪಯೋಗವನ್ನು ಬೆಳಕಿಗೆ ತಂದವನು - ಖ್ಯಾತ ಗಣಿತಜ್ಞ - ಬ್ರಹ್ಮಗುಪ್ತ ( ಸೊನ್ನೆ )
ಸೂರ್ಯ ಸಿದ್ಧಾಂತ ಅಥವಾ ಆರ್ಯಭಟೀಯ ಕೃತಿಯ ಕರ್ತೃ - ಆರ್ಯಭಟ
ಭಾರತದಲ್ಲಿ ಮೊದಲ ಭಾರಿಗೆ ಗ್ರಹಗಳ ಚಲನೆ ಹಾಗೂ ಗ್ರಹಣಗಳಾಗುವ ಬಗೆಗೆ ವಿವರಣಿಯನ್ನು ನೀಡಿದವರು - ಆರ್ಯಭಟ
ಬೃಹತ್ ಸಂಹಿತೆ ಎಂಬ ಕೃತಿಯನ್ನು ಬರೆದ ಖಗೋಳ ಶಾಸ್ತ್ರಜ್ಞನ ಹೆಸರು - ವರಾಹ ಮಿಹಿರ
ಅಷ್ಟಾಂಗ ಸಂಗ್ರಹ ಎಂಬ ವೈದ್ ಗ್ರಂಥವನ್ನು ರಚಿಸಿದವರು - ವಾಗ್ಭಟ

ಔಷದ ವೈಧ್ಯ
ಗುಪ್ತರ ಕಾಲದಲ್ಲಿ ಜೀವಿಸಿದ್ದ ಆಯುರ್ವೇದದ ಪಿತಾಮಹಾ - ಧನ್ವಂತರಿ
ಧನ್ವಂತರಿಯ ಪ್ರಸಿದ್ಧ ಕೃತಿ - ಆಯುರ್ವೇದ ನಿಘಂಟು
ವೈಧ್ಯಕೀಯ ಮತ್ತು ಗಿಡ ಮೂಲಿಕೆಗಳ ವಿಷಯವನ್ನೋಳಗೊಂಡ ಅತ್ಯಂತ ಪ್ರಾಚೀನ ಗ್ರಂಥ - ಧನ್ವಂತರಿಯ ಆಯುರ್ವೇದ ನಿಘಂಟು
ಆಯುರ್ವೇದ ಪದದ ಅರ್ಥ - ದೀರ್ಘಾಯಸ್ಸು ಮತ್ತು ಆರೋಗ್ಯದ ಅಧ್ಯಯನ ಎಂದರ್ಥ
ಆಯುರ್ವೇದ ಪದ್ಧತಿಯ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯನ್ನು ಅಭಿವೃದ್ದಿ ಪಡಿಸಿದವರು - ಎರಡನೇ ನಾಗರ್ಜುನ ಮತ್ತು ವಾಗ್ಭಟ
ರಸವೈಧ್ಯ ಕೃತಿಯ ಕರ್ತೃ - ಎರಡನೇ ನಾಗರ್ಜುನ
ಭಾರತದ ರಸಾಯನ ಶಾಸ್ತ್ರದ ಪಿತಾಮಹಾ - ಎರಡನೇ ನಾಗರ್ಜುನ

ಕಲಾ ವೈಭವ
ಗುಪ್ತರ ಕಾಲದ ಮೊದಲ ದೇವಾಲಯ - ಝಾನ್ಸಿಯ ಬಳಿಯ ದೇವಗಡದ ದಶಾವತಾರ ( ವಿಷ್ಣು ) ದೇವಾಲಯ
ಗುಪ್ತರ ಕಾಲದ ಶಿಲ್ಪಕಲೆಯಲ್ಲಿ ಪ್ರಧಾನವಾದುದು - ಮಾನವಾಕೃತಿಗಳು
ಅಜಂತಾ ದೇವಾಲಯ ಈ ಜಿಲ್ಲೆಯಲ್ಲಿದೆ - ಔರಂಗಾಬಾದ್ ( ಮಹಾರಾಷ್ಟ್ರ )
ಬೆಳ್ಳಿ , ಬಂಗಾರ ಹಾಗೂ ತಾಮ್ರದ ನಾಣ್ಯವನ್ನು ಹೊರಡಿಸಿದ ಗುಪ್ತ ದೊರೆ - ಚಂದ್ರಗುಪ್ತ
ಗುಪ್ತರ ಕಾಲದಲ್ಲಿದ್ದ ಅತ್ಯಂತ ದೊಡ್ಡ ಶಿಕ್ಷೆ - ಕೈಯನ್ನು ಕತ್ತರಿಸುವುದು

ಪ್ರಮುಖ ಅಂಶಗಳು
ಸಮುದ್ರಗುಪ್ತನ ವಿಜಯದ ಸಂಕೇತ - ಅಶ್ವಮೇಧಯಾಗ
ಕಂಠಪಾಠದಲ್ಲಿದ್ದ ವೇದಗಳುನ್ನು ಲಿಖಿತ ರೂಪದಲ್ಲಿ ಸಂಗ್ರಹಿಸಿದವನು - ವಶುಕ್ರ
ಕೌಮುದಿ ಮಹೋತ್ಸವ ನಾಟಕದ ಕರ್ತೃ - ವಿಚ್ಚಿಕೆ
ಕಾವ್ಯ ಮೀಮಾಂಸೆಯ ಕರ್ತೃ - ರಾಜಶೇಖರ
ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ - ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ
ಗುಪ್ತ ಸಂತತಿಯ ಪ್ರಥಮ ಐತಿಹಾಸಿಕ ದೊರೆ ಹಾಗೂ ನಿಜವಾದ ಗುಪ್ತ ಸಂತತಿಯ ಸ್ಥಾಪಕ - 1 ನೇ ಚಂದ್ರಗುಪ್ತ
ಸಮುದ್ರಗುಪ್ತನ ದಂಡ ನಾಯಕ - ಹರಿಷೇಣ
ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ - ಅಲಹಾ ಬಾದ್ ಸ್ತಂಭ ಶಾಸನ
ಸಮುದ್ರಗುಪ್ತನ ದಿಗ್ವಿಜಯಳು

