ಗುಪ್ತರ ಸಾಮ್ರಾಜ್ಯ ಗುಪ್ತರ ಏಳಿಗೆಗೆ ಮುನ್ನ ಉತ್ತರ ಭಾರತದ ಪರಿಸ್ಥಿತಿ ಕ್ರಿ.ಶ 150 ರಿಂದ 300 ರವರೆಗೆ ಉತ್ತರ ಭಾರತವನ್ನು ಅನೇಕ ಸಣ್ಣ ಪುಟ್ಟ ರಾಜ್ಯಗಳು ಆಳುತ್ತಿದ್ದವು . ಅವುಗಳಲ್ಲಿ ಕೆಲವು ರಾಜಪ್ರಭುತ್ವವನ್ನು ಇನ್ನು ಕೆಲವು ಗಣರಾಜ್ಯಗಳನ್ನು ಹೊಂದಿದ್ದವು ( ಕುಶಾನರ ಪತನಾನಂತರ ಗುಪ್ತರು ಏಳಿಗೆಗೆ ಬರುವವರೆಗೆ ) a. ರಾಜಪ್ರಭುತ್ವ - ನಾಗರು ,ಅಹಿಚ್ಚತ್ರರು ,ಅಯೋದ್ಯ , ವಾಕಟಕರು b. ಮೌಕರಿಗಳು ಮತ್ತು ಗುಪ್ತರು c. ಗಮರಾಜ್ಯಗಳಲ್ಲಿ - ಅರ್ಜುನಯಾನರು ಮಾಳ್ವರು , ಯಾದೇಯರು ,ಸಿಬಿಗಳು ,ಕುಲುಟರು ಹಾಗೇಯೇ ಪಶ್ಚಿಮ ಭಾರತದಲ್ಲಿ ಕ್ಷತ್ರಪರು ( ರುದ್ರದಾಮನ ) ಹಾಗೂ ದಕ್ಷಿಣದಲ್ಲಿ ಶಾತವಾಹನರು ಏಳಿಗೆ ಹೊಂದಲು ಹವಣಿಸುತ್ತಿದ್ದರು ಈ ರಾಜ್ಯಗಳಲ್ಲೆ ಸ್ವಲ್ಪ ಮಟ್ಟಿಗೆ ಪ್ರಾಮುಖ್ಯತೆಯನ್ನು ಪಡೆದವರು ,ವಾಕಟಕರು ಹಾಗೂ ಗುಪ್ತರು ಗುಪ್ತರು ,ಮೌರ್ಯರು ಮತ್ತು ಶಾತವಾಹನರ ಕಾಲದಲ್ಲಿ ಸಾಮ್ರಜ್ಯದ ಗುಪ್ತಾಚಾರ ಅಧಿಕಾರಿಗಳಾಗಿದ್ದರು ಗುಪ್ತರ ಮೂಲ ಪುರುಷ - ಮಹಾರಾಜ ಶ್ರೀಗುಪ್ತ ಶ್ರೀಗುಪ್ತನ ಮಗನ ಹೆಸರು - ಘಟೋತ್ಕಚ ಗುಪ್ತ ಮಹಾರಾಜ ರೆಂಬ ಬಿರುದನ್ನು ಹೊಂದಿದ್ದವನು - 1 ನೇ ಚಂದ್ರಗುಪ್ತ 1 ನೇ ಚಂದ್ರಗುಪ್ತನ ರಾಜಧಾನಿ - ಪಾಟಲಿಪುತ್ರ 1 ನೇ ಚಂದ್ರಗುಪ್ತನ ಪತ್ನಿಯ ಹೆಸರು - ಲಿಚ್ಚವಿ ವಂಶದ ರಾಜಕುಮಾರಿ ಕುಮಾರ ದೇವಿ 1 ನೇ ಚಂದ್ರಗುಪ್ತನ ಮಗನ ಹೆಸರು - ಸಮುದ್ರಗುಪ್ತ ಸಮುದ್ರಗುಪ್ತ ಗುಪ್ತರ ಪ್ರಸಿದ್ದ ದೊರೆ - ಸಮುದ್ರಗುಪ್ತ
ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಂಶೋಧನಾ ವೇದಿಕೆ. ಶಂಕರ ನಿಂಗನೂರ