ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಂದು ಸಂಜೆಗೊಂದು*ಗಜಲ್...* ಓದಿನೊಂದಿಗೆ ಡಾ. ವ್ಹಾಯ್. ಎಂ.ಯಾಕೋಳ್ಳಿ

ಇಂದು ಸಂಜೆಗೊಂದು*ಗಜಲ್...* ಓದಿನೊಂದಿಗೆ, - ಮೇಳಿ ಹಾಲು ಕುಡಿದ ಅಂಗೈ ಎದೆಗೆ ಮೊಳೆ ಹೊಡೆದು ಶಿಲುಬೆಗೇರಿಸಿದ್ದಾರೆ  ಬೆವರ ಹೊನ್ನಿರಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳನು ನೇಣಿಗೇರಿಸಿದ್ದಾರೆ - ಸೊಂಟ ಬಿದ್ದ ಮುಳ್ಳು ನಾಲಿಗೆಯ ಕುಶಾಲಿ ಮಾತುಗಳು ಒಡಲಾಗ್ನಿ ನಂದಿಸಲಿಲ್ಲ  ಹೆಗಲ ಮೇಲಿನ ಹಸಿರು ಗಿಣಿಗಳನು ಗದರಿಸಿ ಚದುರಿಸುವ ಹುನ್ನಾರ ನಡೆಸಿದ್ದಾರೆ  - ಮೊಳೆತ ಬೆಳೆಸಾಲದ ಇಳುವರಿಗೆ ಹೆದರಿ ಗಳೆ ಸಾಮಾನುಗಳು ಗುಳೆ ಹೊರಟಿವೆ ಬಿಗಿದ ನೆಲದ ಬೆತ್ತಲ ನೆತ್ತಿ ಚೂರಿದ ನೇಗಿಲ ಕುಲಕ್ಕೆ ಹಸಿವಿನ ಬುತ್ತಿ ಹೊರೆಸಿದ್ದಾರೆ - ವಸುಂಧರೆಯ ಹೊಕ್ಕುಳ ಬೇರು ಇದ್ದಿಲು ಗಣಿಗಾರಿಕೆಯಲಿ ಬೂದಿಯಾಗಿದೆ  ರಾಜ ವ್ಯಾಪಾರಿಯಾಗಿ ಮಣ್ಣಿನ ಧ್ಯಾನ ಮಾಡುವ ಮಕ್ಕಳು ಭಿಕಾರಿಯಾಗಿದ್ದಾರೆ - ಅಳಿದುಳಿದವರು ಉಟ್ಟ ಬಟ್ಟೆಯಲಿ ಉರಿವ ಧರೆ ಮೇಲೆ ನೆತ್ತರದ ಹಾದಿ ಮಾಡುತ್ತಿದ್ದಾರೆ ತಟ್ಟೆ ತುಂಬಿಸಿ ಹೊಟ್ಟೆ ಇಂಬಾಗಿಸಿದವರು ರೈತರ ನೋವಿನ ಧ್ವನಿಗೆ ಕಿವುಡಾಗಿದ್ದಾರೆ - ಮಣ್ಣಿನ ಮೂರ್ತಿಗೆ 'ಸಾಚಿ' ನಿತ್ಯ ತಿಳಿನೀರು ಬಸಿದರೂ ಅರೆಹೊಟ್ಟೆ ತುಂಬುತ್ತಿಲ್ಲ ಕಳ್ಳರು ಉಳುವ ಯೋಗಿಯನು  ಉಳ್ಳವರೆದುರಿಗೆ ನೊಗ ಹೊರಿಸಿ ನಿಲ್ಲಿಸಿದ್ದಾರೆ - ಸಹದೇವ ಯರಗೊಪ್ಪ, ಗದಗ ::::::::::::::::::::::::::::::::::::::::::::::::::::::::::::::::::::::::::::::::::: ಗಜಲ್ ವಿವರಣೆ: ಡಾ. ವಾಯ್.ಎಂ.ಯಾಕೊಳ್ಳಿ ನಮ್ಮ ನಡುವಿನ ಶ್ರೇಷ್ಠ ಗಜಲ್ ಕಾರರಲ್ಲಿ ಸಹದೇವ  ಯರಗೊಪ್ಪ ಅವ

ಡಾ. ವ್ಹಾಯ್.ಎಂ.ಯಾಕೊಳ್ಳಿ ಅವರ ಗಜಲ್

ಗಜಲ್ ಹೇಳದೇ ಅದೆಷ್ಟು ಮಾತುಗಳು ನಮ್ಮ  ನಡುವೆ ಉಳಿದು ಹೋದವು ಮನದಲ್ಲಿ ಮುಚ್ಚಿಕೊಂಡೆ ಅದೆಷ್ಟು ಕಾಲ ಮೌನದಿ ಮುರಿದು ಹೋದವು ಹೊರಗೆ ಬರದೆ ಒಳಗೆ ಇರಿಸಿಕೊಂಡ ಪದಗಳೆ ಬೆಂಕಿ ಕೆಂಡವಾಗಿವೆ ಕುದಿವ ಕುಲುಮೆಯದು ಆರಿಸುವ  ದಾರಿ ಸಿಗದೆ ಸರಿದು  ಹೋದವು ಆವ ಲೋಕದ ದೇವತೆ ಕರುಣಿಸಿದಂತೆ ಬಂದು ಮಿಂಚಿ ಮರೆಯಾದೆ ಕೊಟ್ಟ ಕೊಂಡ ಜೀವದೊಡವೆ ಮೌನದಿ ಇಲ್ಲೇ ಉಳಿದು ಹೋದವು ಬರುತಲೆ ಇದ್ದಾರೆ ಕಾಣದ ಲೋಕಕ್ಕೆ ಸಂದರೆಂದು ತಿಳಿದ ಮಂದಿ ಪ್ರಾಣ ತುದಿಯಲಿಡಿದ ಜೀವದ ಹಂಬಲ ತಿಳಿಯದೆ ನಡೆದು ಹೋದವು ಇತಿಹಾಸ ಮರುಕಳಿಸುವದೆಂಬ ಶಾಲೆಯ ಪಾಠ ಮರೆಯದಾದನು ಯಯಾ ತನ್ನ ದಿನಗಳ ಯಜ್ಞ ಕುಂಡಕೆ ಅರ್ಪಿಸಿ ಕಾದ ತಪನೆಗಳು ಸವೆದು ಹೋದವು ಡಾ. ವ್ಹಾಯ್.ಎಂ.ಯಾಕೊಳ್ಳಿ ಕವಿ-ಸಾಹಿತಿ, ಸವದತ್ತಿ