ಉತ್ತರ ಭಾರತದ ದಿಗ್ವೀಜಯ
ಅಡವಿ ರಾಜರುಗಳೊಂದಿಗೆ ದಿಗ್ವೀಜಯ
ದಕ್ಷಿಣ ಭಾರತದ ದಿಗ್ವೀಜಯ
ಗಡಿನಾಡು ರಾಜ್ಯಗಳ ಮೇಲೆ ದಿಗ್ವೀಜಯ
ಗಣರಾಜ್ಯಗಳ ಮೇಲೆ ದಿಗ್ವೀಜಯ
ಅಶ್ವಮೇದ ಪರಾಕ್ರಮ ರಾಜಾಧಿರಾಜ , ಚಕ್ರವರ್ತಿ ಎಂಬ ಬಿರುದುಗಳನ್ನು ಹೊಂದಿರುವ ಗುಪ್ತ ಅರಸ - ಸಮುದ್ರಗುಪ್ತ
ಪರಮ ಭಾಗವತ ಎಂದು ಹೆಸರುವಾಸಿಯಾಗಿದ್ದ ಗುಪ್ತ ದೊರೆ - ಸಮುದ್ರಗುಪ್ತ
ವಿಕ್ರಮಾದಿತ್ಯ ಎಂಬ ಬಿರುದುಳ್ಳ ಗುಪ್ತ ದೊರೆ - 2 ನೇ ಚಂದ್ರಗುಪ್ತ
2 ನೇ ಚಂದ್ರಗುಪ್ತನ ತಾಯಿಯ ಹೆಸರು - ದತ್ತಾದೇವಿ
ದೇವಶ್ರೀ ,ದೇವಗುಪ್ತ ಎಂಬ ಬಿರುದು ಹೊಂದಿದ್ದ ಗುಪ್ತ ದೊರೆ - 2 ನೇ ಚಂದ್ರಗುಪ್ತ
2 ನೇ ಚಂದ್ರಗುಪ್ತ ಚಂದ್ರಗುಪ್ತನ ಎರಡನೇ ರಾಜಧಾನಿ - ಉಜ್ಜಯಿನಿ
ಭಾರತದ ಷೇಕ್ಸ್ ಫಿಯರ್ ಎಂದು ಖ್ಯಾತಿವೆತ್ತ ಕವಿ - ಕಾಳಿದಾಸ
ದೆಹಲಿಯ ಮೆಹ್ರೋಲಿಯ ಕಬ್ಬಿಣದ ಶಾಸನವನ್ನು ಬಿಡಿಸಿದ ಗುಪ್ತ ದೊರೆ - 2 ನೇ ಚಂದ್ರಗುಪ್ತ
ಗುಪ್ತರ ಸುವರ್ಣಯುಗವನ್ನು ಈ ಹೆಸರಿನಿಂದ ಕರೆಯಲಾಗಿದೆ - ಕ್ಲಾಸಿಕಲ್ ಯುಗ
ಗುಪ್ತರ ಆಡಳಿತ ಭಾಷೆ - ಸಂಸ್ಕೃತ
ನೀತಿಸಾರ ಕೃತಿಯ ಕರ್ತೃ - ಶುಕ್ಲ
ಜ್ಯೋತಿಷ್ಯ ಶಾಸ್ತ್ರ ಕೃತಿಯ ಕರ್ತೃ - ಕ್ಷಪಣಕ
ಭಾರತದ ನ್ಯೂಟನ್ ಎಂದು ಕರೆಯಲ್ಪಡುವ ಖಗೋಳ ಗಣಿತಜ್ಞ - ಬ್ರಹ್ಮಗುಪ್ತ
ಭೂಮಿಯ ಗುರುತ್ವಾಕರ್ಷಣಿಯ ಸಿದ್ಧಾಂತವನ್ನು ಮೊದಲೇ ತೋರಿಸಿಕೊಟ್ಟವನು - - ಬ್ರಹ್ಮಗುಪ್ತ
ಜ್ಯೋತಿಷ್ಯ ಸಂಹಿತೆಯ ಕೃತಿಯ ಕರ್ತೃ - ಆರ್ಯಭಟ
ಆರ್ಯಭಟನ ಶಿಷ್ಯ - ಲತದೇವ
ಸರ್ವ ಸಿದ್ಧಾಂತದ ಗುರು ಎಂದು ಹೆಸರನ್ನು ಪಡೆದಿದ್ದವನು - ಲತದೇವ
ಲೋಲಕ ನಿಯಮ ಕಂಡುಹಿಡಿದವನು - ಲತದೇವ
ಶಾಕುಂತಳ ನಾಟಕ ಕರ್ತೃ - ಕಾಳಿದಾಸ
ಗುಪ್ತ ಶಕೆಯನ್ನು ಆರಂಭಿಸಿದವನು - 1 ನೇ ಚಂದ್ರಗುಪ್ತ
ಗುಪ್ತ ಶಕೆಯ ಆರಂಭ - ಕ್ರಿ.ಶ. 320
ಗುಪ್ತರ ಚಕ್ರಾಧಿಪತ್ಯದಲ್ಲಿ ಆಡಳಿತ ಪದ್ಧತಿ - ರಾಜ ಪ್ರಭುತ್ವದ ಆಡಳಿತ
ಅರಸ ಹಾಗೂ ಮಂತ್ರಾಲೋಚನಾ ಸಭೆಯ ಮಧ್ಯಸ್ಥಗಾರ - ಕಂಚುಕಿ
ಉತ್ತರದಲ್ಲಿ ಪ್ರಾಂತ್ಯಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಭುಕ್ತಿ
ದಕ್ಷಿಣದಲ್ಲಿ ಪ್ರಾಂತ್ಯಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮಂಡಲ

ಕೇಂದ್ರಿಯ ಆಡಳಿತ
ರಾಜಪ್ರಭುತ್ವದ ಆಡಳಿತ ಅಸ್ತಿತ್ವದಲ್ಲಿತ್ತು
ರಾಜ ಆಡಳಿತದ ಮುಖ್ಯಸ್ಥನಾಗಿದ್ದ
ರಾಜನಿಗೆ ಸಲಹೆಗಾರರಾಗಿ - ಮಂತ್ರಿ ಪರಿಷತ್ತು ಅಸ್ತಿತ್ವದಲ್ಲಿತ್ತು
ಮಂತ್ರಿಗಳ ನಿರ್ಣಯಗಳನ್ನು ಅರಸನಿಗೆ ತಿಳಿಸಲು - ಅಮಾತ್ಯ ರೆಂಬ ಅಧಿಕಾರಿಗಳಿದ್ದರು
ಮಂತ್ರಿಗಳ ಕೆಳಗೆ - ನಾಗರಿಕ ಅಧಿಕಾರಿಗಳಿದ್ದರು

ಕಂದಾಯ ಆಡಳಿತ
ಭೂಕಂದಾಯ ಆದಾಯದ ಮೂಲವಾಗಿತ್ತು
ಉತ್ಪತ್ತಿಯ 1/6 ಅಥವಾ ¼ ಬಾಗ ಕಂದಾಯದ ರೂಪದಲ್ಲಿ ನೀಡಬೇಕಾಗಿತ್ತು
ನಗರ ಪ್ರದೇಶ ತೆರಿಗೆ ಕಾಡಿನ ಉತ್ಪನ್ನ ತೆರಿಗೆ ಹಾಗೂ ಗಣಿಗಳ ವಿಶೇಷ ತೆರಿಗೆ ಕೋಟೆಯ ಮೇಲಿನ ತೆರಿಗೆ ಮುಂತಾದುವು ತೆರಿಗೆಯ ಮೂಲವಾಗಿತ್ತು
ಸಾಮಂತರು ಕಪ್ಪ ಕಾಣಿಕೆಯನ್ನು ನೀಡುತ್ತಿದ್ದರು

ಮಿಲಿಟರಿ ಆಡಳಿತ
ಗುಪ್ತರು ನಾಲ್ಕು ರೀತಿಯ ಸೇನಾ ಬಲವನ್ನು ಹೊಂದಿದ್ದರು
ಕಾಲ್ದಳ , ಅಶ್ವದಳ , ಗಜದಳ ಮತ್ತು ನೌಕದಳ
ಶಸ್ತ್ರಾಸ್ತ್ರಗಳು - ಬಿಲ್ಲು , ಬಾಣ, ಕತ್ತಿ , ಕೊಡಲಿ ,ಈಟಿಗಳಿದ್ದವು
ಸೇನಾ ಅಧಿಕಾರಿಗಳು - ಮಹಾದಂಡನಾಯಕ , ಮಹಾಸೇನಾಪತಿ , ಮಹಾಬಲಾಧಿಕೃತ , ದಂಡನಾಯಕ , ಸಂಧಿ ವಿಗ್ರಹಿಕ , ಗೋಪ , ಹಾಗೂ ಮಹಾ ಸಂಧಿ ವಿಗ್ರಹಿಕ

ನ್ಯಾಯಿಕ ಆಡಳಿತ
ರಾಜ - ಮುಖ್ಯ ನ್ಯಾಯಾಧೀಶ
ಮಹಾದಂಡನಾಯಕ - ನ್ಯಾಯಿಕ ಹಾಗೂ ಸೇನಾ ಮುಖ್ಯಸ್ಥ
ಮಹಾ ಕ್ಷಪಾಟಲಿಕ - ದಾಖಲಾತಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ
ಶಿಕ್ಷೆ - ಮೃದುವಾಗಿತ್ತು
ಕಳ್ಳರನ್ನು - ಬಂಧನದಲ್ಲಿಡುತ್ತಿದ್ದರು
ರಾಜ್ಯಾದಾಯಕ್ಕೆ ದ್ರೋಹ ವಿಧಿಸುತ್ತಿದ್ದವರು - ಸಾರ್ವಜನಿಕವಾಗಿ ಮೆರವಣಿಗೆ ಮಾಡಿ ಆನೆಯಿಂದ ಮರಣದಂಡನೆ ವಿಧಿಸುತ್ತಿರು
ಬ್ರಾಹ್ಮಣರು ಮೋಸ ಮಾಡಿದರೆ - ಕಣ್ಣು ಕೀಳುತ್ತಿದ್ದರು

ಪ್ರಾಂತೀಯ ಆಡಳಿತ
ಶ್ರೇಣಿಯ - ಆಡಳಿತ ಅಸ್ತಿತ್ವದಲ್ಲಿತ್ತು
ಸಾಮ್ರಾಜ್ಯವನ್ನು ಉತ್ತರ ಹಾಗೂ ದಕ್ಷಿಣವಾಗಿ - ಪ್ರಾಂತ್ಯಗಳಾಗಿ ವಿಭಾಗಿಸಿದ್ದರು
ಉತ್ತರದ ಪ್ರಾಂತ್ಯವನ್ನು - ಭುಕ್ತಿ ಗಳೆಂದು ಕರೆಯುತ್ತಿದ್ದರು
ದಕ್ಷಿಣದ ಪ್ರಾಂತ್ಯಗಳನ್ನು - ಮಂಡಲಗಳೆಂದು ಕರೆಯುತ್ತಿದ್ದರು
ಪ್ರಾಂತ್ಯಗಳ ಮುಖ್ಯಸ್ಥರನ್ನು - ಉಪಾರಿಕ , ಗೋಪ , ಬೋಗಿಕ ,ಬೋಗಪತಿ ಹಾಗೂ ರಾಜಾಸ್ಥಾನಿಯರೆಂದು ಕರೆಯುತ್ತಿದ್ದರು
ಮಿಲಿಟರಿ ಅಥವಾ ಸೇನೆಯ ಮುಖ್ಯಸ್ಥ - ಬಾಲಧಿಕರಮಣಿಕ
ಪೊಲೀಸ್ ಮುಖ್ಯಸ್ಥ - ದಂಡಪಸಂಧಿಕರಣಿಕ
ಮಿಲಿಟರಿ ಖಜಾನೆಯ ಚಾನ್ಸಲರ್ - ರಣಭಂಡಾರಿಕ
ನ್ಯಾಯಾಂಗದ ಮುಖ್ಯಸ್ಥ - ಮಹಾದಂಡ ನಾಯಕ
ನ್ಯಾಯ ಪರಪಾಲನೆ ಮತ್ತು ಶಿಸ್ತಿನ ಅಧಿಕಾರಿ - ವಿನಯಾ ಸ್ಥಿತಿ ಸ್ಥಾಪಕ
ಕಾಲಾಳು ಹಾಗೂ ಅಶ್ವ ಸೈನ್ಯದ ಅಧಿಪತಿ - ಭಟಸ್ವಪತಿ
ಗಜದಳದ ಅಧಿಪತಿ - ಮಹಾಪಿಲ್ಲುಪತಿ
ದಂಡ ಹಾಗೂ ಸಾಲದ ಅಧಿಕಾರಿ - ಸಧಾನಿಕ

ಜಿಲ್ಲಾಡಳಿತ
ಭುಕ್ತಿಗಳನ್ನು - ವಿಷಯಗಳಾಗಿ ( ಜಿಲ್ಲೆ) ವಿಭಜಿಸಲಾಗಿದೆ
ಮಂಡಲಗಳನ್ನು - ನಾಡು ( ಕೊಟ್ಟಂ ) ಗಳಾಗಿ ವಿಭಜಿಸಲಾಗಿದೆ
ಜಿಲ್ಲಾ ಮುಖ್ಯಸ್ಥರು - ಆಯುಕ್ತರು ಅಥವಾ ವಿಷಯ ಪತಿ
ಜಿಲ್ಲೆಗಳು - ಹಲವು ಹಳ್ಳಿಗಳಾಗಿ ವಿಭಜಿಸಸ್ಪಟ್ಟಿತ್ತು
ಹಳ್ಳಿಯ ಹಿರಿಯರು - ಮಹಟ್ಟರು
ಹಲವು ಹಳ್ಳಿಗಳು - ಗ್ರಾಮಗಳಾಗಿ ವಿಭಜಿಸಲಾಗಿದೆ
ಗ್ರಾಮಗಳ ಮುಖ್ಯಸ್ಥರು - ಗ್ರಾಮಿಕರು
ಗ್ರಾಮಗಳಲ್ಲಿ - ಸುಂಕ ವಸೂಲಿಗಾರರಿದ್ದರು
ಸುಂಕ ವಸೂಲಿಗಾರರು - ಸೌಲ್ ಕಿಕರು
ಕೋಟೆ ಹಾಗೂ ಅರಣ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು - ಗೌಲ್ ಮಿಕರು ಹಾಗೂ ಅಗ್ರಹಾರಿಕ
ಅಕ್ಷಪಟಲ - ಮಹಾಕ್ಷಪಟಲಿನ ಅಧೀಕನಕ್ಕೆ ಒಳಪಟ್ಟಿದ್ದ ಜಿಲ್ಲಾ ಮಾಹಿತಿಗಳನ್ನು ಹೊಂದಿದ್ದ ಕಛೇರಿ
ಈ ಕಛೇರಿಯ ಗುಮಾಸ್ತರನ್ನು - ಲೇಖಕರು ಮತ್ತು ದಿವಿರ ರೆಂದು ಕರೆಯುತ್ತಿದ್ದ್ರರು
ದಾಖಾಲಾತಿಗಳ ಮುಖ್ಯಾಧಿಕಾರಿಗಳನ್ನು - ಕರಣಿಕರು
ದಾಖಾಲಾತಿಗಳ ಕರಡು ತಯಾರಕರು - ಸಸಯಿತ್ರಿ ಅಥವಾ ಕರ್ ತ್ರಿ
ಇವರ ಕೈ ಕೆಳಗೆ - ಸರ್ವಧ್ಯಕ್ಷರು ಅಥವಾ ಸಾಮಾನ್ಯ ಮೇಲ್ವಿಚಾರಕರಿದ್ದರು
ಕುಲಪುತ್ರರು - ಭ್ರಷ್ಟಚಾರವನ್ನು ತಡೆಗಟ್ಟವ ಅಧಿಕಾರಿಗಳಿದ್ದರು
ಜಿಲ್ಲಾಡಳಿತ ಹಾಗೂ ಪ್ರಾಂತ್ಯಾಡಳಿತದ ಅಧಿಕಾರಿಗಳಿಗೆ - ಕುಮಾರಮಾತ್ಯ ಎಂಬ ಬಿರುದುಗಳಿದ್ದವು

ನಗರಾಡಳಿತ
ನಗರಾಡಳಿತ - ಪುರಪಾಲ ಅಥವಾ ನಗರ ರಕ್ಷಕರು ಎಂಬ ಮುಖ್ಯಸ್ಥನ ಅಧೀನಕ್ಕೆ ಒಳಪಟ್ಟಿತ್ತು
ನಗರಗಳು - ಮಂಡಳಿಗಳನ್ನು ಒಳಗೊಂಡಿತ್ತು
ನಗರಗಳಲ್ಲಿನ ಅಧಿಕಾರಿಗಳು - ನಗರಸಭೆಯ ಮುಖ್ಯಸ್ಥ , ವರ್ತಕ , ವೃತ್ತಿ ಸಂಘದ ಪ್ರಮುಖ ಪ್ರತಿನಿಧಿ , ಕಸುಬುದಾರರ ಪ್ರತಿನಿಧಿ ಹಾಗೂ ಪ್ರಮುಖ ದಾಖಾಲಾತಿ ಅಧಿಕಾರಿಗಳು
ಅವಾಸ್ತಿಕ - ಧರ್ಮಶಾಲೆಯ ಮುಖ್ಯಸ್ಥರು

ಗ್ರಾಮಾಡಳಿತ
ಗ್ರಾಮಗಳ ಮುಖ್ಯಸ್ಥ - ಗ್ರಾಮಿಕ
ಗ್ರಾಮಗಳ ಮಂಡಳಿ - ಹೆಗ್ಗಡೆ ಹಾಗೂ ಗ್ರಾಮದ ಹಿರಿಯರಿಂದ ಕೂಡಿತ್ತು
ಸರಹದ್ದನ್ನು ನಿಗಧಿ ಪಡಿಸುವವರು - ಧೂತ ಅಥವಾ ಹರಿಕಾರ ಅಥವಾ ಸೀಮಾಕರ್ ಮಕಾರ

ಸಾಮಾಜಿಕ ಪರಿಸ್ಥಿತಿ
ಜಾತಿಪದ್ಧತಿ - ಅಸ್ತಿತ್ವದಲ್ಲಿತ್ತು
ಅನುಲೋಮ ವಿವಾಹ - ಉನ್ನತ ಜಾತಿಯ ಪುರುಷರು ಕೆಳಜಾತಿಯ ಸ್ತ್ರೀಯರನ್ನು ವಿವಾಹ ಮಾಡಿಕೊಳ್ಳುವುದು
ಪ್ರತಿಲೋಮ ವಿವಾಹ - ಕೆಳಜಾತಿಯ ಪುರುಷರು ಉನ್ನತ ಜಾತಿಯ ಸ್ತ್ರೀಯರನ್ನು ವಿವಾಹವಾಗುವುದು
ಚಾಂಡಾಲರು - ಚಾಂಡಾವೂಲಿ ಕಾರ್ಯನಿರ್ವಹಿಸುತ್ತಿದ್ದರು ( ಅಸ್ಪೃಶ್ಯರು )
ಶೀಲಾಭಟ್ಟರಿಕಾ - ಗುಪ್ತರ ಕಾಲದ ಪ್ರಮುಖ ಸ್ತ್ರೀ ಬರಹಗಾರ್ತಿ
ಸತಿಪದ್ದತಿ - ಅಸ್ತಿತ್ವದಲ್ಲಿತ್ತು
ವಿಧವಾ ವಿವಾಹ - ಅಸ್ತಿತ್ವದಲ್ಲಿತ್ತು

ಧಾರ್ಮಿಕ ಪರಿಸ್ಥಿತಿ
ಹಿಂಧೂ ಧರ್ಮದ ಅನುಯಾಯಿಗಳಾಗಿದ್ದರು
ಬೌದ್ಧ ಧರ್ಮ - ರಾಜಧರ್ಮ ಎಂದು ಘೋಷಿಸಲಾಗಿತ್ತು
ವೈಷ್ಣವ ಧರ್ಮ ಹಾಗೂ ಶೈವಧರ್ಮ ಹೆಚ್ಚು ಪ್ರಾಧಾನ್ಯತೆ ಪಡೆದಿತ್ತು
ಗುಪ್ತರ ಕಾಲದ್ಲಿ ವಿಷ್ಣುವಿನ 10 ನೇ ಅವತಾರ - ಬುದ್ಧನಾಗಿದ್ದ
ನೇಪಾಳ ಹಾಗೂ ಟಿಬೆಟ್ ಗಳಲ್ಲಿ ತಾರೆಯರ ಪಂಥವೆಂದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಪಂಥ
ದ್ವೀತಿಯ ಜೈನ ಸಮ್ಮೇಳನ ನಡೆದ ಪ್ರದೇಶ - ವಲ್ಲಭ
ದ್ವೀತಿಯ ಜೈನ ಸಮ್ಮೇಳನ ನಡೆದ ವರ್ಷ - ಕ್ರಿ.ಶ.454 ರಲ್ಲಿ
ಕ್ರೈಸ್ತ ಧರ್ಮ ಭಾರತಕ್ಕೆ ಪ್ರವೇಶಿಸಿದ್ದು - 1 ನೇ ಶತಮಾನದಲ್ಲಿ
ಗುಪ್ತರ ಕಾಲದ ಸಿರಿಯನ್ ಚರ್ಚು ಈ ಪ್ರದೇಶದಲ್ಲಿತ್ತು - ಮಲಬಾರ್ ತೀರ
ಗ್ರೀಕ್ ನ ಚರಿತ್ರೆಯಲ್ಲಿ ಈತನ ಕಾಲವನ್ನು ಶ್ರೇಷ್ಠತೆಯ ಯುಗ ಅಥವಾ ಕ್ಲಾಸಿಕಲ್ ಯುಗ ಎಂದು ಕರೆಯಲಾಗಿದೆ - ಪೆರಿಕ್ಲಿಸ್
ಸ್ವರ್ಗೀಯ ಸುಂದರ ತರುಣಿಯ ಅದ್ಭುತ ಕಥೆಯನ್ನೊಳಗೊಂಡ ಕಾಳಿದಾಸನ ಕೃತಿ - ವಿಕ್ರಮೋರ್ವಶೀಯಾ
ಭಾರತದ ನಾಟಕಗಳಲ್ಲಿ ಸರ್ವೋತ್ಕೃಸ್ಟವಾದ ಪ್ರಾಚೀನ ನಾಟಕ - ಶೂದ್ರಕನ ಮೃಚ್ಛಕಟಿಕ
ಬೃಹತ್ ಕಥಾ ಅಥವಾ ವಡ್ಡ ಕಥಾ ಕೃತಿಯ ಕರ್ತೃ - ಗುನಾಡ್ಯ
ಗುಪ್ತರ ಕಾಲದ ವೈಧ್ಯ ತ್ರಿವಳಿಗಳು - ಚರಕ ಶುಶ್ರೂತ ಹಾಗೂ ವಾಗ್ಭಟ
ಆನೆಗಳ ರೋಗಗಳಿಗೆ ಸಂಭಂದಿಸಿದ ಕೃತಿ - ಹಸ್ತಾಯುಧ
ಖಗೋಳ ಶಾಸ್ತ್ರದ ಬೈಬಲ್ ಎಂದು ಕರೆಯಲ್ಪಟ್ಟ ಕೃತಿ - ಪಂಚಸಿದ್ಧಾಂತಿಕ
ಪಂಚಸಿದ್ಧಾಂತಿಕ ಕೃತಿಯ ಕರ್ತೃ ವರಾಹ ಮಿಹಿರ
ಗಣಿತ ಖಗೋಳ ಶಾಸ್ತ್ರಕ್ಕಿಂತ ಭಿನ್ನವಾದ ವಿಷಯ ಎಂದು ಪ್ರಥಮ ಭಾರಿಗೆ ಹೇಳಿದ ವ್ಯಕ್ತಿ - ಆರ್ಯಭಟ
ದತ್ತಿಯ ರೂಪದಲ್ಲಿ ನೀಡಲಾಗುತ್ತಿದ್ದ ಗ್ರಾಮಗಳನ್ನು ಈ ಹೆಸರಿನಿಂದ ಕರೆಯಲಾಗಿದೆ - ಅಗ್ರಹಾರಗಳು
ಗುಪ್ತರ ನಂತರದ ಕಾಲವಧಿಯಲ್ಲಿ ಝೀಲಂ ನದಿಗೆ ಅಣಿಕಟ್ಟನ್ನು ಕಟ್ಟಿಸಿದವನು - ಕಾಶ್ಮೀರದ ರಾಜ ಅವಂತಿ ವರ್ಮನ ಸಚಿವನಾದ ಸೂರ್ಯ ಅಥವಾ ಸುಯ್ಯ
ಸಹ್ರಲಿಂಗ ಸರೋವರವದ ನಿರ್ಮಾತೃ ಚಾಳುಕ್ಯ ಅರಸ - ಸಿದ್ದಲಿಂಗ ರಾಜ
ಭೂಪಾಲದ ಬಳಿ ಭೋಜಪುರ ಎಂಬ ಸರೋವರದ ನಿರ್ಮಾತೃ - ಪರಮಾರರ ಅರಸ - ರಾಜಭೋಜ
ನಲಂದಾ ವಿ.ವಿ.ನಿಲಯದ ನಿರ್ಮಾತೃ - ಮೊದಲನೆಯ ಕುಮಾರ ಗುಪ್ತ
ಅಶ್ವಮೇಧ ಚಿಹ್ನೆಯುಳ್ಳ ನಾಣ್ಯಗಳನ್ನು ಹೊರಡಿಸಿದ ಗುಪ್ತ - ಸಮುದ್ರಗುಪ್ತ
ದಕ್ಷಿಣ ಭಾರತಕ್ಕೆ ದಂಡೆತ್ತಿ ಹೋದ ಗುಪ್ತ ದೊರೆ - ಸಮುದ್ರಗುಪ್ತ
ವಿಕ್ರಮಾಂಕದೇವಚರಿತ ಕೃತಿಯ ಕರ್ತೃ - ಬಿಲ್ಹಣ
ಸಮುದ್ರಗುಪ್ತನ ಆಲ್ವಿಕೆಯ ಅವಧಿ - 40 ವರ್ಷ
ವೀಣಾ ಪಾಣಿಯ ಚಿತ್ರವಿರುವ ನಾಣ್ಯ ಹೊರಡಿಸಿದವನು - ಸಮುದ್ರಗುಪ್ತ
ಸಿಂಹ ಶೈಲಿಯ ನಾಣ್ಯಗಳನ್ನು ಹೊರಡಿಸಿದ ಗುಪ್ತ ದೊರೆ - 2 ನೇ ಚಂದ್ರಗುಪ್ತ
ಗುಪ್ತರ ಕಾಲದಲ್ಲಿ ದಖನ್ ಪ್ರದೇಶದ ಅತ್ಯಂತ ಬಲಿಷ್ಠ ರಾಜವಂಶ - ವಾಕಟಕರು
ಗುಪ್ತ ಸಾಮ್ರಾಜ್ಯವನ್ನು ನಾಶಗೊಳಿಸಿದವರು - ಹೂಣರು
ಪರಾಕ್ರಮಾಂಕ ಎಂಬ ಬಿರುದುಳ್ಳ ಗುಪ್ತ ದೊರೆ - ಸಮುದ್ರಗುಪ್ತ
ಸಮುದ್ರಗುಪ್ತನ ದಿಗ್ವಿಜಯದ ಸಂಧರ್ಭದಲ್ಲಿದ್ದ ಕಂಚಿಯ ಅರಸ - ವಿಷ್ಣುಗೋಪ
ಗುಪ್ತರಾಜರು ಪುನರುತ್ಥಾನ ಗೊಳಿಸಿದ ಭಾಷೆ - ಸಂಸ್ಕೃತ
ಆರು ಬಗೆಯ ಕಲಾತ್ಮಕ ನಾಣ್ಯಗಳನ್ನು ಟಂಕಿಸಿದ ಗುಪ್ತ ದೊರೆ - ಕುಮಾರ ಗುಪ್ತ
ಪ್ರತಿಮಾ ನಾಟಕದ ಕರ್ತೃ - ಭಾಷ
ಸಮುದ್ರಗುಪ್ತನ ಆಸ್ಥಾನದ ಕವಿ - ಹರಿಷೇಣ
ಗುಪ್ತರ ಕಾಲದ ಪ್ರಸಿದ್ದ ಜ್ಯೋತಿಷ್ಯ - ವರಾಹ ಮಿಹಿರ
ಸ್ಕಂದಗುಪ್ತನ ಪ್ರಮುಖ ಕದನ - ಹೂರೊಡನೆ ಕಾದಾಟ

ಗುಪ್ತರ ಅವನತಿಗೆ ಕಾರಣಗಳು
ಅಸಮರ್ಥ ಉತ್ತರಾಧಿಕಾರಿಗಳು
ಹೂಣರ ಧಾಳಿ
ಆಂತರಿಕ ಕಲಹ
ಜನರು ಹಾಗೂ ಸೈನಿಕರ ಸುಖಲೋಪ ಜೀವನ ( ಸೈನಿಕ ಶಕ್ತಿಯ ಕುಗ್ಗುವಿಕೆ )
ಗುಪ್ತರ ಮಾಂಡಲಿಕರ ಪ್ರಾಬಲ್ಯ
ದಾಶಮಿಕ ಸಂಖ್ಯಾ ಕ್ರಮವನ್ನು ಜಾರಿಗೆ ತಂದವನು - ಆರ್ಯಭಟ
ಮಹೇಂದ್ರಾಧಿತ್ಯ ಬಿರುದುಳ್ಳ ಅರಸ - 1 ನೇ ಕುಮಾರ ಗುಪ್ತ
ಗುಪ್ತರ ಕೊನೆಯ ಶ್ರೇಷ್ಠ ದೊರೆ - ಸ್ಕಂದಗುಪ್ತ
ವಿಸುದ್ಧ ಮಗ್ಗ ಕೃತಿಯ ಕರ್ತೃ - ಬುದ್ಧ ಘೋಷ
ಗುಪ್ತರ ಕಾಲದ ಪ್ರಸಿದ್ದ ವೈಶ್ಯಾವಾಟಿಕೆಯ ಕೇಂದ್ರ - ನಾಗರವಧು

ಗುಪ್ತರ ಕಾಲದ ವಿವಿಧ ತೆರಿಗೆಗಳು
ಭಾಗ - ಕೃಷಿಕರು ತಮ್ಮ ಉತ್ಪನ್ನದ 1/6 ಭಾಗದ ಕರ
ಭೋಗ - ತರಕಾರಿ ,ಹಣ್ಣು ಹಂಪಲು , ಸೌದೆ ,ಹೂವುಗಳನ್ನು ಅರಮನೆಗೆ ನೀಡುವುದು
ಕಾರಾ - ವಿಶೇಷ ಸಂಧರ್ಭದಲ್ಲಿ ಗ್ರಾಮಗಳ ಮೇಲೆ ವಿಧಿಸುತ್ತಿದ್ದ ತೆರಿಗೆ
ಬಾಲಿ - ಪ್ರಜೇಗಳು ಸ್ವ ಇಚ್ಛೆಯಿಂದ ಕೊಡುತ್ತಿದ್ದ ತೆರಿಗೆ
ಉದಿಯಾಗ - ಪೊಲೀಸ್ ಹಾಗೂ ನೀರಿನ ಸರಬರಾಜಿಗೆ ವಿಧಿಸುತ್ತಿದ್ದ ತೆರಿಗೆ
ಉಪಕಾರಿ ಕರ -
ಹಿರಣ್ಯ - ಸುವರ್ಣ ನಾಣ್ಯಗಳನ್ನು ಕರದ ರೂಪದಲ್ಲಿ ನೀಡುವುದು
ವತಭೂತ - ಗಾಳಿ,ಭೂತಗಳ ,ಧರ್ಮವಿಧಿ ಸಂಸ್ಕಾರಗಳ ತೆರಿಗೆ
ಹಲೀವ ಕರ - ಉಳುವವನು ತೆರಬೇಕಾಗಿದ್ದ ಕರ
ಶುಲ್ಕ - ವರ್ತಕರು ತಮ್ಮ ಸರಕು ಸಾಗಿಸಲು ನೀಡುತ್ತಿದ್ದ ತೆರಿಗೆ

ಗುಪ ಶಕೆಯನ್ನು ಈ ಹೆಸರಿನಿಂದಲೂ ಕರೆಯುವರು - ವಲ್ಲಭಿ ಶಕೆ
ಅಸ್ಸಾಂ ನ ಪ್ರಾಚೀನ ಹೆಸರು - ಕಾಮರೂಪ
ಉಜ್ಜಯಿನಿ ಈ ಪ್ರದೇಶದಲ್ಲಿದೆ - ಮಧ್ಯಪ್ರದೇಶ
ಪುನರ್ಭೂ ಪದದ ಅರ್ಥ - ವಿವಾಹವಾದ ಪದ್ಧತಿ
ಗುಪ್ತರ ಕಾಲದ ತಾಮ್ರ ಎರಕದ ಮೂರ್ತಿ ಪ್ರಸ್ತುತ ಈ ಮ್ಯೂಸಿಯಂನಲ್ಲಿದೆ - Barminggyam Musium
ಅಮರ ಕೋಶದ ನಿಜವಾದ ಹೆಸರು - ನಾಮಲಿಂಗಾನು ಶಾಸನಂ
ಗ್ರೀಕರು ಭಾರತದಿಂದ ಕೊಂಡೋಯ್ದ ಅಂಕೆಯನ್ನು ಈ ಹೆಸರಿನಿಂದ ಕರೆಯಲಾಗಿದೆ - ಅರೇಬಿಕ್
ಭೂಮಿಯ ಗುಂಡಾಗಿದೆ ಎಂಬ ವೈಜ್ಞಾನಿಕ ಸತ್ಯವನ್ನು ಮೊತ್ತ ಮೊದಲು ಸಾರಿದ ಭಾರತೀಯ ಖಗೋಳ ಶಾಸ್ತ್ರಜ್ಞ - ಆರ್ಯಭಟ
ಭುಕ್ತಿಗಳನ್ನು ನೋಡಿಕೊಳ್ಳುತ್ತಿದ್ದವರು - ಉಪರೀಕರು
ಗುಪ್ತರ ಸಾಮ್ರಾಜ್ಯದ ಸ್ಥಾಪನೆಯಾದದ್ಧು - ಕ್ರಿ.ಶ.4 ನೋ ಶತಮಾನದಲ್ಲಿ

ಪ್ರಮುಖ ಅಂಶಗಳು
ಪಾಟಲಿಪುತ್ರ - ಗುಪ್ತರ ರಾಜಧಾನಿ
ಸಾರಾನಾಥ - ಗುಪ್ತರ ಕಾಲದ ಧಾರ್ಮಿಕಾ ಸ್ತೂಪ
ಅಲಹಾಬಾದ್ - ಸಮುದ್ರಗುಪ್ತನ ಸ್ತಂಭ ಶಾಸನವಿದೆ
ಮೆಹ್ರೌಲಿ - ತುಕ್ಕುಹಿಡಿಯದ ಕಬ್ಬಿಣದ ಸ್ತಂಭ
ಅಜಂತಾ - ಗುಪ್ತರ ಗುಹಾಲಯ ಭಿತ್ತಿಚಿತ್ರಗಳಿವೆ
ಸಮುದ್ರಗುಪ್ತನ ತಂದೆಯ ಹೆಸರು - 1 ನೇ ಚಂದ್ರಗುಪ್ತ
ಕೃಷ್ಣ ಚರಿತ ಕೃತಿಯ ಕರ್ತೃ - ಸಮುದ್ರಗುಪ್ತ
ಮಾಗಶಿಖಾವನದ ಬಳಿ ಚೀನಾ ಯಾತ್ರಿಕರಿಗಾಗಿ ದೇವಾಲಯವನ್ನು ನಿರ್ಮೀಸಿದ ಗುಪ್ತ ದೊರೆಯ ಹೆಸರು - ಶ್ರೀಗುಪ್ತ ( ಮೂಲ ಪುರುಷ )
ಮೊದಲನೇ ಚಂದ್ರಗುಪ್ತನ ತಂದೆ - ಘಟೋತ್ಕಚ

ಗುಪ್ತರ ಆಸ್ಥಾನದ ನವರತ್ನಗಳು
ಷಪಣಿಕ
ಧನ್ವಂತರಿ
ಅಮರಸಿಂಹ
ವೇತಾಲಭಟ್ಟ
ಘಟಕರ್ಪರ
ವರರುಚಿ
ಶಂಕು
ಮರಾಹ ಮಿಹಿರ
ಕಾಳಿದಾಸ

ಗುಪ್ತರ ಉತ್ತರಾಧಿಕಾರಿಗಳು
a. 1 ನೇ ಕುಮಾರ ಗುಪ್ತ
b. ಸ್ಕಂದ ಗುಪ್ತ
c. 2ನೇ ಕುಮಾರ ಗುಪ್ತ
d. ಬುದ್ಧಗುಪ್ತ
e. ನರಸಿಂಹ ಗುಪ್ತ
f. ವಿಷ್ಣುಗುಪ್ತ

ಗುಪ್ತರ ಕಾಲದ ದೇವಾಲಯಗಳು
a. ವಿಷ್ಣು ಮತ್ತು ನರಸಿಂಹ ದೇವಾಲಯ - ತ್ರಿಗಾವ ( ಜಬಲಾಪುರ )
b. ಶಿವ ದೇವಾಲಯ - ಎರಾನ್ ( ಭಿಲ್ತು )
c. ಸೂರ್ಯ ದೇವಾಲಯ - ವೈಶಾಲಿ (ಪಾಟ್ನ )
d. ಭೂಮಾರ ದೇವಾಲಯ - ಸಾಂಚಿ ( ಭೂಪಾಲ )

ಚಿತ್ರಕಲೆಯ ಕೇಂದ್ರಗಳು
a. ಅಜಂತಾ ಗುಹಾಲಯ
b. ಎಲ್ಲೋರ ಗುಹಾಲಯ
c. ಭಾಗ್ ಗುಹಾಲಯ

ಮೊಟ್ಟ ಮೊದಲ ಭಾರಿಗೆ ಭಾರಿ ಪ್ರಮಾಣದಲ್ಲಿ ಚಿನ್ನದ ನಾಣ್ಯಗಳನ್ನು ಹೊರ ತಂದ ಗುಪ್ತ ದೊರೆ - ಸಮುದ್ರಗುಪ್ತ
2 ನೇ ಚಂದ್ರಗುಪ್ತನಿಂದ ಸೋಲಿಸಲ್ಪಟ್ಟ ಶಕ ರಾಜ - 3 ನೇ ರುದ್ರಸಿಂಹ
ಭಗವಂತನ ಅವತಾರ ಸಿದ್ದಾಂತ ಪ್ರಾರಂಭವಾದುದು ಇವರ ಕಾಲದಲ್ಲಿ - ಗುಪ್ತರಕಾಲದಲ್ಲಿ
Record Of Buddist Kingdoms ಕೃತಿಯ ಕರ್ತೃ - ಫಾಹಿಯಾನ್
ಗುಪ್ತರ ಕಾಲದಲ್ಲಿ ಆವಿಷ್ಕಾರಗೊಂಡ ಹಿಂದೂ ಪವಿತ್ರ ಗ್ರಂಥ - ಭಗವದ್ಗೀತೆ
ಜಮೀನ್ದಾರಿ ವ್ಯವಸ್ಥೆಯು ಇವರ ಕಾಲದಲ್ಲಿ ಆರಂಭವಾಯಿತು - ಗುಪ್ತರು
ಗುಪ್ತರು ಗೊತಮ ಬುದ್ಧನನ್ನು ಇವನ ಆವತಾರವೆಂದು ನಂಬಿ ಪೂಜಿಸುತ್ತಿದ್ದರು - ವಿಷ್ಣುವಿನ ಅವತಾರ
ಗುಪ್ತರ ಕಾಲದಲ್ಲಿ ಸಂಸ್ಕೃತ ವ್ಯಾಕರಣವನ್ನು ರಚಿಸಿದವರು - ಪಾಣಿನಿ ಮತ್ತು ಪತಂಜಲಿ
ಹಿಂದೂ ಎಂಬ ಪದವನ್ನು ಮೊಟ್ಟ ಮೊದಲಿಗೆ ಬಳಸಿದವರು - ಅರಬ್ಬರು
ಮೌರ್ಯರ ಕಾಲದ ಅರ್ಥಸಾಸ್ತ್ರಕ್ಕೆ ಹೋಲಿಸಬಹುದಾದ ಗುಪ್ತರ ಕಾಲದ ಗ್ರಂಥ - ಕಾಮಾಂಧಕನು ರಚಿಸಿದ ನೀತಿ ಪಾಠಗ್ರಂಥ
ಅಂಗ್ - ಕೋಕ್ - ಕೋಟ್ - ದೇವಾಲಯವಿರುವುದು - ಕೊಂಬೋಡಿಯಾದಲ್ಲಿ
ಗುಪ್ತರ ಶಾಸನದ ಮೇಲಿರುತ್ತಿದ್ದ ಚಿಹ್ನೆ - ಗರುಡ
ಗುಪ್ತರ ಕಾಲದ ಪಶ್ಚಿಮ - ಪೂರ್ವ ರಾಷ್ಟ್ರದ ಪ್ರಮುಖ ವ್ಯಾಪಾರ ಕೇಂದ್ರ - ಇಥಿಯೋಪಿಯಾ
ಗುಪ್ತರ ಕಾಲದ ಬೆಳ್ಳಿಯ ನಾಣ್ಯದ ಹೆಸರು - ರೂಪ್ಯಕ ಅತವಾ ದಿವಾರ್
ಆರ್ಯಭಟನು ಈ ಪ್ರಾಂತ್ಯಕ್ಕೆ ಸೇರಿದವನು - ಪಾಟಲಿಪುತ್ರ
ಗುಪ್ತರ ಯುಗದಲ್ಲಿ ಗುಣಮಟ್ಟವುಳ್ಳ ಕಬ್ಬು ಬೆಳೆಗೆ ಪ್ರಸಿದ್ದವಾದ ಪ್ರದೇಶ - ಉತ್ತರ ಬಂಗಾಳಿ
ಗಂಗಮಾಧವ ಕೃತಿಯ ಕರ್ತೃ - 2 ನೇ ಚಂದ್ರಗುಪ್ತ
ರಂಘವಂಶ ಕೃತಿಯ ಕರ್ತೃ - ಕಾಳಿದಾಸ
ಚಂದ್ರಗುಪ್ತ ವಿಕ್ರಮಾದಿತ್ಯನ ಪ್ರೀತಿಯ ಆರಾಧ್ಯ ದೈವ - ಶಿವ
ಕಾಳಿದಾಸನ ಅಭಿಜ್ಞಾನ ಶಾಕುಂತಳೆ ಕೃತಿಯನ್ನು ಆಂಗ್ಲ ಭಾಷೆಗೆ ಅನುವಾದಿಸಿವರು - ವಿಲಿಯಂ ಜೋನ್ಸ್.

ಕೃಪೆ: ವಿಕಿಪೀಡಿಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ರಾಷ್ಟ್ರೀಯ ಹಬ್ಬಗಳು

ಭಾರತದ ರಾಷ್ಟ್ರೀಯ ಹಬ್ಬಗಳು.Indian National Festivals ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಭಾರತ ದೇಶವು ಜಾತ್ಯತೀತ ದೇಶವಾಗಿದೆ, ಇಲ್ಲಿ ಎಲ್ಲಾ ಜಾತಿ ಧರ್ಮದ ಜನರು ಎಲ್ಲಾ ಟೀಜ್ ಹಬ್ಬವನ್ನು ಬಹಳ ಆಡಂಬರದಿಂದ ಆಚರಿಸುತ್ತಾರೆ. ರಾಖಿ, ದೀಪಾವಳಿ, ದಸರಾ, ಈದ್, ಕ್ರಿಸ್‌ಮಸ್ ಮತ್ತು ಅನೇಕ ಜನರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಭಾರತದ ದೇಶದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ, ಧರ್ಮದ ಪ್ರಕಾರ ವಿಭಿನ್ನ ಹಬ್ಬಗಳಿವೆ. ಆದರೆ ಅಂತಹ ಕೆಲವು ಹಬ್ಬಗಳಿವೆ, ಅವು ಯಾವುದೇ ಜಾತಿಯವರಲ್ಲ, ಆದರೆ ನಮ್ಮ ರಾಷ್ಟ್ರವನ್ನು ನಾವು ರಾಷ್ಟ್ರೀಯ ಹಬ್ಬ ಎಂದು ಕರೆಯುತ್ತೇವೆ. ಭಾರತದ ರಾಷ್ಟ್ರೀಯ ಹಬ್ಬ. (Indian national festivals in Kannada ). 1947 ರಿಂದ ದೇಶದ ಸ್ವಾತಂತ್ರ್ಯದ ನಂತರ, ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಭಾಗವಾದವು, ಅಂದಿನಿಂದ ನಾವು ಅವರನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ. ಈ ಹಬ್ಬವು ನಮ್ಮ ರಾಷ್ಟ್ರೀಯ ಏಕತೆಯನ್ನು ತೋರಿಸುತ್ತದೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು – 1. ಸ್ವಾತಂತ್ರ್ಯ ದಿನ15 ಆಗಸ್ಟ್ 2. ಗಣರಾಜ್ಯೋತ್ಸವ 26 ಜನವರಿ 3. ಗಾಂಧಿ ಜಯಂತಿ 2 ಅಕ್ಟೋಬರ್ ಇದು ರಾಷ್ಟ್ರೀಯ ಹಬ್ಬ, ಇದು ರಾಷ್ಟ್ರೀಯ ರಜಾದಿನವೂ ಆಗಿದೆ. ಇದಲ್ಲದೆ, ಶಿಕ್ಷಕರ ದಿನ, ಮಕ್ಕಳ ದಿನವೂ ರಾಷ್ಟ್ರೀಯ ರಜಾದಿನವಾಗಿದೆ, ಇವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಆಚರಿಸಲಾಗುತ್ತದೆ. ಇದಲ

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